ಮಹಾರಾಷ್ಟ್ರದಲ್ಲಿ ಫಲಿತಾಂಶ ಬಂದ ಬಳಿಕ ಶಿವಸೇನೆಗೆ ದುರಾಸೆ ಬಂದಿತ್ತು ಎಂದ ಸವದಿ| ಬಿಜೆಪಿ-ಎನ್.ಸಿ.ಪಿ ಸೇರಿ‌ ಸರ್ಕಾರ ಮಾಡಿದ್ದೇವೆ| ಮುಂದಿನ ಐದು ವರ್ಷದವರೆಗೂ ಈಗಿರುವಂತೆಯೇ ಸಿಎಂ-ಡಿಸಿಎಂ ಇರ್ತಾರೆ|

ಅಥಣಿ(ನ.23): ಮಹಾರಾಷ್ಟ್ರದಲ್ಲಿ ಚುನಾವಣೆ ಪೂರ್ವದಲ್ಲಿಯೇ ಮೈತ್ರಿ ಮಾಡಿಕೊಳ್ಳಲಾಗಿತ್ತು. ಮೊದಲಿನಿಂದಲೂ ಶಿವಸೇನೆ ನಮ್ಮೊಂದಿಗೆಯೇ ಇತ್ತು. ಆದರೆ, ಫಲಿತಾಂಶ ಬಂದ ಬಳಿಕ ಶಿವಸೇನೆಗೆ ದುರಾಸೆ ಬಂದಿತ್ತು. ಬಂದಿತ್ತು ಹೀಗಾಗಿ ಬಿಜೆಪಿ-ಎನ್.ಸಿ.ಪಿ ಸೇರಿ‌ ಸರ್ಕಾರ ಮಾಡಿದ್ದೇವೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಹೇಳಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಹಾರಾಷ್ಟ್ರ ರಾಜಕಾರಣದಲ್ಲಿ ಅಚ್ಚರಿ ಬೆಳವಣಿಗೆ ವಿಚಾರದ ಬಗ್ಗೆ ಶನಿವಾರ ನಗರದಲ್ಲಿ ಪ್ರತಿಕ್ರಿಯೆ ನೀಡಿದ ಸವದಿ ಅವರು, ಮಹಾರಾಷ್ಟ್ರದ ಫಲಿತಾಂಶ ಬಂದ ಬಳಿಕ ಶಿವಸೇನೆಗೆ ದುರಾಸೆ ಬಹಳ ಹೆಚ್ಚಾಗಿತ್ತು, ಆ ದುರಾಸೆಗೆ ಈಗ ಶಿವಸೇನೆ ಜೀವನದಲ್ಲಿಯೇ ಯಾವತ್ತು ಮರೆಯಲಾರದಂತಹ ಸನ್ನಿವೇಶ ಬಂದಿದೆ ಎಂದು ಹೇಳಿದ್ದಾರೆ. 

'ಮಹಾ' ರಾಜಕೀಯದಲ್ಲಿ ರೋಚಕ ತಿರುವು: 'ಸೇನೆ'ಗೆ ಶಾಕ್, ಫಡ್ನವೀಸ್ ಮತ್ತೆ ಸಿಎಂ!

ಇದೀಗ ಬಿಜೆಪಿ-ಎನ್.ಸಿ.ಪಿ ಸೇರಿ‌ ಸರ್ಕಾರ ರಚನೆ ಮಾಡಿದ್ದೇವೆ, ಮುಂದಿನ ಐದು ವರ್ಷದವರೆಗೂ ಈಗಿರುವಂತೆಯೇ ಸಿಎಂ-ಡಿಸಿಎಂ ಇರ್ತಾರೆ. ಅದೇ ರೀತಿಯಲ್ಲಿ ಅಧಿಕಾರ ಹಂಚಿಕೆಯಾಗಲಿದೆ ಎಂದು ಹೇಳಿದ್ದಾರೆ. 

ಮಹಾರಾಷ್ಟ್ರ ರಾಜಕೀಯ ರೋಚಕ ತಿರುವು ಪಡೆದಿದೆ. ರಾತ್ರೋ ರಾತ್ರಿ ಶಿವಸೇನೆಗೆ ಬಿಜೆಪಿ ಶಾಕ್ ನೀಡಿದ್ದು, ದೇವೇಂದ್ರ ಫಡ್ನವಿಸ್ ಸಿಎಂ ಹಾಗೂ ಅಜಿತ್ ಪವಾರ್ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.