ಕೊರೋನಾ ಸೋಂಕಿನಿಂದ ತನ್ನ ಸಹೋದರ ಮೃತಪಟ್ಟ ವಿಷಯ ತಿಳಿದು ಅಣ್ಣನೂ ಸಾವು| ಬಾಗಲಕೋಟೆ ಜಿಲ್ಲೆಯ ಹುನಗುಂದ ಪಟ್ಟಣದಲ್ಲಿ ನಡೆದನ ಘಟನೆ| ಬಸಪ್ಪ ಮಹಾಂತಪ್ಪ ಭಾವಿಕಟ್ಟಿ, ಶರಣಪ್ಪ ಮಹಾಂತಪ್ಪ ಭಾವಿಕಟ್ಟಿ ಮೃತಪಟ್ಟವರು| 

ಹುನಗುಂದ(ಆ.19): ಕೊರೋನಾ ಸೋಂಕಿನಿಂದ ತನ್ನ ಸಹೋದರ ಮೃತಪಟ್ಟ ವಿಷಯ ತಿಳಿದು ಅಣ್ಣನೂ ಹೃದಯಾಘಾತದಿಂದ ಮೃತಪಟ್ಟ ಘಟನೆ ಸೋಮವಾರ ರಾತ್ರಿ ಬಾಗಲಕೋಟೆ ಜಿಲ್ಲೆಯ ಹುನಗುಂದ ಪಟ್ಟಣದಲ್ಲಿ ನಡೆದಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಸಪ್ಪ ಮಹಾಂತಪ್ಪ ಭಾವಿಕಟ್ಟಿ(45), ಶರಣಪ್ಪ ಮಹಾಂತಪ್ಪ ಭಾವಿಕಟ್ಟಿ(50) ಮೃತಪಟ್ಟವರಾಗಿದ್ದಾರೆ. 

ಅಪಾಯದ ಮಟ್ಟ ಮೀರಿದೆ ಘಟಪ್ರಭಾ; ಪ್ರವಾಹದ ಮಧ್ಯೆ ಪಲ್ಲಕ್ಕಿ ಕೊಂಡೊಯ್ದ ಗ್ರಾಮಸ್ಥರು

ಪಟ್ಟಣದ ಬಸಪ್ಪ ಮಹಾಂತಪ್ಪ ಭಾವಿಕಟ್ಟಿ ಅವರು ಕೊರೋನಾ ಸೋಂಕಿನಿಂದ ಸೋಮವಾರ ರಾತ್ರಿ ಮೃಪಟ್ಟಿದ್ದರು. ಈ ಸುದ್ದಿ ತಿಳಿದ ತಕ್ಷಣವೇ ಅಣ್ಣ ಶರಣಪ್ಪ ಮಹಾಂತಪ್ಪ ಭಾವಿಕಟ್ಟಿ ತೀವ್ರ ಹೃದಯಾಘಾತಕ್ಕೊಳಗಾಗಿದ್ದು, ಆತನನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಈತ ಸಾವನ್ನಪ್ಪಿದ್ದಾನೆ.