ದೇವಾಲಯದ ಹುಂಡಿ ತರೆದಾಗ ಅಚ್ಚರಿ ಕಾದಿತ್ತು. ಬ್ಯಾನ್ ಆಗಿ ವರ್ಷಗಳೇ ಉರುಳಿದ್ದರೂ ಆ ನೋಟುಗಳು ಸಿಕ್ಕಿದ್ದವು. ಅಲ್ಲದೇ ಭಕ್ತರು ಈ ದೇವರಿಗೆ ವಿದೇಶಿ ಕರೆನ್ಸಿಯನ್ನು ಅರ್ಪಿಸಿದ್ದಾರೆ.

ಬೆಂಗಳೂರು[ಆ,. 01] ಕೇಂದ್ರ ಸರ್ಕಾರದಿಂದ ನಿಷೇಧಕ್ಕೆ ಗುರಿಯಾಗಿದ್ದ 500 ಹಾಗೂ 1000 ಮುಖ ಬೆಲೆಯ ನೋಟುಗಳು ಹುಂಡಿಯಲ್ಲಿ ಪತ್ತೆಯಾಗಿವೆ. ಮಾಗಡಿಯ ತಿರುಮಲೆ ರಂಗನಾಥ ಸ್ವಾಮಿ ದೇವಾಲಯದ ಹುಂಡಿಯಲ್ಲಿ ಬ್ಯಾನ್ ಆದ ನೋಟುಗಳು ಕಂಡುಬಂದಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

500 ರೂ ಮುಖಬೆಲೆಯ 10 ಹಾಗೂ 1000 ಮುಖಬೆಲೆಯ 3 ನೋಟುಗಳು ದೊರಕಿವೆ. ಇಂದು ಹುಂಡಿಯಲ್ಲಿನ ಹಣ ಏಣಿಕೆ ಕಾರ್ಯ ವೇಳೆ ಸಿಕ್ಕಿವೆ. ಬ್ಯಾನ್ ಆದ ನೋಟುಗಳನ್ನು ಹುಂಡಿಯಲ್ಲಿ ಭಕ್ತಾದಿಗಳು ಹಾಕಿದ್ದಾರೆ.

ಗುಡ್ ಬೈ2018: ಅಪನಗದೀಕರಣ ನಂತರದ ಭಾರತ!

ಜೊತೆಗೆ ಈ ಬಾರಿ ಹುಂಡಿಯಲ್ಲಿ ವಿಶೇಷವಾಗಿ ವಿದೇಶಿ ಕರೇನ್ಸಿಗಳು ಪತ್ತೆಯಾಗಿವೆ. ಅಮೇರಿಕಾ, ಇಂಗ್ಲೆಂಡ್, ಬ್ಯಾಂಕಾಕ್, ಹಾಗೂ ಯುಎಇ ದೇಶದ ನೋಟುಗಳು ಪತ್ತೆಯಾಗಿವೆ. ಹುಂಡಿಯಲ್ಲಿ ಒಟ್ಟು 27,87,160 ರೂ. ಸಂಗ್ರಹವಾಗಿತ್ತು.

2016ರ ನವೆಂಬರ್ 8 ರಂದು ಪ್ರಧಾನಿ ನರೇಂದ್ರ ಮೋದಿ ಮಾಡಿದ್ದ ಘೋಷಣೆ ಇಡೀ ದೇಶದಲ್ಲಿ ಅಲ್ಲೋಲ ಕಲ್ಲೋಲ ಮಾಡಿತ್ತು. ಕಪ್ಪು ಹಣಕ್ಕೆ ಕಡಿವಾಣ ಹಾಕಲು ಆಗ ಚಲಾವಣೆಯಲ್ಲಿದ್ದ 500 ಮತ್ತು 1000 ರೂ. ಮುಖಬೆಲೆಯ ನೋಟುಗಳನ್ನು ಬ್ಯಾನ್ ಮಾಡಿದ್ದರು.