Asianet Suvarna News Asianet Suvarna News

'ಡಿ.ಕೆ.​ಶಿ​ವ​ಕು​ಮಾರ್‌ ಸಿಎಂ ಮಾಡಲು ಎಚ್‌ಡಿಕೆ ಕೈಜೋ​ಡಿಸಲಿ'

ಡಿ.ಕೆ.​ಶಿ​ವ​ಕು​ಮಾರ್‌ ಹಳೆಯ ವೈರ​ತ್ವ​ವನ್ನು ಮರೆತು ಕುಮಾ​ರ​ಸ್ವಾಮಿ ಮುಖ್ಯ​ಮಂತ್ರಿ​ಯಾ​ಗಲು ಬೆಂಬಲ ನೀಡಿ​ದ್ದರು| ಈಗ ಕುಮಾ​ರ​ಸ್ವಾ​ಮಿ ಮೇಲೆ ಆ ಋುಣ​ವಿದೆ| ರಾಜ​ಕೀ​ಯದ ಎಂತಹ ಸಂದ​ರ್ಭ​ದ​ಲ್ಲಿಯೂ ಕುಮಾ​ರ​ಸ್ವಾ​ಮಿ​, ಡಿ.ಕೆ.​ಶಿ​ವ​ಕು​ಮಾರ್‌ ಕೈ ಬಿಡ​ಬಾ​ರದು| ಸ್ಥಳೀಯವಾಗಿ ನಮ್ಮಲ್ಲಿ ಕೆಲ ಹಗ್ಗಜಗ್ಗಾಟ ಇರಲಿದೆ ಅಷ್ಟೇ. ಆದರೆ, ಮೇಲ್ಮಟ್ಟದಲ್ಲಿ ಜೆಡಿಎಸ್‌-ಕಾಂಗ್ರೆಸ್‌ ಒಂದೆಯಾಗಿದೆ|

Former MLA H C Balakrishna Talks Over D K Shivakumar
Author
Bengaluru, First Published May 21, 2020, 12:39 PM IST

ರಾಮನಗರ(ಮೇ.21): ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.​ಶಿ​ವ​ಕು​ಮಾರ್‌ ಅವ​ರನ್ನು ಮುಖ್ಯ​ಮಂತ್ರಿ​ಗ​ಳ​ನ್ನಾಗಿ ಮಾಡಲು ಮಾಜಿ ಸಿಎಂ ಕುಮಾ​ರ​ಸ್ವಾಮಿ ಕೈಜೋ​ಡಿಸಿ ಋುಣ ತೀರಿ​ಸ​ಬೇಕು ಎಂದು ಮಾಜಿ ಶಾಸಕ ಎಚ್‌.ಸಿ.​ಬಾ​ಲ​ಕೃಷ್ಣ ತಿಳಿ​ಸಿದ್ದಾರೆ.

ಗುರು​ವಾರ ಸುದ್ದಿ​ಗೋ​ಷ್ಠಿ​ಯಲ್ಲಿ ಮಾತ​ನಾ​ಡಿದ ಅವರು, ಡಿ.ಕೆ.​ಶಿ​ವ​ಕು​ಮಾರ್‌ ಅವರು ಹಳೇಯ ವೈರ​ತ್ವ​ವನ್ನು ಮರೆತು ಕುಮಾ​ರ​ಸ್ವಾಮಿ ಅವರು ಮುಖ್ಯ​ಮಂತ್ರಿ​ಯಾ​ಗಲು ಬೆಂಬಲ ನೀಡಿ​ದ್ದರು. ಈಗ ಕುಮಾ​ರ​ಸ್ವಾ​ಮಿ ಮೇಲೆ ಆ ಋುಣ​ವಿದೆ ಎಂದರು.

ಮಗು, ವೃದ್ಧೆಯನ್ನ ತಿಂದು ತೇಗಿದ ನರ​ಭ​ಕ್ಷಕ ಚಿರತೆ ಕೊಲ್ಲಲು ಹೆಚ್ಚಿದ ಒತ್ತಡ

ರಾಜ​ಕೀ​ಯದ ಎಂತಹ ಸಂದ​ರ್ಭ​ದ​ಲ್ಲಿಯೂ ಕುಮಾ​ರ​ಸ್ವಾ​ಮಿ​, ಡಿ.ಕೆ.​ಶಿ​ವ​ಕು​ಮಾರ್‌ ಅವರ ಕೈ ಬಿಡ​ಬಾ​ರದು. ಸ್ಥಳೀಯವಾಗಿ ನಮ್ಮಲ್ಲಿ ಕೆಲ ಹಗ್ಗಜಗ್ಗಾಟ ಇರಲಿದೆ ಅಷ್ಟೇ. ಆದರೆ, ಮೇಲ್ಮಟ್ಟದಲ್ಲಿ ಜೆಡಿಎಸ್‌-ಕಾಂಗ್ರೆಸ್‌ ಒಂದೆಯಾಗಿದೆ. ನಾವು ಕುಮಾರಸ್ವಾಮಿ ಅವರನ್ನು ಸಿಎಂ ಮಾಡಿದ್ದೇವೆ. ಈಗ ಅವರು ಡಿ.ಕೆ.ಶಿವಕುಮಾರ್‌ ಅವ​ರನ್ನು ಸಿಎಂ ಮಾಡಲು ಕೈಜೋ​ಡಿ​ಸ​ಬೇಕು ಎಂದು ಹೇಳಿ​ದರು.
 

Follow Us:
Download App:
  • android
  • ios