Asianet Suvarna News Asianet Suvarna News

ಕೋವಿಡ್‌ ಪಾಸಿ​ಟಿವಿಟಿ ದರ ಕುಸಿ​ದರೂ ನಿಲ್ತಿಲ್ಲ ಸೋಂಕಿ​ತರ ಸಾವು..!

* ಜೂನ್‌ ತಿಂಗಳಲ್ಲೂ ಸಾವಿನ ದ್ವಿಶ​ತಕ ಬಾರಿ​ಸಿದ ಕೋವಿಡ್‌
* ಧಾರ​ವಾಡ ಜಿಲ್ಲೆ​ಯಲ್ಲಿ ಮೇ ತಿಂಗ​ಳಲ್ಲಿ 266, ಜೂನ್‌ನಲ್ಲಿ 237 ಸೋಂಕಿ​ತರ ಸಾವು
* ಮೇ ತಿಂಗ​ಳಲ್ಲಿ 25281 ಪಾಸಿ​ಟಿವ್‌ ಪ್ರಕ​ರಣ, ಜೂನ್‌ನಲ್ಲಿ ಬರೀ 4239 ಪ್ರಕ​ರ​ಣ
 

Covid Death Ratio Not Decrease in Dharwad grg
Author
Bengaluru, First Published Jul 4, 2021, 11:22 AM IST

ಬಸ​ವ​ರಾಜ ಹಿರೇ​ಮ​ಠ

ಧಾರ​ವಾಡ(ಜು.04): ಜಿಲ್ಲೆ​ಯಲ್ಲಿ ನಿತ್ಯ 30-50ರ ಆಸು​ಪಾ​ಸಿ​ನಲ್ಲಿ ಪಾಸಿ​ಟಿವ್‌ ಪ್ರಕ​ರ​ಣ​ಗಳು ಪತ್ತೆ​ಯಾ​ಗುವ ಮೂಲಕ ಪಾಸಿ​ಟಿ​ವಿಟಿ ದರ ಕುಸಿ​ದ ಸಮಾ​ಧಾನ ಒಂದೆ​ಡೆ​ಯಾ​ದರೆ, ಇನ್ನೊಂದೆಡೆ ಕೋವಿಡ್‌ ಸೋಂಕಿ​ತರ ಮರಣ ಪ್ರಮಾಣ ಮಾತ್ರ ಇಳಿ​ಕೆ​ಯಾ​ಗದೇ ಇರು​ವುದು ಬೇಸ​ರದ ಸಂಗತಿ.

ಪ್ರಸ್ತುತ ರಾಜ್ಯದಲ್ಲಿ ಕೋವಿಡ್‌ ಎರಡನೇ ಅಲೆಯ ಅಟ್ಟಹಾಸ ಕಡಿಮೆಯಾಗಿದೆ. ಇದೀಗ ರಾಜ್ಯದಲ್ಲಿ ಅನ್‌ಲಾಕ್‌ ಪ್ರಕ್ರಿಯೆಯೂ ಹಂತ ಹಂತ​ವಾಗಿ ನಡೆ​ಯು​ತ್ತಿದೆ. ವಾರದಿಂದ ವಾರಕ್ಕೆ ಹೆಚ್ಚು ಹೆಚ್ಚು ಅನ್‌ಲಾಕ್‌ ಪ್ರಕ್ರಿಯೆ ನಡೆಯುತ್ತಲೇ ಇದೆ. ಇದಕ್ಕೆ ಧಾರವಾಡ ಜಿಲ್ಲೆ ಸಹ ಹೊರತಾಗಿಲ್ಲ. ಕಳೆದ ಮೇ ತಿಂಗಳಲ್ಲಿ ಜಿಲ್ಲೆಯಲ್ಲಿ ಭಾರೀ ಪ್ರಮಾಣದಲ್ಲಿ ಸೋಂಕಿತರು ಪತ್ತೆಯಾಗಿದ್ದರು. ಆದರೆ, ಜೂನ್‌ ತಿಂಗಳಿನಲ್ಲಿ ಆ ಸಂಖ್ಯೆ ಕಡಿಮೆಯಾಯಿತು. ಸದ್ಯಕ್ಕೆ ಜಿಲ್ಲೆಯಲ್ಲಿ ಪಾಸಿಟಿವಿಟಿ ಪ್ರಮಾಣ ಶೇ. 3ಕ್ಕಿಂತ ಕಡಿಮೆ ಇದೆ. ಆದರೆ, ನಿತ್ಯವೂ ದಾಖಲಾಗುತ್ತಿರುವ ಸಾವಿನ ಸಂಖ್ಯೆ ಮಾತ್ರ ಆತಂಕ ಸೃಷ್ಟಿ​ಸಿದೆ.

ಒಂದೇ ತಿಂಗಳಲ್ಲಿ 237 ಸೋಂಕಿತರ ಸಾವು:

ಕಳೆದ ಮೇ ತಿಂಗ​ಳಲ್ಲಿ 25281 ಪ್ರಕ​ರ​ಣ​ಗಳು ದಾಖ​ಲಾ​ದರೆ 266 ಜನ ಸೋಂಕಿ​ತರು ಮೃತ​ಪ​ಟ್ಟಿ​ದ್ದರು. ಆದರೆ, ಜೂನ್‌ ತಿಂಗಳ 30 ದಿನ​ಗ​ಳಲ್ಲಿ ಪಾಸಿ​ಟಿವ್‌ ಪ್ರಕ​ರ​ಣ​ಗಳ ಸಂಖ್ಯೆ ತೀರಾ ಕುಸಿದು ಬರೀ 4239 ಪ್ರಕ​ರ​ಣ​ಗ​ಳಾ​ದವು. ಆದರೆ, ಸಾವಿನ ಸಂಖ್ಯೆ ಮಾತ್ರ 237. ಆದ್ದ​ರಿಂದ ಪಾಸಿ​ಟಿವಿ ದರ ಕಡಿ​ಮೆ​ಯಾ​ದರೂ ಸಾವಿನ ಸಂಖ್ಯೆ ಕಡಿಮೆ ಆಗದೇ ಇರು​ವುದು ಇದೀಗ ಜಿಲ್ಲಾ​ಡ​ಳಿ​ತದ ಎದು​ರಿನ ಸವಾಲು. ಮೊದಲ ಅಲೆಗೆ ಹೋಲಿಸಿದಲ್ಲಿ ಎರಡನೇ ಅಲೆ ಜಿಲ್ಲೆಯನ್ನು ಬೇಗನೇ ವ್ಯಾಪಿಸಿಕೊಂಡಿತ್ತು. ಎರಡನೇ ಅಲೆಯ ತೀವ್ರತೆ ಮೇ ತಿಂಗಳಲ್ಲಿ ಅತೀ ಜೋರಾ​ಗಿತ್ತು. ಅದೇ ರೀತಿ ಸಾವಿನ ಪ್ರಮಾ​ಣವೂ ಅಷ್ಟೇ ಪ್ರಮಾ​ಣ​ದ​ಲ್ಲಿತ್ತು. ಜಿಲ್ಲೆಯಲ್ಲಿ ನಿತ್ಯವೂ ಸಾವಿರದ ಗಡಿ ದಾಟುತ್ತಿದ್ದ ಸೋಂಕಿತರ ಸಂಖ್ಯೆ ಜೂನ್‌ ತಿಂಗಳ ಅಂತ್ಯಕ್ಕೆ ಎರಡಂಕಿಗೆ ಬಂದು ನಿಂತಿತ್ತು. ಆದರೆ, ಸಾವಿನ ಸಂಖ್ಯೆ ಮಾತ್ರ ಬದ​ಲಾ​ಗ​ಲಿಲ್ಲ. ಇದು ವೈದ್ಯರು ಸೇರಿ​ದಂತೆ ಜಿಲ್ಲಾ​ಡ​ಳಿ​ತಕ್ಕೆ ಅಚ್ಚರಿ ಮೂಡಿ​ಸಿ​ದೆ.

ಹುಬ್ಬಳ್ಳಿ: ಲಸಿಕೆ ಪಡೆಯಲು ಕಿಮ್ಸ್ ಎದುರು ಜನವೋ ಜನ..!

ರಾಜ್ಯ​ದಲ್ಲಿ 4ನೇ ಸ್ಥಾನ:

ಇಡೀ ರಾಜ್ಯ​ದಲ್ಲಿ ಧಾರ​ವಾಡ ಜಿಲ್ಲೆಯು ಕೋವಿಡ್‌ ಸೋಂಕಿ​ತರ ಸಂಖ್ಯೆ​ಯಲ್ಲಿ 4ನೇ ಸ್ಥಾನ​ದ​ಲ್ಲಿದೆ. ಮೊದಲ ಅಲೆ​ಯಿಂದಲೂ ಜಿಲ್ಲೆ​ಯಲ್ಲಿ ಹೆಚ್ಚಿನ ಪ್ರಮಾ​ಣದ ಮರಣ ಸಂಖ್ಯೆ ಇದ್ದು ಈಗಲೂ ಮುಂದು​ವ​ರೆ​ದಿದೆ. ಮೊದಲ ಸ್ಥಾನ ಬೆಂಗ​ಳೂರು ನಗರ (15626) ನಂತ​ರ​ದಲ್ಲಿ ಮೈಸೂ​ರು (2177), ಬಳ್ಳಾರಿ (1613) ಹಾಗೂ ಧಾರ​ವಾಡ (1206) ಸೋಂಕಿ​ತರು ಮೃತ​ಪ​ಟ್ಟಿ​ದ್ದಾರೆ.

ಸೋಂಕಿತರ ಸಂಖ್ಯೆಯಲ್ಲಿ ತೀವ್ರ ಇಳಿಮುಖವಾಗಿರು​ವುದು ಸಮಾಧಾನದ ವಿಷಯ. ಆದರೆ, ಸಾವಿನ ಸಂಖ್ಯೆಯಲ್ಲಿ ಇಳಿಕೆ ಕಂಡು ಬಂದಿಲ್ಲ. ಉಳಿದ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ಜಿಲ್ಲೆಯಲ್ಲಿ ಹೆಚ್ಚು ಐಸಿಯು ಕೇಸುಗಳಿವೆ. ಎಲ್ಲ ಜಿಲ್ಲೆಯಲ್ಲಿ ಈ ಪ್ರಕರಣಗಳು ಎರಡು ಅಂಕಿಯಲ್ಲಿದ್ದರೆ ನಮ್ಮ ಜಿಲ್ಲೆಯಲ್ಲಿ ಅದು ಮೂರು ಅಂಕಿಗಳಲ್ಲಿದೆ. ಐಸಿಯುನಲ್ಲಿ ದಾಖಲಾದವರು ಚಿಕಿತ್ಸೆ ಫಲಿಸದೇ ಇದೀಗ ಮೃತಪಡುತ್ತಿದ್ದಾರೆ. ಕೆಲವೇ ದಿನ​ಗ​ಳಲ್ಲಿ ಸಾವಿನ ಸಂಖ್ಯೆಯೂ ಕಡಿ​ಮೆ​ಯಾ​ಗ​ಲಿದೆ ಎಂದು ಜಿಲ್ಲಾ​ಧಿ​ಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ. 
 

Follow Us:
Download App:
  • android
  • ios