ದಾವಣಗೆರೆ ಬೆಣ್ಣೆ ದೋಸೆ ಸವಿದ ನೆರೆ ಸಂತ್ರಸ್ತರು
ಪ್ರವಾಹದಿಂದ ಸಂತ್ರಸ್ತರಾದ ಜನರಿಗೆ ಬಿಸಿಬಿಸಿ ದಾವಣಗೆರೆ ಬೆಣ್ಣೆ ದೋಸೆ ಉಣಬಡಿಸಲಾಯಿತು. ಬೆಳಗಾವಿಯ ಹುಕ್ಕೇರಿ ತಾಲೂಕಿನಲ್ಲಿ ದಾವಣಗೆರೆ ಜಿಲ್ಲಾ ಶ್ರೀ ಅನ್ನಪೂರ್ಣೇಶ್ವರ ಅಡುಗೆ ತಯಾರಕರ ಕ್ಷೇಮಾಭಿವೃದ್ಧಿ ಸಂಘದವರು ಬೆಣ್ಣೆ ದೋಸೆ, ಶಿರಾ, ಪೊಂಗಲ್, ಚಟ್ನಿ, ಬಿಸಿ ಬಿಸಿಯಾಗಿ ತಯಾರಿಸಿ ನೆರೆ ಸಂತ್ರಸ್ತರಿಗೆ ಬಡಿಸಿದರು.
ಬೆಳಗಾವಿ(ಆ.21): ಹುಕ್ಕೇರಿ ತಾಲೂಕಿನ ಪಾಶ್ಚಾಪೂರದಲ್ಲಿ ದಾವಣಗೆರೆ ಜಿಲ್ಲಾ ಶ್ರೀ ಅನ್ನಪೂರ್ಣೇಶ್ವರ ಅಡುಗೆ ತಯಾರಕರ ಕ್ಷೇಮಾಭಿವೃದ್ಧಿ ಸಂಘದವರು ಬೆಣ್ಣೆ ದೋಸೆ, ಶಿರಾ, ಪೊಂಗಲ್, ಚಟ್ನಿ, ಬಿಸಿ ಬಿಸಿಯಾಗಿ ತಯಾರಿಸಿ ನೆರೆ ಸಂತ್ರಸ್ತರಿಗೆ ಬಡಿಸಿದರು.
ಸಂಘದ ಸಹ ಕಾರ್ಯದರ್ಶಿ ಮಂಜುನಾಥ ಮಾತನಾಡಿ, ಆಹಾರ ಪದಾರ್ಥ ಕೊಡುವ ಬದಲು ನಾವು ಬೆಣ್ಣೆ ದೋಸೆ ತಯಾರಿಸಿ ಕೊಡುತ್ತಿದ್ದೇವೆ. ಈಗಾಗಲೇ ಮೂರ್ನಾಲ್ಕು ಬೆಣ್ಣೆದೋಸೆ ಉಣಬಡಿಸಿದ್ದೇವೆ. ನಮ್ಮ ಸಂಘದಿಂದ ಸುಮಾರು 50,000 ಬೆಣ್ಣೆ ದೋಸೆ ತಯಾರಿಸಿ ಸಂತ್ರಸ್ತರಿಗೆ ನೀಡುವ ಉದ್ದೇಶ ಹೊಂದಲಾಗಿದ್ದು, ಈಗ 15,000 ಬೆಣ್ಣೆ ದೋಸೆ ಉಣಬಡಿಸಿದ್ದೇವೆ ಎಂದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಬೆಣ್ಣೆ ದೋಸೆ ಸವಿದ ಶಾಸಕ ಸತೀಶ್ ಜಾರಕಿಹೊಳಿ ಮಾತನಾಡಿ, ನೆರೆ ಸಂತ್ರಸ್ತರಿಗೆ ರಾಜ್ಯದ ಸಂಘ ಸಂಸ್ಥೆಗಳು, ಎನ್ಜಿಒಗಳು, ದಾನಿಗಳು ಸಾಕಷ್ಟು ಪ್ರಮಾಣದಲ್ಲಿ ನೆರವಾಗುತ್ತಿದ್ದಾರೆ. ಇದು ಸಂತಸಕರ ಎಂದರು.
ಬೆಳಗಾವಿ: ಮುಳುಗಡೆಯಾಗಿದ್ದವುಗಳ ಪೈಕಿ 6 ಸೇತುವೆ ಸಂಚಾರ ಮುಕ್ತ
ಜಿಪಂ ಸದಸ್ಯ ಮಂಜುನಾಥ ಪಾಟೀಲ, ವಂದನಾ ಶಿವಾಜಿ ಬಸನಾಯಿಕ, ಅಬ್ದುಲಗನಿ ದರ್ಗಾ, ಎನ್.ಎಸ್. ಮೋಮಿನ, ಡಾ. ಅಶೋಕ ಉಮನಾಬಾದಿಮಠ, ವಿನೋದ ಡೊಂಗ್ರೆ, ಫಜಲ್ ಮಕಾನದಾರ, ಅಲ್ಲಾ ಅರಳಿಕಟ್ಟಿ, ಶಿವಕುಮಾರ ಗುಡಗನಟ್ಟಿ, ವಿನಾಯಕ ಹಜ್ಜೆ, ಸಂತೋಷ ಮುತ್ನಾಳ, ಅಮರ ಉಮನಾಬಾದಿಮಠ, ವಿನೋದ ಉಮನಾಬಾದಿಮಠ, ರಫೀಕ ನದಾಫ, ಮಾರುತಿ ನಾಯಿಕ, ಮಹ್ಮದ ರಫೀಕ ಮೋಮಿನ, ಬಾನು ನದಾಫ್, ಸರಫರಾಜ ಪೀರಜಾದೆ ಮತ್ತು ದಾವಣಗೆರೆ ಜಿಲ್ಲಾ ಶ್ರೀ ಅನ್ನಪೂರ್ಣೇಶ್ವರ ಅಡುಗೆ ತಯಾರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಚ್.ವಿ. ಶಾಸ್ತ್ರೀ, ಉಪಾಧ್ಯಕ್ಷ ಜವಳಿ ನಾಗರಾಜ, ಕಾರ್ಯದರ್ಶಿ ಪ್ರಭುಸ್ವಾಮಿ ಮತ್ತು ಮಂಜುನಾಥ, ಖಜಾಂಚಿ ಈ ನಾಗರಾಜ, ಸದಸ್ಯರು ದೋಸೆ ತಯಾರಿಕೆ ಕಾರ್ಯದಲ್ಲಿ ನಿರತರಾಗಿ ಸಂತ್ರಸ್ತರಿಗೆ ಉಣಬಡಿಸಿದರು.