Asianet Suvarna News Asianet Suvarna News

Ramanagar: ಬಾಡಿಗೆ ಪಾವತಿ, ಮಂಚಗಳ ಖರೀ​ದಿ​ಯಲ್ಲಿ ಅಕ್ರಮ!

ಪತ್ನಿ ಮತ್ತಿ​ತ​ರ ಸಂಬಂಧಿ​ಕರ ಹೆಸ​ರಿ​ನಲ್ಲಿ ವಸತಿ ನಿಲ​ಯದ ಬಾಡಿಗೆ ಪಾವತಿ ಹಾಗೂ ಕಾಟ್‌(ಮಂಚ​) ಸೇರಿ​ದಂತೆ ಇತರೆ ಪರಿ​ಕ​ರ​ಗಳ ​ಖ​ರೀ​ದಿ ಪ್ರಕ್ರಿ​ಯೆ​ಯಲ್ಲಿ ನಕಲಿ ಬಿಲ್‌ ಸೃಷ್ಟಿಸಿ ಕೋಟ್ಯಂತರ ರು. ಅಕ್ರಮ ನಡೆ​ಸಿ​ರುವುದು ರಾಮ​ನ​ಗರ ತಾಲೂಕು ಹಿಂದು​ಳಿದ ವರ್ಗ​ಗಳ ಕಲ್ಯಾ​ಣಾ​ಧಿ​ಕಾ​ರಿ​ಗಳ ಕಚೇ​ರಿ​ಯಲ್ಲಿ ಬೆಳ​ಕಿಗೆ ಬಂದಿದೆ.

Fraud in Rent Pay And Couches Purchasing snr
Author
First Published Dec 23, 2022, 6:30 AM IST

 -ಎಂ.ಅ​ಫ್ರೊಜ್‌ ಖಾನ್‌

  ರಾಮ​ನ​ಗರ :  ಪತ್ನಿ ಮತ್ತಿ​ತ​ರ ಸಂಬಂಧಿ​ಕರ ಹೆಸ​ರಿ​ನಲ್ಲಿ ವಸತಿ ನಿಲ​ಯದ ಬಾಡಿಗೆ ಪಾವತಿ ಹಾಗೂ ಕಾಟ್‌(ಮಂಚ​) ಸೇರಿ​ದಂತೆ ಇತರೆ ಪರಿ​ಕ​ರ​ಗಳ ​ಖ​ರೀ​ದಿ ಪ್ರಕ್ರಿ​ಯೆ​ಯಲ್ಲಿ ನಕಲಿ ಬಿಲ್‌ ಸೃಷ್ಟಿಸಿ ಕೋಟ್ಯಂತರ ರು. ಅಕ್ರಮ ನಡೆ​ಸಿ​ರುವುದು ರಾಮ​ನ​ಗರ ತಾಲೂಕು ಹಿಂದು​ಳಿದ ವರ್ಗ​ಗಳ ಕಲ್ಯಾ​ಣಾ​ಧಿ​ಕಾ​ರಿ​ಗಳ ಕಚೇ​ರಿ​ಯಲ್ಲಿ ಬೆಳ​ಕಿಗೆ ಬಂದಿದೆ.

ಹಿಂದು​ಳಿದ ವರ್ಗ​ಗಳ ಕಲ್ಯಾ​ಣಾ​ಧಿ​ಕಾ​ರಿ​ಗಳ ಕಚೇ​ರಿ​ಯಲ್ಲಿ ಹಣ (Money)  ದುರು​ಪ​ಯೋಗದ ವಾಸನೆ ಬರು​ತ್ತಿ​ದ್ದಂತೆ ಲೆಕ್ಕ ಪರಿ​ಶೋ​ಧನೆ ಕಾರ್ಯವೂ ಮುಂದು​ವ​ರಿ​ದಿದ್ದು, ಈಗಾ​ಗಲೇ ಅಕ್ರಮ ಸಾಬೀ​ತಾದ ಹಿನ್ನೆ​ಲೆ​ಯಲ್ಲಿ ಡಿ ಗ್ರೂಪ್‌ ನೌಕರ ಸೇರಿ​ದಂತೆ ಮೂವ​ರನ್ನು ಅಮಾ​ನತು ಮಾಡ​ಲಾ​ಗಿದೆ.

2016-19ರಿಂದ 2017- ಪ್ರಸ್ತತವ​ರೆಗೂ ಕಚೇ​ರಿ​ಯಲ್ಲಿ ವಸತಿ ನಿಲ​ಯ​ಗಳ ಬಾಡಿಗೆ ಹಣ ಪಾವತಿ, ವಿದ್ಯಾ​ರ್ಥಿ​ಗ​ಳಿ​ಗಾಗಿ (Students)  ಕಾಟ್‌ಗಳ ಖರೀದಿ, ಯುಪಿಎಸ್‌, ಲೇಸರ್‌ ಜೆಟ್‌ ಪ್ರಿಂಟರ್ಸ್‌ ಸೇರಿ​ದಂತೆ ಇತರೆ ಪರಿ​ಕ​ರ​ಗಳನ್ನು ಕಡಿಮೆ ಬೆಲೆಗೆ ಖರೀ​ದಿಸಿ ಇಲಾ​ಖೆಗೆ ಹೆಚ್ಚಿನ ಮೊತ್ತ ನಮೂ​ದಿಸಿರುವ ನಕಲಿ ಬಿಲ್‌ಗಳನ್ನು ಸಲ್ಲಿ​ಸ​ಲಾ​ಗಿದೆ. ಅಲ್ಲದೆ, ಖಜಾನೆ - 2 ಡಿಎಸ್‌ಸಿ ಕೀಗ​ಳನ್ನು ಅಕ್ರ​ಮ​ವಾಗಿ ಬಳಸಿ ಸರ್ಕಾ​ರದ ಹಣ​ವನ್ನು ದುರು​ಪ​ಯೋಗ ಪಡಿ​ಸಿ​ಕೊಂಡಿ​ದ್ದಾರೆ.

ಅಧಿ​ಕಾ​ರಿ​ಗಳೇ ನಕಲಿ ಬಿಲ್‌ ಬುಕ್‌ ತಯಾ​ರಿಸಿ ಅದ​ರಲ್ಲಿ ಟಿನ್‌ ನಂಬರ್‌, ಮೊಬೈಲ್‌ ನಂಬರ್‌ ಉಲ್ಲೇಖಿ​ಸು​ವು​ದರ ಜೊತೆಗೆ ಖರೀ​ದಿ​ಸಿದ ಪರಿ​ಕ​ರ​ಗ​ಳಿಗೆ ಸಿಜಿ​ಎಸ್‌ಟಿ ಹಾಗೂ ಎಸ್‌ ಜಿಎಸ್‌ಟಿ ಹಾಕಿರುವ ಬಿಲ್‌ಗಳನ್ನು ಇಲಾ​ಖೆಗೆ ಸಲ್ಲಿಸಿದ್ದಾರೆ. ಈ ಅಕ್ರ​ಮ​ಗ​ಳಿಗೆ ಹಿರಿಯ ಅಧಿ​ಕಾ​ರಿ​ಗಳೂ ಸಾಥ್‌ ನೀಡಿ​ರು​ವುದು ಸಾಕಷ್ಟುಅನು​ಮಾ​ನ​ಗ​ಳನ್ನು ಮೂಡಿ​ಸಿವೆ. ಹಿಂದು​ಳಿದ ವರ್ಗ​ಗ​ಳ ಕಲ್ಯಾಣ ಇಲಾ​ಖೆ​ಯಡಿ ತಾಲೂ​ಕಿ​ನಲ್ಲಿ ಮೆಟ್ರಿಕ್‌ ಪೂರ್ವ ವಿದ್ಯಾರ್ಥಿ ನಿಲಯ ಹಾಗೂ ಮೆಟ್ರಿಕ್‌ ನಂತ​ರದ ವಿದ್ಯಾರ್ಥಿ ನಿಲ​ಯ​ಗಳ ಹಾಗೂ ಅನು​ದಾ​ನಿತ ವಿದ್ಯಾರ್ಥಿ ನಿಲ​ಯ​ಗ​ಳ ಪೈಕಿ ಬಹು​ತೇಕ ಸರ್ಕಾರಿ ಹಾಗೂ ಕೆಲವು ಖಾಸಗಿ ಕಟ್ಟ​ಡ​ಗ​ಳಲ್ಲಿ ನಡೆ​ಯು​ತ್ತಿವೆ.

ವಸತಿ ನಿಲಯ ನಡೆ​ಯು​ತ್ತಿ​ರುವ ಖಾಸಗಿ ಕಟ್ಟ​ಡ​ಗ​ಳನ್ನು ಮೊದಲೇ ಪತ್ನಿ ಅಥವಾ ಸಂಬಂಧಿ​ಕರ ಹೆಸ​ರಿಗೆ ಮೂಲ ಮಾಲೀ​ಕ​ನಿಂದ ಬಾಡಿಗೆ ಕರಾರು ಮಾಡಿ​ಕೊಂಡಿ​ರು​ವುದು. ಆ ಹೆಸ​ರಿ​ನಲ್ಲಿ ವಸತಿ ನಿಲ​ಯದ ಬಾಡಿಗೆ ದರ​ವೆಂದು ಹಣವನ್ನು ಖಾತೆಗೆ ವರ್ಗಾ​ವಣೆ ಮಾಡ​ಲಾ​ಗಿದೆ. ಅಲ್ಲದೆ, ವಸತಿ ನಿಲ​ಯ​ಗ​ಳಲ್ಲಿ ವಿದ್ಯಾ​ರ್ಥಿ​ಗ​ಳಿ​ಗಾಗಿ ಖರೀ​ದಿ​ಸುವ ಒಂದು ಟೂ ಟೈರ್‌ ಕಾಟ್‌ ನ ಬೆಲೆ 7 ರಿಂದ 8 ಸಾವಿರ ರುಪಾಯಿ ಆಗು​ತ್ತದೆ. ಆದರೆ, ಅಧಿ​ಕಾ​ರಿ​ಗಳು ಒಂದು ಕಾಟ್‌ ನ ಬೆಲೆ 16,500 ರುಪಾಯಿ ಎಂದು ನಮೂ​ದಿಸಿ ಇಲಾ​ಖೆಗೆ ನಕಲಿ ಬಿಲ್‌ ಸಲ್ಲಿಸಿದ್ದಾರೆ.

ಎರಡು ವರ್ಷಗಳ ಹಿಂದೆ​ಯಷ್ಟೇ ತಾಲೂ​ಕಿ​ನ​ಲ್ಲಿ​ರುವ ಎಲ್ಲ ವಸತಿ ನಿಲ​ಯ​ಗ​ಳಿಗೆ ಸುಮಾರು 350 ಕಾಟ್‌ ಗಳನ್ನು ಖರೀದಿ​ಸಿದ್ದು, ಇಲ್ಲಿ ಸುಮಾರು 58 ಲಕ್ಷ ರು. ಅಕ್ರಮ ನಡೆ​ದಿದೆ. ಹೀಗೆ ಕಚೇ​ರಿ​ಯಲ್ಲಿ ಹಣ ದುರು​ಪ​ಯೋಗ ಪಡಿ​ಸಿ​ಕೊಂಡಿ​ರುವ ಸಾಕಷ್ಟುನಿದ​ರ್ಶ​ನ​ಗ​ಳಿದ್ದು, ​ಲೆಕ್ಕ ಪರಿ​ಶೋ​ಧ​ನೆ​ಯಿಂದ ಒಂದೊಂದೇ ಅಕ್ರ​ಮ​ಗಳು ಬಯ​ಲಿಗೆ ಬರು​ತ್ತಿವೆ. ಮಾತೃ ಇಲಾ​ಖೆ​ಯಿಂದ ಹಿಂದು​ಳಿದ ವರ್ಗ​ಗಳ ಕಲ್ಯಾ​ಣಾ​ಧಿ​ಕಾ​ರಿ​ಗಳ ಕಚೇರಿಗೆ ನಿಯೋ​ಜ​ನೆ​ಗೊಂಡು ಇಲಾ​ಖೆ​ಯಲ್ಲಿ ಇದ್ದಷ್ಟುದಿನ ಸಾಕಷ್ಟುಅಕ್ರಮ ಎಸಗಿರುವ ತಾಲೂಕು ವಿಸ್ತ​ರ​ಣಾ​ಧಿ​ಕಾ​ರಿ​ಯಾಗಿದ್ದ ಅಧಿ​ಕಾರಿ ಬೇರೆ ತಾಲೂ​ಕಿಗೆ ವರ್ಗಾ​ವಣೆ ಆಗಿ​ದ್ದಾರೆ. ಇದೀಗ ಸರ್ಕಾರಿ ನೌಕ​ರರ ಸಂಘದಲ್ಲಿ ಉನ್ನತ ಸ್ಥಾನ ಅಲಂಕ​ರಿಸಿರುವ ಆ ಅಧಿ​ಕಾರಿ ಬಚಾವ್‌ ಆಗಲು ತನ್ನ ಪ್ರಭಾವ ಬಳಸುತ್ತಿ​ದ್ದಾರೆ.

ಹಣ ದುರ್ಬಳಕೆ ಹಾಗೂ ಕರ್ತವ್ಯ ನಿರ್ಲ​ಕ್ಷ್ಯ

ರಾಮ​ನ​ಗರ ತಾಲೂಕು ಹಿಂದು​ಳಿದ ವರ್ಗ​ಗಳ ಕಲ್ಯಾ​ಣಾ​ಧಿ​ಕಾ​ರಿ​ಗಳ ಕಚೇರಿಯಲ್ಲಿ ಹಣ ದುರು​ಪ​ಯೋಗ ಹಾಗೂ ಕರ್ತವ್ಯ ನಿರ್ಲ​ಕ್ಷ್ಯದ ಹಿನ್ನೆ​ಲೆ​ಯಲ್ಲಿ ವಿಸ್ತ​ರ​ಣಾ​ಧಿ​ಕಾರಿ ಎಂ.ರ​ವಿ​ಕು​ಮಾರ್‌, ಕಲ್ಯಾ​ಣಾ​ಧಿ​ಕಾರಿ ಎಸ್‌.ಸಿ​ದ್ದ​ರಾಜು ಹಾಗೂ ಡಿ ಗ್ರೂಪ್‌ ನೌಕರ ಎನ್‌.ಮಂಜು​ನಾಥ್‌ ಅವ​ರನ್ನು ಸೇವೆ​ಯಿಂದ ಅಮಾ​ನ​ತುಗೊ​ಳಿಸಿ ಇಲಾಖೆ ಆಯು​ಕ್ತರು ಆದೇಶ ಹೊರ​ಡಿ​ಸಿ​ದ್ದಾರೆ.

-ವಿಸ್ತ​ರ​ಣಾ​ಧಿ​ಕಾರಿ ಎಂ.ರ​ವಿ​ಕು​ಮಾರ್‌ ಅವ​ರನ್ನು ಕಚೇ​ರಿ​ಯಲ್ಲಿ ಅನು​ದಾನ ಬಿಡು​ಗಡೆ, ಖರ್ಚು ವೆಚ್ಚ, ನಗದು ಪುಸ್ತಕ ಪರಿ​ಶೀ​ಲನೆ, ಬಿಲ್‌ ತಯಾ​ರಿಕೆ, ಬಿಲ್‌ ಪರಿ​ಶೀ​ಲನೆ, ಕಚೇ​ರಿಯ ಲೆಕ್ಕ​ಪ​ತ್ರ​ಗಳ ಹಾಗೂ ಅನು​ದಾ​ನ​ಗಳ ಒಟ್ಟಾರೆ ಮೇಲ್ವಿ​ಚಾ​ರಣೆ ಹಾಗೂ ನಿರ್ವ​ಹ​ಣೆ​ಯಲ್ಲಿ ಕರ್ತವ್ಯ ನಿರ್ಲಕ್ಷ್ಯ ಮತ್ತು ಬೇಜ​ವಾ​ಬ್ದಾರಿ ತೋರಿ​ಸಿ​ರು​ವುದು. ಅಡುಗೆ ಸಿಬ್ಬಂದಿ ಅನ​ಧಿ​ಕೃ​ತ​ವಾಗಿ ಖಜಾ​ನೆ​ಯಿಂದ ಅಪಾರ ಮೊತ್ತದ ಹಣ ಸೆಳೆ​ದಿ​ರು​ವುದು ಮೇಲ್ನೋ​ಟಕ್ಕೆ ಕಂಡು ಬಂದಿದೆ. ಈ ಹಿನ್ನೆ​ಲೆ​ಯಲ್ಲಿ ಅಸ​ಮ​ರ್ಪಕ ಕಾರ್ಯ​ನಿ​ರ್ವ​ಹಣೆ, ಕರ್ತವ್ಯ ನಿರ್ಲ​ಕ್ಷತೆ ಆರೋ​ಪ​ಗಳ ಹಿನ್ನೆ​ಲೆ​ಯಲ್ಲಿ ಅಮಾ​ನತ್ತು ಮಾಡ​ಲಾ​ಗಿದೆ.

-ತಾಲೂಕು ಹಿಂದುಳಿದ ವರ್ಗ​ಗಳ ಕಲ್ಯಾ​ಣಾ​ಧಿ​ಕಾರಿ ಎಸ್‌ .ಸಿ​ದ್ದ​ರಾಜು ಅವ​ರನ್ನು ಕಚೇರಿ ಕೆಲ​ಸಕ್ಕೆ ಅಡುಗೆ ಸಿಬ್ಬಂದಿ​ಯನ್ನು ನಿಯ​ಮ​ಬಾ​ಹಿ​ರ​ವಾಗಿ ನೇಮಕ, ಖಜಾ​ನೆ​ಯಿಂದ ಅನ​ಧಿ​ಕೃ​ತ​ವಾಗಿ ಅಪಾರ ಮೊತ್ತದ ಹಣ ಸೆಳೆ​ದಿ​ರು​ವ ಆರೋ​ಪದ ಹಿನ್ನೆ​ಲೆ​ಯಲ್ಲಿ ಇಲಾಖೆ ವಿಚಾ​ರಣೆಗೊಳ​ಪಟ್ಟು ಅಮಾ​ನ​ತ್ತಿ​ನಲ್ಲಿ ಇಡ​ಲಾ​ಗಿದೆ.

-ಇನ್ನು ಡಿ ಗ್ರೂಪ್‌ ನೌಕರ ಎನ್‌.ಮಂಜು​ನಾಥ ಅವ​ರನ್ನು ನಕಲಿ ಕೀಗಳನ್ನು ಬಳಸಿ ಬೀರು​ವಿ​ನ​ಲ್ಲಿದ್ದ ಹಣ ಸೆಳೆ​ಯುವ ಅಧಿ​ಕಾ​ರಿಯ ಖಜಾನೆ - 2 ರ ಡಿಎಸ್‌ ಸಿ ಕೀ ಗಳನ್ನು ಸಹ ಕದ್ದು 2019 ರಿಂದ 2022ರವ​ರೆಗೆ ಪತ್ನಿ ಮತ್ತಿ​ತ​ರರ ಸಂಬಂಧಿ​ಕರ ಹೆಸ​ರಿ​ನಲ್ಲಿ ಕಚೇರಿ ಮತ್ತು ವಸತಿ ನಿಲ​ಯದ ಬಾಡಿಗೆ , ವಿದ್ಯುತ್‌ ದರ​ವೆದು ಅನು​ದಾ​ನ​ವನ್ನು ದುರು​ಪ​ಯೋಗ ಪಡಿ​ಸಿ​ಕೊಂಡಿ​ರು​ವ ಆರೋ​ಪ​ಗಳ ಹಿನ್ನೆ​ಲೆ​ಯಲ್ಲಿ ಅಮಾ​ನತ್ತು ಮಾಡ​ಲಾ​ಗಿದೆ.

ರಾಮ​ನ​ಗರ ತಾಲೂಕು ಹಿಂದು​ಳಿದ ವರ್ಗ​ಗಳ ಕಲ್ಯಾ​ಣಾ​ಧಿ​ಕಾ​ರಿ​ಗಳ ಕಚೇ​ರಿ​ಯಲ್ಲಿ ನಾಲ್ಕೈದು ವರ್ಷ​ಗ​ಳಿಂದ ವಸತಿ ನಿಲಯ ಬಾಡಿಗೆ - ವಿದ್ಯುತ್‌ ದರವೆಂದು ಅನು​ದಾನ ದುರು​ಪ​ಯೋಗವಾಗಿ​ರುವ ಆರೋ​ಪದ ಹಿನ್ನೆ​ಲೆ​ಯಲ್ಲಿ ಲೆಕ್ಕ ಪರಿ​ಶೋ​ಧನೆ ನಡೆದಿದೆ. ಆರೋಪ ಸಾಬೀ​ತಾದ ಹಿನ್ನೆ​ಲೆ​ಯಲ್ಲಿ ವಿಸ್ತ​ರ​ಣಾ​ಧಿ​ಕಾರಿ, ಕಲ್ಯಾ​ಣಾ​ಧಿ​ಕಾರಿ ಹಾಗೂ ಡಿ ಗ್ರೂಪ್‌ ನೌಕರನನ್ನು ಅಮಾ​ನತ್ತು ಮಾಡ​ಲಾ​ಗಿದೆ. ನಿನ್ನೆ​ಯಷ್ಟೇ ಲೆಕ್ಕ ಪರಿ​ಶೋ​ಧನಾ ಕಾರ್ಯ ಮುಗಿದಿದೆ.

-ಮಹ​ದೇ​ವ​ಸ್ವಾಮಿ, ಜಿಲ್ಲಾ ಹಿಂದು​ಳಿದ ವರ್ಗ​ಗಳ ಕಲ್ಯಾ​ಣಾ​ಧಿ​ಕಾರಿ, ರಾಮ​ನ​ಗ​ರ

Follow Us:
Download App:
  • android
  • ios