Asianet Suvarna News Asianet Suvarna News

ಬೆಂಗಳೂರು-ಮಂಗಳೂರು ರಾತ್ರಿ ರೈಲು ಕಣ್ಣೂರಿನಿಂದ ಕೋಝಿಕ್ಕೋಡ್‌ಗೆ ವಿಸ್ತರಣೆ

ನಂ.16511/512 ಬೆಂಗಳೂರು - ಕಣ್ಣೂರು - ಬೆಂಗಳೂರು ರಾತ್ರಿ ರೈಲನ್ನು ಕೋಝಿಕ್ಕೋಡ್‌ ವರೆಗೆ ವಿಸ್ತರಿಸುವ ಕುರಿತ ದಕ್ಷಿಣ ರೈಲ್ವೆಯ ಪ್ರಸ್ತಾವನೆಗೆ ರೈಲ್ವೆ ಸಚಿವಾಲಯ ಒಪ್ಪಿಗೆ ಸೂಚಿಸಿದೆ. ಈಗ ಇರುವ ವೇಳಾಪಟ್ಟಿಯಂತೆ ರೈಲು ಸಂಚರಿಸಲಿದ್ದು, ನಂ.16511 ರೈಲು ಕೋಝಿಕ್ಕೋಡ್‌ಗೆ ಮಧ್ಯಾಹ್ನ 12.40ಕ್ಕೆ ತಲುಪಲಿದೆ. ಈ ರೈಲು ತಲಶ್ಶೇರಿ, ವಡಕರ ಮತ್ತು ಕ್ವೈಲಾಂಡಿಯಲ್ಲಿ ನಿಲುಗಡೆಯಾಗಲಿದೆ. 16512 ರೈಲು ಸಂಜೆ 3.30ಕ್ಕೆ ಕೋಝಿಕ್ಕೋಡ್‌ನಿಂದ ಹೊರಡಲಿದೆ.

Extension of Bengaluru Mangaluru Night Train from Kannur to Kozhikode grg
Author
First Published Feb 1, 2024, 2:00 AM IST

ಮಂಗಳೂರು(ಫೆ.01): ಯಶವಂತಪುರ - ಮಂಗಳೂರು ಸೆಂಟ್ರಲ್‌ (ಕಣ್ಣೂರು) ರಾತ್ರಿ ರೈಲು ಕೇರಳದಲ್ಲಿ ಎರಡನೇ ಬಾರಿಗೆ ವಿಸ್ತರಣೆಗೊಂಡಿದ್ದು, ಇದೀಗ ಕಣ್ಣೂರಿನಿಂದ ಕೋಝಿಕೋಡ್‌ ವರೆಗೆ ವಿಸ್ತರಣೆಯಾಗಿದೆ. ನಂ.16511/512 ಬೆಂಗಳೂರು - ಕಣ್ಣೂರು - ಬೆಂಗಳೂರು ರಾತ್ರಿ ರೈಲನ್ನು ಕೋಝಿಕ್ಕೋಡ್‌ ವರೆಗೆ ವಿಸ್ತರಿಸುವ ಕುರಿತ ದಕ್ಷಿಣ ರೈಲ್ವೆಯ ಪ್ರಸ್ತಾವನೆಗೆ ರೈಲ್ವೆ ಸಚಿವಾಲಯ ಒಪ್ಪಿಗೆ ಸೂಚಿಸಿದೆ. ಈಗ ಇರುವ ವೇಳಾಪಟ್ಟಿಯಂತೆ ರೈಲು ಸಂಚರಿಸಲಿದ್ದು, ನಂ.16511 ರೈಲು ಕೋಝಿಕ್ಕೋಡ್‌ಗೆ ಮಧ್ಯಾಹ್ನ 12.40ಕ್ಕೆ ತಲುಪಲಿದೆ. ಈ ರೈಲು ತಲಶ್ಶೇರಿ, ವಡಕರ ಮತ್ತು ಕ್ವೈಲಾಂಡಿಯಲ್ಲಿ ನಿಲುಗಡೆಯಾಗಲಿದೆ. 16512 ರೈಲು ಸಂಜೆ 3.30ಕ್ಕೆ ಕೋಝಿಕ್ಕೋಡ್‌ನಿಂದ ಹೊರಡಲಿದೆ.

ಈ ರೈಲನ್ನು ವಿಸ್ತರಿಸುವುದಿಲ್ಲ ಎಂದು ರೈಲ್ವೆ ಸಚಿವ ಅಶ್ವಿನ್‌ ವೈಷ್ಣವ್‌ ಅವರು ದ.ಕ. ಸಂಸದ ನಳಿನ್‌ ಕುಮಾರ್‌ ಅವರಿಗೆ ನೀಡಿರುವ ಭರವಸೆಯ ಹೊರತಾಗಿಯೂ ಈ ವಿಸ್ತರಣೆ ಪ್ರಕ್ರಿಯೆ ನಡೆದಿದೆ. ಈ ರೈಲು 2007ರಲ್ಲಿ ಆರಂಭವಾಗಿದ್ದು, ಯಶವಂತಪುರ - ಮಂಗಳೂರು ಸೆಂಟ್ರಲ್‌ ರೈಲು ಮೊದಲ ಬಾರಿ 2009ರಲ್ಲಿ ಮಂಗಳೂರಿನಿಂದ ಕಣ್ಣೂರು ವರೆಗೆ ವಿಸ್ತರಣೆಯಾಗಿತ್ತು. ಕಾರವಾರಕ್ಕೆ ವಿಸ್ತರಿಸಬೇಕು ಎನ್ನುವ ಬೇಡಿಕೆ ಹೊರತಾಗಿಯೂ ಈ ರೈಲನ್ನು ಕಣ್ಣೂರಿಗೆ ವಿಸ್ತರಿಸಲಾಗಿತ್ತು.

ಕುಮಾರ ಪರ್ವತ ತಪ್ಪಲಲ್ಲಿ ಕಾಣಿಸಿದ ಒಂದೂವರೆ ಸಾವಿರಕ್ಕೂ ಹೆಚ್ಚು ಚಾರಣಿಗರು, ಕಂಗಾಲಾದ ಅರಣ್ಯಾಧಿಕಾರಿಗಳು!

ಮಂಗಳೂರು ಕೋಟಾ ಅಲಭ್ಯತೆ ಭೀತಿ:

ಪಶ್ಚಿಮ ಕರಾವಳಿ ರೈಲ್ವೆ ಯಾತ್ರಿ ಸಮಿತಿ ಈ ವಿಸ್ತರಣೆಯನ್ನು ವಿರೋಧಿಸಿದ್ದು, ಇದು ಕರಾವಳಿಯ ಪ್ರಯಾಣಿಕರಿಗೆ ಸೀಟು ಅಲಭ್ಯತೆಗೆ ಕಾರಣವಾಗಲಿದೆ. ಕೇರಳಿಗರು ಬೆಂಗಳೂರಿಗೆ ತೆರಳಲು ಇದೇ ರೈಲನ್ನು ಅವಲಂಬಿಸುವ ಕಾರಣ, ಕಾಯ್ದಿರಿಸದ ಸೀಟುಗಳಿರುವ ಬೋಗಿಗಳು ಮಂಗಳೂರು ತಲುಪುವಾಗಲೇ ಭರ್ತಿಯಾಗಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿವೆ.

Follow Us:
Download App:
  • android
  • ios