ವ್ಯಕ್ತಿಯೋರ್ವ ತನ್ನ ಮನೆಗೆ ಬೆಂಕಿ ಇಟ್ಟಿದ್ದು ಇದರಿಂದ 6 ಮಂದಿ ಸಜೀವ ದಹನವಾಗಿದ್ದಾರೆ. ಕುಡಿದ ನಶೆಯಲ್ಲಿ ಈ ಕೃತ್ಯ ಎಸಗಿದ್ದಾನೆ, 

ಕೊಡಗು (ಏ.03): ವ್ಯಕ್ತಿಯೊರ್ವ ಹೆಂಡದ ಅಮಲಿನಲ್ಲಿ ತನ್ನ ಮನೆಗೆ ತಾನೇ ಬೆಂಕಿ ಇಟ್ಟು 6ಮಂದಿ ಸಾವಿಗೆ ಕಾರಣನಾಗಿದ್ದಾನೆ. 

ಕೊಡಗು ಜಿಲ್ಲೆಯ ಮುಗಟಕೇರಿ ಗ್ರಾಮದ ಕೂಲಿಕಾಮಿ೯ಕ ಬೋಜ ಎಂಬಾತ ಪತ್ನಿಯೊಂದಿಗೆ ಜಗಳವಾಡಿ ಕುಡಿದು ಬಂದು ಮನೆಗೆ ಬೆಂಕಿ ಇಟ್ಟ ಪರಿಣಾಮ 6 ಮಂದಿ ಸಜೀವ ದಹನವಾಗಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈತನ ಮನೆಗೆ ಸಂಬಂಧಿಗಳು ಆಗಮಿಸಿದ್ದು ಕುಡಿದಿದ್ದ ಆತ ಮನೆಯ ಕಿಟಕಿ ಬಾಗಿಲುಗಳನ್ನು ಮುಚ್ಚಿ ಮನೆ ಮೇಲೆ ಹತ್ತಿ ಹಂಚು ತೆಗೆದು ಸೀಮೆ ಎಣ್ಣೆ ಸುರಿದು ಬೆಂಕಿ ಹಾಕಿದ್ದು ಈ ವೇಳೆ ಮನೆಯಲ್ಲಿ ಮಗಿದ್ದವರು ಸಜೀವ ದಹನವಾಗಿದ್ದಾರೆ. 

ಮಂಡ್ಯ; ಮೊಮ್ಮಗಳಿಗೆ ಬಂದ ಅದೊಂದು ಅನುಮಾನ, ತಾತನನ್ನೇ ಕೊಂದಿದ್ದ ಮೊಮ್ಮಗ! ..

ಈತನ ಕೖತ್ಯಕ್ಕೆ ಮನೆಯಲ್ಲಿ ಮಲಗಿದ್ದ3 ಮಂದಿ ಸುಟ್ಟು ಕರಕಲಾಗಿದ್ದಾರೆ. ಚಿಂತಾಜನಕ ಸ್ಥಿತಿಯಲ್ಲಿದ್ದ ಇಬ್ಬರು ಮಕ್ಕಳು ಮತ್ತು ಹಿರಿಯರೋವ೯ರನ್ನು ಮೈಸೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆ ಮೂವರು ಕೊನೆಯುಸಿರೆಳೆದಿದ್ದಾರೆ. ಒಟ್ಟು ಈತನ ದುಷ್ಕೃತ್ಯಕ್ಕೆ ಮನೆಯಲ್ಲಿ ಮಲಗಿದ್ದ 6 ಮಂದಿ ಸಜೀವ ದಹನವಾಗಿದ್ದಾರೆ.