Asianet Suvarna News Asianet Suvarna News

ಕುತೂಹಲ ಕೆರ​ಳಿ​ಸಿದ ರಾಜಕೀಯ : ಕೈ ವಿರುದ್ಧ ಜೆಡಿಎಸ್ ರಣತಂತ್ರ

ರಾಜಕೀಯ ರಣಾಂಗಣದಲ್ಲಿ ಕುತೂಹಲ ಮೂಡಿದೆ. ಕೈ ವಿರುದ್ಧ ಜೆಡಿಎಸ್ ರಣತಂತ್ರ ರೂಪಿಸುತ್ತಿದೆ. ಒಟ್ಟಿನಲ್ಲಿ ಇಲ್ಲಿನ ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ. 

Fight Between Congress JDS in Bidadi Muncipolity Election snr
Author
Bengaluru, First Published Nov 3, 2020, 12:17 PM IST

ಎಂ.ಅಫ್ರೋಜ್ ಖಾನ್‌

 ರಾಮ​ನ​ಗರ (ನ.03):  ಹಾಲಿ ಮತ್ತು ಮಾಜಿ ಶಾಸ​ಕರ ಪ್ರತಿ​ಷ್ಠೆ​ಯಿಂದಾಗಿ ಕುತೂ​ಹಲ ಕೆರ​ಳಿ​ಸಿ​ರುವ ನ. 5ರಂದು ನಡೆ​ಯುವ ಬಿಡದಿ ಪುರ​ಸಭೆ ಅಧ್ಯಕ್ಷ -ಉಪಾ​ಧ್ಯಕ್ಷ ಸ್ಥಾನ ಚುನಾ​ವಣೆಯಲ್ಲಿ ಕಾಂಗ್ರೆಸ್‌ ಪಕ್ಷ ತನ್ನ ಸದ​ಸ್ಯ​ರಿಗೆ ನೀಡಿ​ರುವ ವ್ಹಿಪ್‌ ಅನ್ನೇ ವ್ಯರ್ಥ​ಗೊ​ಳಿ​ಸಲು ಜೆಡಿ​ಎಸ್‌ ರಣ​ತಂತ್ರ ರೂಪಿ​ಸುತ್ತಿ​ದೆ.

ಪುರ​ಸ​ಭೆ​ಯಲ್ಲಿ ಬಿಸಿಎ - ಮಹಿ​ಳೆಗೆ ಮೀಸ​ಲಾ​ಗಿ​ರುವ ಅಧ್ಯಕ್ಷ ಸ್ಥಾನಕ್ಕೆ ಜೆಡಿ​ಎಸ್‌ನಿಂದ ಸರ​ಸ್ವತಿ, ಕಾಂಗ್ರೆಸ್‌ನಲ್ಲಿ ಚಂದ್ರ​ಕಲಾ ನಾಗೇಶ್‌ ಆಕಾಂಕ್ಷಿ​ಗ​ಳಾ​ಗಿ​ದ್ದಾರೆ. ಸಾಮಾನ್ಯ ವರ್ಗಕ್ಕೆ ಮೀಸ​ಲಾ​ಗಿ​ರುವ ಉಪಾ​ಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿ​ತರ ಸಂಖ್ಯೆ ಹೆಚ್ಚಾ​ಗಿರುವ ಕಾರಣ ಯಾರ ಹೆಸರು ಅಂತಿ​ಮ​ಗೊಂಡಿ​ಲ್ಲ. ಆದರೆ, ಪುರ​ಸಭೆ ಅಧಿ​ಕಾರ ಹಿಡಿ​ಯುವ ನಿಟ್ಟಿ​ನಲ್ಲಿ ಕಾಂಗ್ರೆಸ್‌ ಪಕ್ಷ ತನ್ನ 11 ಮಂದಿ ಸದ​ಸ್ಯ​ರಿಗೆ ವ್ಹಿಪ್‌ ಜಾರಿ ಮಾಡಿದೆ. ಆದರೂ ಶಾಸಕ ಎ. ಮಂಜು​ನಾಥ್‌ ಅವ​ರೊಂದಿಗೆ ಗುರು​ತಿ​ಸಿ​ಕೊಂಡಿ​ರುವ ಕೈ ಸದ​ಸ್ಯರು ಜೆಡಿ​ಎಸ್‌ ಸದ​ಸ್ಯ​ರೊಂದಿಗೆ ಪ್ರವಾ​ಸಕ್ಕೆ ತೆರ​ಳಿ​ದ್ದಾ​ರೆ.

ಇದೆಂತಾ ನಾಚಿಕೆಗೇಡು : ಮತ್ತೆ ಸಿಟ್ಟಾದ ಎಚ್‌.ಡಿ. ರೇವಣ್ಣ ..

ಕಾಂಗ್ರೆಸ್‌ ಪಕ್ಷ ನೀಡಿ​ರುವ ವ್ಹಿಪ್‌ ಸದ​ಸ್ಯ​ರಿಗೆ ಅನ್ವ​ಯವೇ ಆಗ​ದಂತೆ ಹಾಗೂ ಪಕ್ಷಾಂತರ ನಿಷೇಧ ಕಾಯ್ದೆ ತೂಗು​ಕತ್ತಿಯಿಂದ ಬಚಾವ್‌ ಮಾ​ಡುವ ನಿಟ್ಟಿ​ನಲ್ಲಿ ಜೆಡಿ​ಎಸ್‌ ಶಾಸಕ ಎ.ಮಂಜು​ನಾಥ್‌, ಕಾಂಗ್ರೆಸ್‌ನ ಮತ್ತಷ್ಟುಸದ​ಸ್ಯ​ರನ್ನು ಸೆಳೆ​ಯುವ ಪ್ರಯತ್ನಕ್ಕೆ ಕೈ ಹಾಕಿ​ದ್ದಾರೆ.

3/2 ಭಾಗ​ದಷ್ಟುಸದ​ಸ್ಯರ ಪಕ್ಷಾಂತರ ಅಗ​ತ್ಯ:

ಸ್ಥಳೀಯ ಸಂಸ್ಥೆ​ಗಳ ಅಧ್ಯಕ್ಷ - ಉಪಾ​ಧ್ಯ​ಕ್ಷರ ಚುನಾ​ವ​ಣೆ​ಯಲ್ಲಿ ಸದ​ಸ್ಯ​ರಿಗೆ ಜಾರಿ ಮಾಡಿದ ವ್ಹಿಪ್‌ ಅನ್ವ​ಯ​ವಾ​ಗ​ಬಾ​ರದು ಎನ್ನುವು​ದಾ​ದರೆ ಮೂರನೇ ಎರಡು (3/2)ಭಾಗ​ದಷ್ಟುಸದ​ಸ್ಯರು ಪಕ್ಷಾಂತರ ಮಾಡ​ಬೇಕು. ಆಗ ಅವ​ರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಪ್ರಕ​ರಣ ದಾಖ​ಲಿ​ಸಲು ಅವ​ಕಾಶ ಇರು​ವು​ದಿಲ್ಲ. ಈಗ ಪುರ​ಸ​ಭೆಯ 11 ಮಂದಿ ಕಾಂಗ್ರೆಸ್‌ ಸದ​ಸ್ಯರ ಪೈಕಿ (ಮಂಗ​ಳಮ್ಮ, ಟಿ.ಕು​ಮಾರ್‌ , ಬಿ.ಎಂ.ರಮೇಶ್‌ ಕುಮಾರ್‌, ಆರ್‌. ದೇ​ವ​ರಾಜು, ಬಿ.ಪಿ.​ರಾ​ಕೇಶ್‌ , ಸಿ.ಲೋ​ಕೇಶ್‌) 6 ಮಂದಿ ಜೆಡಿ​ಎಸ್‌ನಲ್ಲಿ ಗುರು​ತಿ​ಸಿ​ಕೊಂಡಿದ್ದರೆ, ಜೆಡಿ​ಎಸ್‌ನ 12 ಸದ​ಸ್ಯರ ಪೈಕಿ (ಬೋ​ರೇ​ಗೌಡ, ಉಮೇಶ್‌, ರಜನಿ )3 ಮಂದಿ ಕಾಂಗ್ರೆಸ್‌ನಲ್ಲಿ ಕಾಣಿ​ಸಿ​ಕೊಂಡಿ​ದ್ದಾರೆ.

ಕಾಂಗ್ರೆಸ್‌ನ ವ್ಹಿಪ್‌ ಅನ್ವ​ಯ​ವಾ​ಗ​ಬಾ​ರದು ಎಂದರೆ 11ರ ಪೈಕಿ ಒಟ್ಟು 8 ಸದ​ಸ್ಯರು ಪಕ್ಷಾಂತರ ಮಾಡ​ಬೇಕು. ಇನ್ನು ಜೆಡಿ​ಎಸ್‌ ಕೂಡ ವ್ಹಿಪ್‌ ಜಾರಿ ಮಾಡುವ ನಿರ್ಧಾ​ರಕ್ಕೆ ಬಂದಿದೆ. ಆ ಪಕ್ಷದ 12ರ ಪೈಕಿ 9 ಸದ​ಸ್ಯರು ಪಕ್ಷಾಂತರ ಮಾಡಿ​ದಾಗ ಮಾತ್ರ ದಳ​ದ ವ್ಹಿಪ್‌ ಪರಿ​ಣಾಮ ಬೀರುವು​ದಿಲ್ಲ. ಇಲ್ಲ​ದಿ​ದ್ದರೆ ಪಕ್ಷಾಂತ​ರಿ​ಗಳ ವಿರುದ್ಧ ಕರ್ನಾ​ಟಕ ಸ್ಥಳೀಯ ಸಂಸ್ಥೆಗಳ ಪಕ್ಷಾಂತರ ನಿಷೇ​ಧ ಕಾಯಿದೆ 1987 ಅಡಿ​ಯಲ್ಲಿ ಪ್ರಕ​ರಣ ದಾಖ​ಲಿಸಿ ಆರು ವರ್ಷ​ಗಳ ಕಾಲ ಚುನಾ​ವ​ಣೆ​ಯಲ್ಲಿ ಸ್ಪರ್ಧಿಸ​ದಂತೆ ಮಾಡಲು ಅವ​ಕಾ​ಶ​ಗ​ಳಿವೆ.

ಪುರಸಭೆಯಲ್ಲಿ 11 ಸದಸ್ಯ ಬಲ ಹೊಂದಿರುವ ಕಾಂಗ್ರೆಸ್‌ ಸಂಖ್ಯೆ ಸಂಸದ ಡಿ.ಕೆ.​ಸು​ರೇಶ್‌, ವಿಧಾನ ಪರಿಷತ್‌ ಸದಸ್ಯ ಸಿ.ಎಂ.​ಲಿಂಗ​ಪ್ಪ​ ಸೇರಿ 13ಕ್ಕೆ ಹೆಚ್ಚಳವಾದರೆ, ಜೆಡಿಎಸ್‌ನ ಬಲ 12 ಸದಸ್ಯರ ಜತೆ​ಗೆ ಶಾಸಕ ಎ. ಮಂಜು​ನಾಥ್‌ ಬೆಂಬಲದಿಂದ 13ಕ್ಕೆ ಹೆಚ್ಚಲಿದೆ. ಪುರ​ಸಭೆ ಅಧಿ​ಕಾರ ಕೇವಲ 6ರಿಂದ 8 ತಿಂಗಳು ಮಾತ್ರ ಅಧಿ​ಕಾರ ಉಳಿ​ದಿ​ದೆ. ಪಕ್ಷ​ಕ್ಕಿಂತ ನಾಯಕ ನಿಷ್ಠೆ ತೋರಿ​ಸಿ​ ಲಾಭ ಮಾಡಿ​ಕೊ​ಳ್ಳುವ ನಿರ್ಧಾ​ರಕ್ಕೆ ಬಂದಿ​ರುವ ಉಭಯ ಪಕ್ಷ​ಗಳ ಕೆಲ ಸದ​ಸ್ಯರು ವ್ಹಿಪ್‌ ಉಲ್ಲಂಘಿ​ಸಲೂ ಸಿದ್ದ​ರಾ​ಗುತ್ತಿ​ದ್ದಾರೆ. ಇದೆ​ಲ್ಲ​ದರ ಜತೆಗೆ ಗದ್ದುಗೆ ಹಿಡಿ​ಯಲು ಜೆಡಿ​ಎಸ್‌ ಹಾಗೂ ಕಾಂಗ್ರೆಸ್‌ ತಂತ್ರ ಪ್ರತಿ​ತಂತ್ರ​ಗ​ಳನ್ನು ಹೆಣೆ​ಯು​ತ್ತಿ​ವೆ.

ಕಾಂಗ್ರೆಸ್‌ ಚಿಹ್ನೆಯಲ್ಲಿ ಗೆದ್ದಿ​ರುವ 11 ಸದ​ಸ್ಯ​ರಿಗೆ ಪಕ್ಷದ ಅಭ್ಯ​ರ್ಥಿಗೆ ಮತ ಚಲಾ​ಯಿ​ಸು​ವಂತೆ ವ್ಹಿಪ್‌ ಜಾರಿ ಮಾಡಿ​ದ್ದೇವೆ.​ಎ​ಲ್ಲರು ಪಕ್ಷಕ್ಕೆ ನಿಷ್ಠ​ರಾಗಿ ನಡೆ​ದು​ಕೊ​ಳ್ಳು​ತ್ತಾ​ರೆಂಬ ವಿಶ್ವಾ​ಸ​ವಿದೆ. ಆದಾಗ್ಯೂ ವ್ಹಿಪ್‌ ಉಲ್ಲಂಘನೆ ಮಾಡಿ​ದರೆ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಪ್ರಕ​ರಣ ದಾಖ​ಲಿ​ಸುತ್ತೇವೆ.

-ಗಂಗಾ​ಧರ್‌ ,ಅ​ಧ್ಯ​ಕ್ಷರು, ಜಿಲ್ಲಾ ಕಾಂಗ್ರೆಸ್‌ ಸಮಿತಿ

ನಾನು ಜೆಡಿ​ಎಸ್‌ ಸೇರ್ಪ​ಡೆ​ಯಾದ ನಂತರ ಪುರ​ಸ​ಭೆಯ ಕೆಲ ಕಾಂಗ್ರೆಸ್‌ ಸದ​ಸ್ಯರು ನನ್ನೊಂದಿಗೆ ಬಂದಿ​ದ್ದಾರೆ. ಕಾಂಗ್ರೆಸ್‌ ಸದ​ಸ್ಯ​ರಿಗೆ ವ್ಹಿಪ್‌ ಜಾರಿ ಮಾಡ​ದಂತೆ ಸಂಸದ ಡಿ.ಕೆ.​ಸು​ರೇಶ್‌ ಅವ​ರಲ್ಲಿ ಮನವಿ ಮಾಡು​ತ್ತೇನೆ. ಹಾಗೊಂದು ವೇಳೆ ವ್ಹಿಪ್‌ ನೀಡಿ​ದಲ್ಲಿ ಜೆಡಿ​ಎಸ್‌ ಕೂಡ ವ್ಹಿಪ್‌ ಜಾರಿ ಮಾಡ​ಲಿದೆ.

- ಎ.ಮಂಜು​ನಾಥ್‌ , ಶಾಸ​ಕ

Follow Us:
Download App:
  • android
  • ios