Asianet Suvarna News Asianet Suvarna News

Mysuru : 282 ಕೋಟಿ ವೆಚ್ಚದಲ್ಲಿ 164 ಗ್ರಾಮಕ್ಕೆ ಕುಡಿಯುವ ನೀರು

ತಾಲೂಕಿನ ಬಾಚಹಳ್ಳಿ ಮತ್ತು ಇತರೆ 164 ಗ್ರಾಮದ 277 ಜನವಸತಿ ಪ್ರದೇಶಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ನೀರು ಪೂರೈಸುವ . 282 ಕೋಟಿ ವೆಚ್ಛದ ಕಾಮಗಾರಿಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರಕಿದೆ ಎಂದು ಸಂಸದ ಪ್ರತಾಪ ಸಿಂಹ ತಿಳಿಸಿದ್ದಾರೆ.

Drinking water for 164 villages at a cost of 282 crores snr
Author
First Published Dec 11, 2022, 5:36 AM IST

 ಮೈಸೂರು (ಡಿ.11): ತಾಲೂಕಿನ ಬಾಚಹಳ್ಳಿ ಮತ್ತು ಇತರೆ 164 ಗ್ರಾಮದ 277 ಜನವಸತಿ ಪ್ರದೇಶಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ನೀರು ಪೂರೈಸುವ . 282 ಕೋಟಿ ವೆಚ್ಛದ ಕಾಮಗಾರಿಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರಕಿದೆ ಎಂದು ಸಂಸದ ಪ್ರತಾಪ ಸಿಂಹ ತಿಳಿಸಿದ್ದಾರೆ.

ಹುಣಸೂರಿನ ಜನತೆ ನನ್ನನ್ನು ಎರಡು ಬಾರಿ ಚುನಾವಣೆಯಲ್ಲಿ ಗೆಲ್ಲಲು ಸಹಕರಿಸಿದ್ದು, ಜನತೆಯ ಋುಣವನ್ನು ತೀರಿಸುವ ನಿಟ್ಟಿನಲ್ಲಿ ತಾಲೂಕಿನಲ್ಲಿ 184 ಹಳ್ಳಿಗಳಿದ್ದು, ಒಟ್ಟಾರೆಯಾಗಿ 310 ಜನವಸತಿ ಗಳಿವೆ. ಇವುಗಳಿಗೆ ಜಲಜೀವನ್‌ ಮಿಷನ್‌ ಯೋಜನೆಯಡಿ ಪ್ರತಿ ಮನೆಗೆ ಕಾರ್ಯಾತ್ಮಕ ನಳ ನೀರು ಸಂಪರ್ಕ ಅಳವಡಿಸಲು ಕ್ರಮ ವಹಿಸಲಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ.

ತಾಲೂಕಿನಲ್ಲಿ 2011ರ ಜನಗಣತಿಯಂತೆ ಗ್ರಾಮೀಣ ಪ್ರದೇಶದಲ್ಲಿ ಒಟ್ಟು 2,69,207 ಜನಸಂಖ್ಯೆ ಇದ್ದು, ಇದರಲ್ಲಿ ಈಗಾಗಲೇ ಕೆ.ಆರ್‌. ನಗರದಿಂದ ಹುಣಸೂರು ನಗರಕ್ಕೆ ಕುಡಿಯುವ ನೀರು ಸರಬರಾಜು ಯೋಜನೆಯಿಂದ ಹುಣಸೂರು ತಾಲೂಕಿನ 5 ಜನವಸತಿಗಳಿಗೆ ಹಾಗೂ ಇಲವಾಲ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯಿಂದ ತಾಲೂಕಿನ 23 ಜನವಸತಿಗಳಿಗೆ ಒಟ್ಟು 28 ಜನವಸತಿಗಳಿಗೆ ಕಾರ್ಯಾತ್ಮಕ ನಳ ನೀರು ಸಂಪರ್ಕ ಯೋಜನೆ ಕಾಮಗಾರಿ ಅನುಷ್ಠಾನಗೊಳ್ಳುತ್ತಿದೆ ಎಂದು ಅವರು ಹೇಳಿದ್ದಾರೆ.

ತಾಲೂಕು ವ್ಯಾಪ್ತಿಯ ಸುಮಾರು 277 ಜನವಸತಿಗಳಿಗೆ ಕಾರ್ಯಾತ್ಮಕ ನಳ ನೀರು ಸರಬರಾಜು ಯೋಜನೆ ಕಾರ್ಯಗತಗೊಳಿಸಲು ಜಲಜೀವನ್‌ ಮಿಷನ್‌ ಯೋಜನೆಯಡಿ . 282.26 ಕೋಟಿ ಅಂದಾಜುಪಟ್ಟಿಸಿದ್ಧಪಡಿಸಲಾಗಿತ್ತು. ಈ ಯೋಜನೆಯನ್ನು 2024ನೇ ಸಾಲಿನ ಅಂತ್ಯದೊಳಗೆ ಪೂರ್ಣಗೊಳಿಸಬೇಕಿರುವುದರಿಂದ ಸಂಪುಟ ಸಭೆಯಲ್ಲಿ ಮಂಡಿಸಿ ಅನುಮೋದನೆ ನೀಡುವಂತೆ ಸಂಸದ ಪ್ರತಾಪ್‌ ಸಿಂಹ ಹಲವು ಬಾರಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಮಾಡಲಾಗಿತ್ತು. ಇದಕ್ಕೆ ಅನುಗುಣವಾಗಿ ಕಳೆದ ಕ್ಯಾಬಿನೆಟ್‌ನಲ್ಲಿ ಮೈಸೂರು ತಾಲೂಕು ಹಳೆ ಉಂಡವಾಡಿಯ ಕಾವೇರಿ ಮೂಲದಿಂದ ಹುಣಸೂರು ತಾಲೂಕಿನ ಬಾಚಹಳ್ಳಿ ಮತ್ತು ಇತರೆ 164 ಗ್ರಾಮದ 277 ಜನವಸತಿ ಪ್ರದೇಶಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ನೀರು ಪೂರೈಸುವ . 282 ಕೋಟಿ ವೆಚ್ಚದ ಕಾಮಗಾರಿಗೆ ಅನುಮೋದನೆ ನೀಡಿದ್ದು, ಹುಣಸೂರು ತಾಲೂಕಿನ ಜನತೆಯ ಪರವಾಗಿ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಹಾಗೂ ಸಹಕರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ ಅವರಿಗೆ ಧನ್ಯವಾದ ಅರ್ಪಿಸುವುದಾಗಿ ಅವರು ತಿಳಿಸಿದ್ದಾರೆ.

ಸಸ್ಯಗಳಿಗೆ ಈ ಸಮಯದಲ್ಲಿ ನೀರು ಹಾಕ್ಬೇಡಿ : 
ಮಧ್ಯಾಹ್ನ ಗಿಡಕ್ಕೆ ನೀರು ಹಾಕ್ಬೇಡಿ :
 ಮನೆ (House) ಯಲ್ಲಿರುವ ಸಸ್ಯಗಳಿಗೆ  ಮಧ್ಯಾಹ್ನ ನೀರು ಹಾಕಬೇಡಿ. ಮಧ್ಯಾಹ್ನ ವಾತಾವರಣ ಬಿಸಿ ಇರುತ್ತದೆ.  ಸೂರ್ಯನ ಶಾಖ ಹೆಚ್ಚಿರುತ್ತದೆ. ಈ ಸಮಯದಲ್ಲಿ ನೀರು ಹಾಕಿದ್ರೆ ಗಿಡ ಹಾಳಾಗುತ್ತದೆ. ಸಸ್ಯಗಳಿಗೆ ನೀರು ಹೀರಿಕೊಳ್ಳಲು ಕಷ್ಟವಾಗುತ್ತದೆ. ಬಿಸಿಲಿಗೆ ನೀರು ಆವಿಯಾಗಲು ಶುರುವಾಗುತ್ತದೆ. ಮಣ್ಣಿಗೆ ನೀರನ್ನು ಹೀರಿಕೊಳ್ಳಲು ಸಾಧ್ಯವಾಗದ ಕಾರಣ ನೀವು ಹಾಕಿದ ನೀರು ವ್ಯರ್ಥವಾಗುತ್ತದೆ.

ರಾತ್ರಿ ವೇಳೆ ಗಿಡಗಳಿಗೆ ನೀರು ಹಾಕ್ಬೇಡಿ : ಬಹುತೇಕರಿಗೆ ಬೆಳಿಗ್ಗೆ ಗಿಡಕ್ಕೆ ನೀರು ಹಾಕಲು ಸಮಯ ಸಿಗುವುದಿಲ್ಲ. ಎಲ್ಲ ಕೆಲಸ ಮುಗಿಸಿ ಮನೆಗೆ ಬಂದ ನಂತ್ರ ಮನೆ ಕೆಲಸದಲ್ಲಿ ನಿರತರಾಗ್ತಾರೆ. ಹಾಗಾಗಿ ರಾತ್ರಿ ಅವರು ಗಿಡಕ್ಕೆ ನೀರು ಹಾಕ್ತಾರೆ. ರಾತ್ರಿ ಗಿಡಕ್ಕೆ ನೀರು ಹಾಕುವುದ್ರಿಂದ ಸಸ್ಯಕ್ಕೆ ನೀರನ್ನು ಹೀರಿಕೊಳ್ಳಲು ಕಷ್ಟವಾಗುತ್ತದೆ. ಇದು ಸಸ್ಯಗಳಲ್ಲಿ ಅತಿಯಾದ ನೀರಿನ ಸಮಸ್ಯೆಯನ್ನು ಉಂಟುಮಾಡಬಹುದು. ಪ್ರತಿ ದಿನ ಹೀಗೆ ಮಾಡಿದ್ರೆ ಗಿಡ ಕೊಳೆಯಲು ಶುರುವಾಗುತ್ತದೆ. ಆದಷ್ಟು ರಾತ್ರಿ ಗಿಡಕ್ಕೆ ನೀರು ಹಾಕಬೇಡಿ. ಒಂದ್ವೇಳೆ ಅತ್ಯಗತ್ಯ ಎನ್ನುವುದಾದ್ರೆ ಸ್ವಲ್ಪ ಪ್ರಮಾಣದಲ್ಲಿ ನೀರನ್ನು ಸ್ಪ್ರೇ (Spray) ಮಾಡಿ. ಇದನ್ನು ಕೂಡ ನೀವು ಪ್ರತಿನಿತ್ಯ ಮಾಡಬಾರದು.  

Home Garden : ಕೈತೋಟದಲ್ಲಿರುವ ಬೀನ್ಸ್ ಎಲೆಗಳು ಹಳದಿಯಾಗ್ತಿದ್ದರೆ ಈ ಟಿಪ್ಸ್ ಬಳಸಿ

ಸಸ್ಯಗಳಿಗೆ ನೀರು ಹಾಕಲು ಯಾವುದು ಸರಿಯಾದ ಸಮಯ : ರಾತ್ರಿ ಬೇಡ, ಮಧ್ಯಾಹ್ನ ಬೇಡ. ಹಾಗಿದ್ರೆ ಯಾವ ಸಮಯದಲ್ಲಿ ಸಸ್ಯಗಳಿಗೆ ನೀರುಣಿಸಬೇಕು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಗಿಡಕ್ಕೆ ನೀರು ಹಾಕಲು ಸರಿಯಾದ ಸಮಯ ಮುಂಜಾನೆ. ಆದಷ್ಟು ಬೆಳಿಗ್ಗೆ ನಿಮ್ಮ ಸಸ್ಯಗಳಿಗೆ ನೀರುಣಿಸಲು ಪ್ರಯತ್ನಿಸಿ. ಇದರಿಂದ ನಿಮ್ಮ ಸಸ್ಯಗಳ ಬೆಳವಣಿಗೆ ಚೆನ್ನಾಗಿ ಆಗುತ್ತದೆ. ಸೂರ್ಯ ನೆತ್ತಿಯ ಮೇಲೆ ಬರ್ತಿದ್ದಂತೆ ಸಸ್ಯಗಳು ಆ ನೀರನ್ನು ಸರಿಯಾಗಿ ಬಳಸಿಕೊಳ್ಳುತ್ತವೆ. ನೀವು ಬೆಳಿಗ್ಗೆ ನಿಮ್ಮ ಗಿಡಗಳಿಗೆ ನೀರುಣಿಸಲು ಮರೆತರೆ ಸೂರ್ಯಾಸ್ತದ ನಂತರ ಅಂದ್ರೆ ರಾತ್ರಿಯಾಗುವ ಮೊದಲು ನೀವು ಗಿಡಕ್ಕೆ ನೀರು ಹಾಕಬಹುದು. ಇದ್ರಿಂದ ಗಿಡದ ಬೆಳವಣಿಗೆ ಚೆನ್ನಾಗಿ ಆಗುತ್ತದೆ. 

Follow Us:
Download App:
  • android
  • ios