Asianet Suvarna News Asianet Suvarna News

ಚಿಕ್ಕಮಗಳೂರಲ್ಲಿ ಕೋವಿಡ್ ಟೆಸ್ಟಿಂಗ್ ಲ್ಯಾಬ್ ಕಾರ್ಯಾರಂಭ

ಲ್ಯಾಬ್‌ ಅನ್ನು ಜುಲೈ ಎರಡನೇ ವಾರದಲ್ಲಿ ಆರಂಭಿಸಲು ಪ್ಲಾನ್‌ ಮಾಡಿಕೊಳ್ಳಲಾಗಿತ್ತು. ಆದರೆ, ಲ್ಯಾಬ್‌ನ ಉಪಕರಣಗಳು ಇಂಗ್ಲೆಂಡ್‌ನಿಂದ ಬರಲು ತಡವಾಗಿದ್ದರಿಂದ ಲ್ಯಾಬ್‌ ಆರಂಭಕ್ಕೆ ಕೆಲವು ದಿನಗಳು ತಡವಾಗಿದೆ. ಈಗ ಯಂತ್ರೋಪಕರಣಗಳನ್ನು ಜೋಡಣೆ ಮಾಡಲಾಗಿದೆ ಎಂದು ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ ರವಿ ಹೇಳಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

COVID Testing Lab Operation in Chikkamagaluru Says District In Charge Minister CT Ravi
Author
Chikkamagaluru, First Published Jul 25, 2020, 12:39 PM IST

ಚಿಕ್ಕಮಗಳೂರು(ಜು.25): ಜಿಲ್ಲಾ ಕೇಂದ್ರದಲ್ಲಿ ಸ್ಥಾಪನೆ ಮಾಡಲಾಗಿರುವ ಕೋವಿಡ್‌ ಟೆಸ್ಟಿಂಗ್‌ ಲ್ಯಾಬ್‌ ಶನಿವಾರ ಕಾರ್ಯಾರಂಭ ಮಾಡಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಹೇಳಿದರು.

ಕೊರೋನಾ ಪಾಸಿಟಿವ್‌ ಬಂದಿರುವ ಹಿನ್ನೆಲೆಯಲ್ಲಿ 19 ದಿನಗಳ ಕಾಲ ಹೋಂ ಕ್ವಾರೆಂಟೈನ್‌ನಲ್ಲಿದ್ದ ಸಚಿವರು ಶುಕ್ರವಾರ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕೋವಿಡ್‌ ಪರೀಕ್ಷಾ ವರದಿ ತಡವಾಗಿ ಬರುತ್ತಿದ್ದರಿಂದ ಇಲ್ಲಿ ಸಕಾಲದಲ್ಲಿ ಚಿಕಿತ್ಸೆ ನೀಡಲು ಆರೋಗ್ಯ ಇಲಾಖೆಗೆ ಕಷ್ಟವಾಗುತ್ತಿತ್ತು. ಇದನ್ನು ಮನಗಂಡು ಜಿಲ್ಲಾ ಕೇಂದ್ರದಲ್ಲಿ ಕೋವಿಡ್‌ ಪರೀಕ್ಷಾ ಪ್ರಯೋಗಾಲಯ ತೆರೆಯಲು ಸರ್ಕಾರ ಅನುಮತಿಯ ಜತೆಗೆ ಅನುದಾನ ನೀಡಿದೆ ಎಂದು ಹೇಳಿದರು.

ಲ್ಯಾಬ್‌ ಅನ್ನು ಜುಲೈ ಎರಡನೇ ವಾರದಲ್ಲಿ ಆರಂಭಿಸಲು ಪ್ಲಾನ್‌ ಮಾಡಿಕೊಳ್ಳಲಾಗಿತ್ತು. ಆದರೆ, ಲ್ಯಾಬ್‌ನ ಉಪಕರಣಗಳು ಇಂಗ್ಲೆಂಡ್‌ನಿಂದ ಬರಲು ತಡವಾಗಿದ್ದರಿಂದ ಲ್ಯಾಬ್‌ ಆರಂಭಕ್ಕೆ ಕೆಲವು ದಿನಗಳು ತಡವಾಗಿದೆ. ಈಗ ಯಂತ್ರೋಪಕರಣಗಳನ್ನು ಜೋಡಣೆ ಮಾಡಲಾಗಿದೆ. ಪ್ರಾಯೋಗಿಕವಾಗಿ ಪರೀಕ್ಷೆಯೂ ಆರಂಭಿಸಲಾಗಿದೆ. ಇಲ್ಲಿ ಮೈಕ್ರೋಬಯೋಲಿಜಿಸ್ಟ್‌ ಇಲ್ಲ. ಆದರೂ, ಹಾಸನ ಅಥವಾ ಮಂಡ್ಯದಿಂದ ತಾತ್ಕಾಲಿಕವಾಗಿ ಅವರನ್ನು ಕರೆಸಿಕೊಳ್ಳಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.

ಜಿಲ್ಲೆಯಲ್ಲಿ ಕೊರೋನಾ ಸಮುದಾಯಕ್ಕೆ ಹರಡಿಕೊಂಡಿಲ್ಲ. ಸದ್ಯದಲ್ಲೇ ಕೋವಿಡ್‌ ಆಸ್ಪತ್ರೆ ಹಾಗೂ ಕೋವಿಡ್‌ ನಿಗಾ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು. ಚಿಕ್ಕಮಗಳೂರು ಕೋವಿಡ್‌ ಆಸ್ಪತ್ರೆಯಲ್ಲಿ ದಾಖಲಾಗಿದ್ದವರಿಗೆ ಊಟದ ವ್ಯವಸ್ಥೆಯಲ್ಲಿ ವ್ಯತ್ಯಯ ಕಂಡು ಬಂದಿದ್ದರಿಂದ ಸಂಬಂಧಿತ ನೋಡಲ್‌ ಅಧಿಕಾರಿಗಳಿಗೆ ನೋಟಿಸ್‌ ಜಾರಿ ಮಾಡುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಶಿವಮೊಗ್ಗದಲ್ಲಿ ಗಾಂಜಾ ಮಾರಾಟ: ಮೂವರು ಆರೋಪಿಗಳು ಅಂದರ್

ಕೊರೋನಾ ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗೆ ವೇತನ ವಿಳಂಬವಾಗಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಾಯಂ ನೌಕರರ ವೇತನಕ್ಕೆ ತೊಂದರೆ ಆಗಿಲ್ಲ. ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವವರಿಗೆ ತೊಂದರೆಯಾಗಿದೆ. ಆದಷ್ಟುಬೇಗ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಹೇಳಿದರು.

ಕೊರೋನಾ ವೈರಸ್‌ ಸಂಬಂಧ, ಗಂಟಲ ಹಾಗೂ ಮೂಗಿನ ದ್ರವ ಪರೀಕ್ಷಾ ವರದಿಯಲ್ಲಿ ವ್ಯತ್ಯಾಸ ಬರುತ್ತಿರುವ ಕುರಿತ ಪ್ರಶ್ನೆಗೆ ಉತ್ತರಿಸಿ, ಹಾಸನದ ಲ್ಯಾಬ್‌ನಲ್ಲಿ ವರದಿ ಅಪ್‌ಲೋಡ್‌ ಮಾಡುವ ಸಂದರ್ಭದಲ್ಲಿ ಈ ವ್ಯತ್ಯಾಸ ಕಂಡು ಬಂದಿದೆ. ಯಾವುದೇ ಸಂಪರ್ಕ ಇಲ್ಲದ ವ್ಯಕ್ತಿಗಳ ಬಗ್ಗೆ ಪಾಸಿಟಿವ್‌ ವರದಿ ಬಂದ ಒಂದೆರಡು ದಿನಗಳ ಅಂತರದಲ್ಲಿ ಮತ್ತೆ ಪರೀಕ್ಷೆ ಮಾಡಿಸಿದಾಗ ನೆಗೆಟಿವ್‌ ಬಂದಿದೆ. ಹೀಗೆ ವರದಿ ಕೊಡುವಲ್ಲಿ ವ್ಯತ್ಯಾಸ ಕಂಡು ಬಂದಿದೆ ಎಂದು ಹೇಳಿದರು.

ಸರ್ಕಾರಕ್ಕೆ ಸಚಿವರ ಸಲಹೆ

- ಯಾವುದೇ ವ್ಯಕ್ತಿಯಲ್ಲಿ ಕೋವಿಡ್‌ ಪಾಸಿಟಿವ್‌ ಬಂದರೆ ಆತ ವಾಸವಾಗಿರುವ ಪ್ರದೇಶದ 100 ಮೀಟರ್‌ ವ್ಯಾಪ್ತಿಯಲ್ಲಿ ಸೀಲ್‌ಡೌನ್‌ ಮಾಡುತ್ತಿರುವ ಬಗ್ಗೆ ಪರಿಶೀಲನೆ ನಡೆಸಬೇಕು. ಇಷ್ಟುಪ್ರದೇಶ ಸೀಲ್‌ಡೌನ್‌ ಅವಶ್ಯಕತೆ ಇಲ್ಲ.

- ವಾರಗಟ್ಟಲೆ ಒಂದು ಪ್ರದೇಶವನ್ನು ಸೀಲ್‌ಡೌನ್‌ ಮಾಡಬಾರದು.

- ಕೋವಿಡ್‌ ಸೋಂಕಿತ ವ್ಯಕ್ತಿ ಮೃತಪಟ್ಟರೆ, ಆತನ ಮೃತ ದೇಹವನ್ನು ಮುಟ್ಟಿದವರಿಗೆ ಸೋಂಕು ತಗಲುತ್ತದೆಂಬ ಭ್ರಮೆಯಲ್ಲಿ ಕೆಲವರು ಇದ್ದಾರೆ. ಯಾರೇ ಮೃತಪಟ್ಟರೆ ಗೌರವಯುತವಾಗಿ ಅವರ ಸಂಸ್ಕಾರ ನಡೆಸಬೇಕು. ಅದಕ್ಕಾಗಿ ತಂಡವನ್ನು ರಚನೆ ಮಾಡಲಾಗುವುದು. ಅದರ ನೇತೃತ್ವವನ್ನು ನಾನೇ ವಹಿಸುತ್ತೇನೆ.

- ಯಾವುದೇ ವ್ಯಕ್ತಿಯಲ್ಲಿ ಕೋವಿಡ್‌ ಪಾಸಿಟಿವ್‌ ಬಂದರೆ ಆತ ವಾಸವಾಗಿರುವ ಪ್ರದೇಶದ 100 ಮೀಟರ್‌ ವ್ಯಾಪ್ತಿಯಲ್ಲಿ ಸೀಲ್‌ಡೌನ್‌ ಮಾಡುತ್ತಿರುವ ಬಗ್ಗೆ ಪರಿಶೀಲನೆ ನಡೆಸಬೇಕು. ಇಷ್ಟುಪ್ರದೇಶ ಸೀಲ್‌ಡೌನ್‌ ಅವಶ್ಯಕತೆ ಇಲ್ಲ.

- ವಾರಗಟ್ಟಲೆ ಒಂದು ಪ್ರದೇಶವನ್ನು ಸೀಲ್‌ಡೌನ್‌ ಮಾಡಬಾರದು.

- ಕೋವಿಡ್‌ ಸೋಂಕಿತ ವ್ಯಕ್ತಿ ಮೃತಪಟ್ಟರೆ, ಆತನ ಮೃತ ದೇಹವನ್ನು ಮುಟ್ಟಿದವರಿಗೆ ಸೋಂಕು ತಗಲುತ್ತದೆಂಬ ಭ್ರಮೆಯಲ್ಲಿ ಕೆಲವರು ಇದ್ದಾರೆ. ಯಾರೇ ಮೃತಪಟ್ಟರೆ ಗೌರವಯುತವಾಗಿ ಅವರ ಸಂಸ್ಕಾರ ನಡೆಸಬೇಕು. ಅದಕ್ಕಾಗಿ ತಂಡವನ್ನು ರಚನೆ ಮಾಡಲಾಗುವುದು. ಅದರ ನೇತೃತ್ವವನ್ನು ನಾನೇ ವಹಿಸುತ್ತೇನೆ.

Follow Us:
Download App:
  • android
  • ios