Asianet Suvarna News Asianet Suvarna News

ಯಾವ್ಯಾವ ಜಿಲ್ಲೆಗಳಲ್ಲಿ ಕೊರೊನಾ ಪಾಸಿಟೀವ್ ಕೇಸ್? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್..!

ಗ್ರೀನ್ ಝೋನ್‌ನಲ್ಲಿರುವ ರಾಯಚೂರಿಗೆ ಸಂಕಷ್ಟ ತಂದಿಟ್ಟಿದ್ದಾರೆ ವಲಸೆ ಕಾರ್ಮಿಕರು. ರಾಯಚೂರಿನಲ್ಲಿ 6 ಜನರಿಗೆ ಕೊರೊನಾ ಇರುವ ಶಂಕೆ ವ್ಯಕ್ತವಾಗಿದೆ. ವಿವಿಧ ರಾಜ್ಯಗಳಿಂದ 800 ಕ್ಕೂ ಹೆಚ್ಚು ಜನ ಆಗಮಿಸಿದ್ದಾರೆ. ಕ್ವಾರಂಟೈನ್‌ನಲ್ಲಿದ್ದ 6 ಮಂದಿಗೆ ಕೊರೋನಾ ಶಂಕೆ ವ್ಯಕ್ತವಾಗಿದೆ. 

Covid 19 Raichuru Uttara Kannada Hassana Kalaburagi updates
Author
Bengaluru, First Published May 18, 2020, 2:02 PM IST

ಬೆಂಗಳೂರು (ಮೇ. 18): ಗ್ರೀನ್ ಝೋನ್‌ನಲ್ಲಿರುವ ರಾಯಚೂರಿಗೆ ಸಂಕಷ್ಟ ತಂದಿಟ್ಟಿದ್ದಾರೆ ವಲಸೆ ಕಾರ್ಮಿಕರು. ರಾಯಚೂರಿನಲ್ಲಿ 6 ಜನರಿಗೆ ಕೊರೊನಾ ಇರುವ ಶಂಕೆ ವ್ಯಕ್ತವಾಗಿದೆ. ವಿವಿಧ ರಾಜ್ಯಗಳಿಂದ 800 ಕ್ಕೂ ಹೆಚ್ಚು ಜನ ಆಗಮಿಸಿದ್ದಾರೆ. ಕ್ವಾರಂಟೈನ್‌ನಲ್ಲಿದ್ದ 6 ಮಂದಿಗೆ ಕೊರೋನಾ ಶಂಕೆ ವ್ಯಕ್ತವಾಗಿದೆ. 

"


ಕಲಬುರಗಿಯಲ್ಲಿ  ಐವರಿಗೆ ಕೊರೊನಾ ಪಾಸಿಟೀವ್ ಬಂದಿದೆ. ಮುಂಬೈ ಸಂಪರ್ಕ ಕಂಟಕವಾಗುತ್ತಿದೆ. ಕಳೆದ 1 ವಾರದಲ್ಲಿ ಜಿಲ್ಲೆಯಲ್ಲಿ 37 ಜನರಿಗೆ ಕೊರೋನಾ ಬಂದಿದೆ.  ಇಲ್ಲಿಯವರೆಗೆ 104 ಜನರಿಗೆ ಪಾಸಿಟೀವ್ ಬಂದಿದೆ. 

"

ಮಹಾರಾಷ್ಟ್ರದಿಂದ ಬಂದ ಕಾರ್ಮಿಕರಲ್ಲಿ ಕೊರೊನಾ ಶಂಕೆ ವ್ಯಕ್ತವಾಗುತ್ತಿದೆ. ಉತ್ತರ ಕನ್ನಡಕ್ಕೆ ಆಘಾತ ಎದುರಾಗಿದೆ. ಹೊನ್ನಾವರ, ಮುಂಡಗೋಡಿಗೂ ಕೊರೊನಾ ಎಂಟ್ರಿ ಕೊಟ್ಟಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. 

"

ಹಾಸನಕ್ಕೆ ಕೊರೊನಾ ಹೊತ್ತು ತಂದಿದ್ದಾರೆ ಕಾರ್ಮಿಕರು. ಮುಂಬೈನಿಂದ ಬಂದ ನಾಲ್ವರಿಗೆ ಪಾಸಿಟೀವ್ ಬಂದಿದೆ ಎನ್ನಲಾಗಿದೆ. ಹಾಸನದಲ್ಲಿ ಸೋಂಕಿತರ ಸಂಖ್ಯೆ 30 ಕ್ಕೆ ಏರಿಕೆಯಾಗಿದೆ ಎನ್ನಲಾಗಿದೆ. 

"

ಬಳ್ಳಾರಿಯ ಸತ್ಯನಾರಾಯಣ ಪೇಟೆಯ ವ್ಯಕ್ತಿಗೆ ಕೊರೋನಾ ಬಂದಿದೆ. ಸತ್ಯನಾರಾಯಣ ಪೇಟೆಯ 6 ನೇ ಕ್ರಾಸ್ ಸೀಲ್ ಡೌನ್ ಮಾಡಲಾಗಿದೆ. ಇಡೀ ಏರಿಯಾವನ್ನು ಕಂಪ್ಲೀಟ್ ಸ್ಯಾನಿಟೈಸ್ ಮಾಡಲಾಗಿದೆ. 

"

Follow Us:
Download App:
  • android
  • ios