Asianet Suvarna News Asianet Suvarna News

ಇದು ಕುಮಾರಸ್ವಾಮಿ, ದೇವೇಗೌಡರ ದೌರ್ಭಾಗ್ಯ : ತಂದೆ, ತಮ್ಮನ ವಿರುದ್ಧವೇ ಕುಟುಕಿದ ರೇವಣ್ಣ

ಸಹೋದರ ಕುಮಾರಸ್ವಾಮಿ ಹಾಗೂ ತಂದೆ ಎಚ್.ಡಿ.ದೇವೇಗೌಡರ ವಿರುದ್ಧವೇ ಎಚ್.ಡಿ ರೇವಣ್ಣ ಗರಂ ಆಗಿದ್ದಾರೆ.

Former minister HD Revanna Slams Mandya Shivaramegowda
Author
Bengaluru, First Published Sep 23, 2019, 2:23 PM IST

ಹಾಸನ (ಸೆ.23):  ಕಸದ ಬುಟ್ಟಿಯಲ್ಲಿ ಇದ್ದವರನ್ನು ತೆಗೆದುಕೊಂಡು ಗೆಲ್ಲಿಸುತ್ತಾರೆ ಇದು ಕುಮಾರಸ್ವಾಮಿ ಹಾಗೂ ದೇವೇಗೌಡರ ದೌರ್ಭಾಗ್ಯ  ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಹೇಳಿದ್ದಾರೆ. 

ದೇವೇಗೌಡರದ್ದು, ಕುಮಾರಸ್ವಾಮಿ ಅವರದ್ದು ಹಿತ್ತಾಳೆ ಕಿವಿ ಎನ್ನುವ ಮಂಡ್ಯದ ಮಾಜಿ ಸಂಸದ ಶಿವರಾಮೇಗೌಡ ಹೇಳಿಕೆಗೆ ಹಾಸನದಲ್ಲಿಂದು ಎಚ್.ಡಿ.ರೇವಣ್ಣ ಪ್ರತಿಕ್ರಿಯಿಸಿದ್ದಾರೆ. 

ಗ್ರೌಂಡ್ ನೋಡಿ ಬೆಳೆಸಬೇಕಾಗುತ್ತದೆ. ಅದಾವುದನ್ನೂ ನೋಡದೇ ಹೋದರೆ ಹೀಗಾಗುತ್ತದೆ ಎಂದು ರೇವಣ್ಣ ಕಿಡಿಕಾರಿದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಹಾಸನವನ್ನು ರೇವಣ್ಣಗೆ ಬರೆದುಕೊಟ್ಟಿಲ್ಲ ಎನ್ನುವ ಸಚಿವ ಮಾಧುಸ್ವಾಮಿ ಹೇಳಿಕೆಗೂ ಪ್ರತಿಕ್ರಿಯಿಸಿದ ರೇವಣ್ಣ, ನನಗೆ ಬೇಕಾಗಿರುವುದು ನನ್ನ ಜಿಲ್ಲೆಯ ಅಭಿವೃದ್ಧಿಯಷ್ಟೆ. ಹಾಸನ ನನ್ನ ಸಾಮ್ರಾಜ್ಯ ಎಂದು ಎಲ್ಲಿಯೂ ಹೇಳಿಲ್ಲ ಎಂದು ಟಾಂಗ್ ನೀಡಿದರು. 

Follow Us:
Download App:
  • android
  • ios