Asianet Suvarna News Asianet Suvarna News

ಬೆಂಗಳೂರು ಗಲಭೆ ಪ್ರಕ​ರಣ ಸಿಬಿ​ಐಗೆ ವಹಿ​ಸುವ ಪ್ರಶ್ನೆಯೇ ಇಲ್ಲ: ಅಶ್ವ​ತ್ಥ​ನಾ​ರಾ​ಯಣ್‌

ಕಾಂಗ್ರೆಸ್‌, ಎಸ್‌​ಡಿ​ಪಿ​ಯಿಂದ ಸೌಹಾ​ರ್ದತೆ ಹಾಳು|ಎಸ್‌​ಡಿ​ಪಿಐ, ಪಿಎ​ಫ್‌ಐ ಸಂಘ​ಟ​ನೆ​ಗಳ ನಿಷೇ​ಧಕ್ಕೆ ತಯಾ​ರಿ| ಗಲಭೆ ಪ್ರಕ​ರ​ಣಕ್ಕೆ ಕಾಂಗ್ರೆಸ್‌ನ ಒಳ ಜಗ​ಳವೇ ಕಾರಣ ಎಂದು ಈಗ ಬಹಿ​ರಂಗ​| ಸರ್ಕಾರ ಪ್ರಕ​ರ​ಣದ ತನಿ​ಖೆ​ಯನ್ನು ಸಿಸಿ​ಬಿಗೆ ಒಪ್ಪಿ​ಸಿದ್ದು, ಅದರ ಮೂಲ​ಕವೇ ತನಿಖೆ ನಡೆ​ಯು​ತ್ತದೆ|

DCM Ashwathnarayan Talks Over Bengaluru Riot Investigation
Author
Bengaluru, First Published Aug 17, 2020, 7:51 AM IST

ಕೆ.ಆರ್‌.ಪೇಟೆ(ಆ.17): ಬೆಂಗ​ಳೂ​ರಿನ ಡಿ.ಜಿ. ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಗಲಭೆ ಪ್ರಕ​ರ​ಣ​ವನ್ನು ಸಿಬಿ​ಐಗೆ ಒಪ್ಪಿ​ಸುವ ಪ್ರಶ್ನೆಯೇ ಇಲ್ಲ ಎಂದು ಉಪಮುಖ್ಯ​ಮಂತ್ರಿ ಡಾ. ಸಿ.ಎನ್‌. ಅಶ್ವ​ತ್ಥ​ನಾ​ರಾ​ಯಣ್‌ ಸ್ಪಷ್ಟ​ಪ​ಡಿ​ಸಿ​ದ್ದಾರೆ. 

ಪಟ್ಟ​ಣದ ಬಿಜೆಪಿ ನಾಯಕ ಅಘಾ​ಲಯ ಮಂಜು​ನಾಥ್‌ ಅವರ ಮನೆಗೆ ಖಾಸಗಿ ಭೇಟಿ ನೀಡಿದ್ದ ವೇಳೆ ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ಅವರು, ಶಾಸಕ ಅಖಂಡ ಶ್ರೀನಿ​ವಾ​ಸ​ಮೂರ್ತಿ ಅವರು ಪ್ರಕ​ರ​ಣ​ವನ್ನು ಸಿಬಿಐ ತನಿ​ಖೆಗೆ ವಹಿ​ಸಿ ಎಂದು ಬೇಡಿಕೆ ಇಟ್ಟಿದ್ದು, ಅವರ ಅಪೇ​ಕ್ಷೆ​ಯನ್ನು ತಿಳಿ​ಸಿ​ದ್ದಾರೆ. ಆದರೆ ನವೀನ್‌ ಎಂಬ ಯುವಕ, ನಾನು ಕಾಂಗ್ರೆಸ್‌ ಕಾರ‍್ಯ​ಕರ್ತ, ನಾನೇ ಆ ಪೋಸ್ಟ್‌ ಹಾಕಿದ್ದು ಎಂದು ತಪ್ಪೊ​ಪ್ಪಿ​ಕೊಂಡಿ​ದ್ದಾ​ನೆ. ಅದಕ್ಕೆ ಉತ್ತರ ಕೊಡು​ವು​ದಕ್ಕೆ ಬೇರೆ​ಯದ್ದೇ ದಾರಿ ಇತ್ತು. ಆದರೆ ಕಾನೂ​ನನ್ನು ಕೈಗೆ​ತ್ತಿ​ಕೊ​ಳ್ಳಬಾರ​ದಿತ್ತು. ಸರ್ಕಾರ ತಕ್ಷ​ಣವೇ ಸ್ಪಂದಿಸಿ ಕಾನೂನು ಸುವ್ಯ​ವಸ್ಥೆ ಕಾಪಾ​ಡಿದ್ದು, ಗಲ​ಭೆ​ಕೋ​ರ​ರ ವಿರುದ್ಧ ಕ್ರಮ ವಹಿ​ಸ​ಲಾ​ಗಿ​ದೆ ಎಂದು ಹೇಳಿ​ದರು.

ಪೊಲೀಸರಿಂದ ತಪ್ಪಿಸಿಕೊಳ್ಳಲು ಬೆಂಗಳೂರು ಗಲಭೆಕೋರರ ನವರಂಗಿ ಆಟ!

ಗಲಭೆ ಪ್ರಕ​ರ​ಣಕ್ಕೆ ಕಾಂಗ್ರೆಸ್‌ನ ಒಳ ಜಗ​ಳವೇ ಕಾರಣ ಎಂದು ಈಗ ಬಹಿ​ರಂಗ​ವಾ​ಗಿದೆ. ಸರ್ಕಾರ ಪ್ರಕ​ರ​ಣದ ತನಿ​ಖೆ​ಯನ್ನು ಸಿಸಿ​ಬಿಗೆ ಒಪ್ಪಿ​ಸಿದ್ದು, ಅದರ ಮೂಲ​ಕವೇ ತನಿಖೆ ನಡೆ​ಯು​ತ್ತದೆ. ಸಿಬಿ​ಐಗೆ ವಹಿ​ಸು​ವು​ದಿಲ್ಲ ಎಂದು ಹೇಳಿ​ದರು.
ಎಸ್‌ಪಿ​ಡಿಐ ಹಾಗೂ ಪಿಎಫ್‌ಐ​ಗ​ಳಿಂದ ಟಾರ್ಗೆಟೆಡ್‌ ಕಿಲ್ಲಿಂಗ್‌ ತಂತ್ರ ನಡೆ​ಯು​ತ್ತಿದೆ. ಇದು ಹಿಂದಿ​ನಿಂದಲೂ ನಡೆ​ಯು​ತ್ತಿದ್ದು, ತನ್ವೀರ್‌ಶೇಠ್‌ ಮೇಲಿನ ಕೊಲೆ ಯತ್ನ ಹಾಗೂ ಮಡಿ​ಕೇರಿ ಪ್ರಕ​ರ​ಣ​ಗಳೇ ಇದಕ್ಕೆ ಉದಾ​ಹ​ರ​ಣೆ​ಯಾ​ಗಿದೆ ಎಂದು ಸ್ಪಷ್ಟ​ಪ​ಡಿ​ಸಿ​ದರು.

ಬೆಳ್ಳಿ ಗದೆ ನೀಡಿ ಸನ್ಮಾನ :

ಕೃಷ್ಣ​ರಾ​ಜ​ಪೇಟೆ ಪಟ್ಟ​ಣ​ದಲ್ಲಿ ಬಿಜೆಪಿ ನಾಯಕ ಅಘಾ​ಲಯ ಮಂಜು​ನಾಥ್‌ ಅವರು 2 ಲಕ್ಷ ರೂ. ಬೆಲೆ ಬಾಳುವ ಬೆಳ್ಳಿ ಗದೆ​ಯನ್ನು ಉಪ ಮುಖ್ಯ​ಮಂತ್ರಿ ಡಾ. ಅಶ್ವ​ತ್ಥ​ನಾ​ರಾ​ಯಣ ಅವ​ರಿಗೆ ನೀಡಿ ಸನ್ಮಾ​ನಿ​ಸಿ​ದರು. ಮಂಜು​ನಾಥ್‌ ಅವರ ಮನೆ​ಯಲ್ಲಿ ನಡೆದ ಖಾಸಗೀ ಕಾರ‍್ಯ​ಕ್ರ​ಮ​ದಲ್ಲಿ ಭಾಗ​ವ​ಹಿ​ಸಿದ್ದ ಅಶ್ವ​ತ್ಥ​ನಾ​ರಾ​ಯಣ ಅವ​ರಿಗೆ ಪೊಲೀಸ್‌ ಬ್ಯಾಂಡ್‌ ಮತ್ತು ಸಶಸ್ತ್ರ ಪೊಲೀ​ಸ​ರಿಗೆ ಗೌರವ ಸಮರ್ಪಿಸ​ಲಾ​ಯಿತು. ಕಾರ‍್ಯ​ಕ್ರ​ಮ​ದಲ್ಲಿ ಜಿಲ್ಲಾ ಉಸ್ತು​ವಾರಿ ಸಚಿವ ಡಾ. ನಾರಾ​ಯ​ಣ​ಗೌಡ, ಬಿಜೆಪಿ ಜಿಲ್ಲಾ​ಧ್ಯಕ್ಷ ಕೆ.ಜೆ. ವಿಜ​ಯ​ಕು​ಮಾರ್‌, ಬಿಜೆಪಿ ಮುಖಂಡರಾದ ಡಾ. ಸಿದ್ದ​ರಾ​ಮಯ್ಯ, ನಾಗ​ಣ್ಣ​ಗೌಡ, ತಾಲೂಕು ಬಿಜೆಪಿ ಅಧ್ಯಕ್ಷ ಪರ​ಮೇಶ್‌ ಅರ​ವಿಂದ್‌ ಪಾಲ್ಗೊಂಡಿ​ದ್ದರು.
 

Follow Us:
Download App:
  • android
  • ios