ಕುಡಿತ ಒಳ್ಳೆಯದಲ್ಲ.. ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ..ಎಂಬ ಜಾಗೃತಿ ಮೂಡಿಸುವ ಅಕ್ಷರ ಮತ್ತು ಬರಹಗಳನ್ನು ಸದಾ ನೋಡುತ್ತಿರುತ್ತೇವೆ. ಆದರೆ ಈ ವ್ಯಕ್ತಿ ಕುಡಿತಕ್ಕೆ ಬಲಿಯಾಗಿ ಹಸಿವಿವಿನಿಂದ ಸಾವು ತಂದುಕೊಂಡಿದ್ದಾರೆ.
ಶಿರಸಿ[ಮೇ. 18] ಕುಡಿತದ ಚಟಕ್ಕೆ ಬಲಿಯಾದ ವ್ಯಕ್ತಿಯೊರ್ವ ಹಸಿವಿನಿಂದ ಬಳಲಿ ಸಾವು ಕಂಡಿದ್ದಾರೆ. ಶಿರಸಿ ತಾಲೂಕಿನ ಅಜ್ಜೀಬಳದ ಸಮೀಪದ ಬಿಲಕೊಪ್ಪದಲ್ಲಿ ರಮೇಶ ಸುಬ್ರಾಯ ನಾಯ್ಕ [65] ಹಸಿವಿನಿಂದ ಸಾವು ಕಂಡಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಮದ್ಯ ಮಾರಾಟದಲ್ಲಿ ದಾಖಲೆ ಪುಡಿ ಪುಡಿ ಮಾಡಿದ ಮಂಡ್ಯ!
ಕಳೆದ ಹಲವು ವರ್ಷಗಳಿಂದ ಕುಡಿತದ ಚಟಕ್ಕೆ ದಾಸನಾಗಿದ್ದು, ಮನೆಗೆ ಬರುವಾಗ ದಾರಿ ಮಧ್ಯದಲ್ಲಿ ಬಿದ್ದು ಹಸಿವಿನಿಂದಲೇ ಸಾವನ್ನಪ್ಪಿದ್ದಾರೆ. ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪಿಎಸ್ಐ ಸಂಜೀವ್ ಪ್ರಕರಣ ದಾಖಲಿಸಿಕೊಂಡಿದ್ದಾರೆ.
