ಯಾದಗಿರಿ ಮಾಜಿ ಶಾಸಕ, ಉಚಿತ ಚಿಕಿತ್ಸೆಗಳ ಮೂಲಕ 'ಬಡವರ ಪಾಲಿನ ದೇವರು' ಎಂದೇ ಖ್ಯಾತರಾದ ಡಾ.ವೀರಬಸವಂತರೆಡ್ಡಿ ಮುದ್ದಾಳ್‌ ನಿಧನ 

ಯಾದಗಿರಿ(ಜು.23): ಯಾದಗಿರಿ ಮಾಜಿ ಶಾಸಕ, ಉಚಿತ ಚಿಕಿತ್ಸೆಗಳ ಮೂಲಕ 'ಬಡವರ ಪಾಲಿನ ದೇವರು' ಎಂದೇ ಖ್ಯಾತರಾದ ಡಾ.ವೀರಬಸವಂತರೆಡ್ಡಿ ಮುದ್ದಾಳ್‌ (73) ಸೋಮವಾರ ಕೊನೆಯುಸಿರೆಳೆದಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅನಾರೋಗ್ಯದಿಂದ ಬಳಲುತ್ತಿದ್ದ ಅವರು ತಮ್ಮದೇ ವಿಬಿಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. 1952 ಡಿ.31ರಂದು ಮುತ್ನಾಳ್ ಗ್ರಾಮ ದಲ್ಲಿ ಜನಿಸಿದ ವೀರಬಸವಂತ ರೆಡ್ಡಿ ಮಹಾದೇವಪ್ಪ ರಾಂಪೂರೆ ಕಾಲೇಜಲ್ಲಿ ಎಂಬಿಬಿಎಸ್, ಎಂಎಸ್ ಪದವಿ ಪೂರೈಸಿದ್ದರು. 

ರೇಣುಕಾಸ್ವಾಮಿ ಕೊಲೆ ಪ್ರಕರಣ: ಎ4 ಆರೋಪಿ ರಘು ತಾಯಿ ನಿಧನ

ಮುಂಬೈನ ಟಾಟಾ ಕ್ಯಾನ್ಸರ್ ಆಸ್ಪತ್ರೆಯಲ್ಲಿ ವೈದ್ಯವೃತ್ತಿ ಆರಂಭಿಸಿದ ಅವರು, ನಂತರ ವಿಜಯಪುರದ ಬಿಎಲ್‌ಡಿಇ ಮೆಡಿಕಲ್ ಕಾಲೇಜಿನಲ್ಲಿ ಸೇವೆ ಸಲ್ಲಿಸಿದ್ದಾರೆ. ಸಂಕೀರ್ಣ ಶಸ್ತ್ರಚಿಕಿತ್ಸೆಗಳನ್ನು ಸುಲಭವಾಗಿ ಮಾಡಿ ಸಾವಿರಾರು ಜೀವ ಉಳಿಸಿದ್ದು, ಬಡರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡುತ್ತಿದ್ದರು.