ದೇವರ ಪ್ರಸಾದ ಸೇವಿಸಿದ ಸ್ವೀಕರಿಸಿ ಅಸ್ವಥಗೊಂಡವರ ಪೈಕಿ ಈಗಾಗಲೇ ಸಾವಿನ ಸಂಖ್ಯೆ 8ಕ್ಕೆ ಏರಿಕೆಯಾಗಿದ್ದು, ಇನ್ನು ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ. ಇದ್ರಿಂದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಚಾಮರಾಜನಗರ, [ಡಿ.14]: ಜಿಲ್ಲೆಯ ಹನೂರು ಸಮೀಪದ ಸುಳ್ವಾಡಿ ಗ್ರಾಮದಲ್ಲಿ ಸೂತಕ ಛಾಯೆ ಆವರಿಸಿದೆ. ಅಮ್ಮನ ನಮ್ಮ ಮೇಲೆ ಇರಲಿ ಎಂದು ಗ್ರಾಮದ ಕಿಚ್ಚುಕುತ್ತಿ ಮಾರಮ್ಮನ ಪ್ರಸಾದ ಸೇವಿಸಿದ ಭಕ್ತರ ಪಾಲಿಗೆ ಎರವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಾರಮ್ಮ ದೇವಾಲಯದಲ್ಲಿ ಟಮೋಟೋ ಬಾತ್​, ಬಾಳೆಹಣ್ಣು, ಅವಲಕ್ಕಿ ಮಿಶ್ರಿತ ಪಂಚಾಮೃತ ಪ್ರಸಾದ ಸ್ವೀಕರಿಸಿ ಮಗು ಸೇರಿಸಿ 8 ಜನ ಮೃತಪಟ್ಟಿದ್ದು, ಸಾವಿನ ಸಂಖ್ಯೆ ಏರುತ್ತಲೇ ಇದೆ. ಈ ದುಘರ್ಘಟನೆಗೆ ವಿಷ ಪ್ರಾಶನವೇ ಕಾರಣ ಎಂದು ಹೇಳಲಾಗುತ್ತಿದೆ.

ಚಾಮರಾಜನಗರ: ದೇವರ ಪ್ರಸಾದ ಸೇವಿಸಿ 6 ಜನರ ಸಾವು, ಹಲವರ ಸ್ಥಿತಿ ಗಂಭೀರ

ಘಟನೆ ಸಂಬಂಧ ಡಿಹೆಚ್​ಒ ಪ್ರಸಾದ್​ ಮಾತನಾಡಿ, ಅಸ್ವಸ್ಥರಾದವರ ಕಣ್ಣುಗಳು ನೀಲಿ ಬಣ್ಣಕ್ಕೆ ತಿರುಗುತ್ತಿವೆ. ಹಾಗಾಗಿ ಘಟನೆಗೆ ವಿಷ ಪ್ರಾಶನವೇ ಕಾರಣ ಎಂದು ಶಂಕೆ ವ್ಯಕ್ತ ಪಡಿಸಿದರು. ಮೊದಲೇ ಪ್ರಸಾದದಲ್ಲಿ ಸೀಮೆ ಎಣ್ಣೆ ವಾಸನೆ ಬರುತ್ತಿತ್ತು, ಪ್ರಸಾದ ಎಂದು ಸ್ವೀಕರಿಸಿದೆವು ಎನ್ನುವುದು ಭಕ್ತರ ಮಾತು.

 ಪ್ರಸಾದದಲ್ಲಿ ವಿಷ ಹಾಕಿದ್ರಾ ಪಾಪಿಗಳು..?<br/>ಈ ಹಿಂದೆ ಆ ಸ್ಥಳದಲ್ಲಿ ಒಂದು ಚಿಕ್ಕ ಕಲ್ಲಿನ ಗುಡಿ ಇತ್ತಂತೆ. ಬಳಿಕ ಅಲ್ಲಿ ದೇವಾಲಯ ನಿರ್ಮಾಣ ಮಾಡಲಾಯ್ತಂತೆ. ಇಂದು [ಶುಕ್ರವಾರ] ಬೆಳಗ್ಗೆ 10;30ಕ್ಕೆ ದೇವಸ್ಥಾನದ ಶಂಕುಸ್ಥಾಪನೆಯ ಪೂಜಾ ಕಾರ್ಯಕ್ರಮ ಬಳಿಕ ಪ್ರಸಾದ ವಿನಿಯೋಗ ಮಾಡಲಾಗಿತ್ತು. ಪ್ರಸಾದ ಸೇವಿಸಿದ ಬಳಿಕ 65ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡಿದ್ದಾರೆ. 

ಗೋಪುರ ಸಂಬಂಧ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿತ್ತು ಎನ್ನಲಾಗಿದ್ದು, ಈ ಕಾರಣದಿಂದಾಗಿಯೇ ಯಾರೋ ಕಿಡಿಗೇಡಿಗಳು ಪ್ರಸಾದಕ್ಕೆ ವಿಷ ಹಾಕಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

"