Asianet Suvarna News Asianet Suvarna News

ಗೋಕಾಕ: ಬಾಕಿ ಬಿಲ್‌ಗಾಗಿ ಆತ್ಮಹತ್ಯೆಗೆ ಗುತ್ತಿಗೆದಾರ ಯತ್ನ

ರಾಮಣ್ಣ ಅಡಿವೆಪ್ಪ ಸರಕಪ್ಪಗೋಳ ಆತ್ಮಹತ್ಯೆಗೆ ಯತ್ನಿಸಿದ ಗುತ್ತಿಗೆದಾರ. ಸುಮಾರು 2 ಗಂಟೆಗಳ ಕಾಲ ಶಾಲೆಯ ಕಟ್ಟಡದ ಮೇಲೆ ಕುಳಿತಿದ್ದರು. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸ್‌ ಸಿಬ್ಬಂದಿ ಗುತ್ತಿಗೆದಾರನ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. 

Contractor Attempt Suicide over Pending Bill at Gokak in Belagavi grg
Author
First Published Aug 20, 2023, 8:31 PM IST | Last Updated Aug 20, 2023, 8:31 PM IST

ಗೋಕಾಕ(ಆ.20): ಶಾಲಾ ಕಟ್ಟಡ ಕಾಮಗಾರಿ ಮುಗಿಸಿದರೂ ಬಾಕಿ ಬಿಲ್‌ ಪಾವತಿಸದ ಹಿನ್ನೆಲೆ ಶಾಲೆಯ ಕಟ್ಟಡ ಏರಿ ಗುತ್ತಿಗೆದಾರ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ ಗ್ರಾಮೀಣ ಪೊಲೀಸ್‌ ಠಾಣಾ ವ್ಯಾಪ್ತಿಯ ಬೆಣಚಿನಮರ್ಡಿ ಗ್ರಾಮದಲ್ಲಿ ಶನಿವಾರ ನಡೆದಿದೆ. 

ರಾಮಣ್ಣ ಅಡಿವೆಪ್ಪ ಸರಕಪ್ಪಗೋಳ ಆತ್ಮಹತ್ಯೆಗೆ ಯತ್ನಿಸಿದ ಗುತ್ತಿಗೆದಾರ. ಸುಮಾರು 2 ಗಂಟೆಗಳ ಕಾಲ ಶಾಲೆಯ ಕಟ್ಟಡದ ಮೇಲೆ ಕುಳಿತಿದ್ದರು. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸ್‌ ಸಿಬ್ಬಂದಿ ಗುತ್ತಿಗೆದಾರನ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಸರ್ವರ್‌ ಕಾಟ: ಪಡಿತರ ಚೀಟಿದಾರರ ಪರದಾಟ..!

ಕಳೆದ 2016ರಲ್ಲಿ ಗುತ್ತಿಗೆದಾರ ರಾಮಣ್ಣ ಬೆಣಚಿನಮರ್ಡಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಕಟ್ಟಡ ಕಾಮಗಾರಿ ಕೈಗೊಂಡಿದ್ದರು. ಹೈದ್ರಾಬಾದ್‌ ಮೂಲದ ಎನ್‌ಸಿಸಿ ಕಂಪನಿಯಿಂದ ಸುಮಾರು 23 ಲಕ್ಷ ಬಿಲ್‌ ಬಾಕಿ ಉಳಿಸಿಕೊಂಡಿರುವುದರಿಂದ ಆತ್ಮಹತ್ಯೆಗೆ ಯತ್ನಿಸಿರುವುದಾಗಿ ಗುತ್ತಿದಾರ ರಾಮಣ್ಣ ಆರೋಪಿಸಿದ್ದಾರೆ. ಇಲ್ಲಿಯವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ.

Latest Videos
Follow Us:
Download App:
  • android
  • ios