Asianet Suvarna News Asianet Suvarna News

ಟೊಯೋಟಾ ಕಂಪನಿಗೆ ಬೀಗ ಹಾಕುವ ಬಗ್ಗೆ ಡಿಕೆ ಸುರೇಶ್ ಎಚ್ಚರಿಕೆ

ಹಲವು ದಿನಗಳಿಂದ ಸಮಸ್ಯೆ ಎದುರಿಸುತ್ತಿರುವ ಟೊಯೋಟಾ ಕಿರ್ಲೋಸ್ಕರ್ ಕಂಪನಿಯ ಕಾರ್ಮಿಕರ ಸಮಸ್ಯೆ ಬಗೆಹರಿಸದಿದ್ದರೆ ಕಂಪನಿಗೆ ಬೀಗ ಜಡಿಯುವುದಾಗಿ ಸಂಸದ ಡಿಕೆ ಸುರೇಶ್ ಎಚ್ಚರಿಕೆ ನೀಡಿದ್ದಾರೆ. 

Congress MP DK Suresh Warns To Govt About Toyota Kirloskar issue snr
Author
Bengaluru, First Published Jan 29, 2021, 3:27 PM IST

ರಾಮ​ನಗರ (ಜ.29):  ನೀವು ಯಾರ ಜೊತೆಗೆ ಮಾತ​ನಾ​ಡು​ತ್ತೀರೊ ಗೊತ್ತಿಲ್ಲ. ಮುಂದಿನ 8 ದಿನ​ದೊ​ಳಗೆ ಕಾರ್ಮಿ​ಕರ ಸಮಸ್ಯೆ ಬಗೆ​ಹ​ರಿ​ಯ​ಬೇಕು. ಇಲ್ಲ​ದಿ​ದ್ದರೆ ಕಂಪೆ​ನಿಗೆ ಬೀಗ ಜಡಿ​ಯುವು​ದಾಗಿ ಸಂಸದ ಡಿ.ಕೆ.​ಸು​ರೇಶ್‌ ಟೊಯೋಟಾ ಆಡ​ಳಿತ ಮಂಡ​ಳಿಗೆ ಎಚ್ಚ​ರಿಕೆ ನೀಡಿ​ದರು.

ಬಿಡದಿ ಕೈಗಾ​ರಿಕಾ ಪ್ರದೇ​ಶ​ದಲ್ಲಿ ಟೊಯೋ​ಟಾ ಕಂಪೆನಿ ಎದುರು ಪಾದ​ಯಾ​ತ್ರೆ​ಯಲ್ಲಿ ಆಗ​ಮಿ​ಸಿದ ಪ್ರತಿ​ಭ​ಟ​ನಾ​ಕಾ​ರ​ರನ್ನು ಉದ್ದೇ​ಶಿಸಿ ಮಾತ​ನಾ​ಡಿದ ಅವರು, ಜಪಾನ್‌ನಲ್ಲಿ​ರುವ ಆಡ​ಳಿತ ಮಂಡಳಿ, ಮುಖ್ಯ​ಮಂತ್ರಿ, ಜಿಲ್ಲಾ ಉಸ್ತು​ವಾರಿ ಸಚಿ​ವರು, ಸ್ಥಳೀಯ ಶಾಸ​ಕರ ಆದಿ​ಯಾಗಿ ಯಾರ ಜೊತೆ ಬೇಕಾ​ದರೂ ಕಂಪೆನಿ ಚರ್ಚೆ ನಡೆ​ಸಿ ಕಾರ್ಮಿ​ಕರ ಸಮಸ್ಯೆ ಬಗೆ​ಹ​ರಿ​ಸಲಿ. ಇದು ಕಡೆಯ ಎಚ್ಚ​ರಿಕೆ ಎಂದ​ರು.

ಲ್ಯಾಂಡ್ ಕ್ರೂಸರ್ SUV ಕಾರು ಓಡಿಸಿದ 5 ವರ್ಷದ ಪುಟ್ಟ ಬಾಲಕ; ವಿಡಿಯೋ ವೈರಲ್ ...

ಕೇಂದ್ರ ಸರ್ಕಾರ ಜಾರಿಗೆ ತಂದಿ​ರು​ವ ಕಾರ್ಮಿಕ ವಿರೋಧಿ ನೀತಿ​ಗ​ಳು ಟೊಯೋಟಾ ಕಂಪೆ​ನಿ ಮೂಲಕ ಜಾರಿಗೆ ಬರು​ತ್ತಿದೆ. ಕಾರ್ಮಿಕ ಹಕ್ಕು​ಗ​ಳ​ನ್ನು ​ಕ​ಸಿ​ಯುವ ಹಾಗೂ ಕಾರ್ಮಿ​ಕ ಸಂಘ​ಟ​ನೆ​ಗ​ಳನ್ನು ಹತ್ತಿ​ಕ್ಕುವ ನೀತಿ​ಗಳು ಜಾರಿ​ಯಾ​ಗಿ​ರು​ವು​ದ​ರಿಂದಲೇ ಇಂದು ಕಾರ್ಮಿ​ಕರ ವಿರುದ್ಧ ದಬ್ಬಾ​ಳಿಕೆ ನಡೆ​ಯು​ತ್ತಿದೆ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾ​ರ​ಗಳ ವಿರುದ್ದ ಹರಿ​ಹಾ​ಯ್ದರು.

ಸರಿಪಡಿಸಿಕೊಳ್ಳದಿದ್ದರೆ ಪರಿಣಾಮ:  ಮಾಜಿ ಸಚಿವ ಚಲು​ವ​ರಾ​ಯ​ಸ್ವಾಮಿ ಮಾತ​ನಾಡಿ, ಕಾರ್ಮಿ​ಕರ ಸಮಸ್ಯೆ ಹಾಗೂ ಹೋರಾ​ಟಕ್ಕೆ ಕಿವಿ​ಗೊ​ಡ​ಲಾ​ಗ​ದಷ್ಟರ ಮಟ್ಟಿಗೆ ಟೊಯೋಟಾ ಕಂಪೆನಿ ಬಲಿ​ಷ್ಠ​ವಾಗಿ ಬೆಳೆ​ದಿದೆ. ತನ್ನ ನಡ​ವ​ಳಿಕೆ ಸರಿ​ಪ​ಡಿ​ಸಿ​ಕೊ​ಳ್ಳ​ದಿ​ದ್ದರೆ ಪರಿ​ಣಾಮ ಎದು​ರಿ​ಸ​ಬೇ​ಕಾ​ಗು​ತ್ತದೆ ಎಂದು ಎಚ್ಚ​ರಿ​ಸಿ​ದರು.

ಕಾರ್ಮಿಕರು ಹಾಗೂ ರೈತರ ಪರ​ವಾಗಿ ಇರ​ಬೇ​ಕಾ​ಗಿದ್ದ ಬಿಜೆಪಿ ನೇತೃ​ತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾ​ರ​ಗಳು ಉದ್ಯಮಿಗಳು, ಬಂಡ​ವಾಳ ಶಾಹಿ​ಗಳ ಪರ​ವಾಗಿ ನಿಂತಿವೆ. ಹೀಗಾ​ಗಿಯೇ ರೈತರು, ಕಾರ್ಮಿ​ಕರು ಬೀದಿ ಬೀಳು​ವಂತಾ​ಗಿದೆ. ಯಾವ ಸರ್ಕಾರ ಹಾಗೂ ಕಂಪೆ​ನಿ​ಗಳು ರೈತರು, ಕಾರ್ಮಿ​ಕರ ಸಮ​ಸ್ಯೆ​ಗ​ಳಿಗೆ ಸ್ಪಂದಿ​ಸು​ವು​ದಿ​ಲ್ಲವೊ ಅವು​ಗಳು ಹೆಚ್ಚು ದಿನ ಉಳಿ​ಯು​ವು​ದಿಲ್ಲ ಎಂದರು.

ಮಾಜಿ ಶಾಸಕ ಎಚ್‌.ಸಿ. ​ಬಾ​ಲ​ಕೃಷ್ಣ ಮಾತ​ನಾಡಿ, ಸ್ಥಳೀಯ ಶಾಸಕರು ಹಾಗೂ ಜಿಲ್ಲಾ ಉಸ್ತು​ವಾರಿ ಸಚಿವರ ಬೇಜ​ವಾ​ಬ್ದಾ​ರಿಯಿಂದಾ​ಗಿಯೇ ಟೊಯೋಟಾ ಸಮಸ್ಯೆ ಜಟಿ​ಲ​ವಾ​ಗು​ತ್ತಿದೆ. ಕಾರ್ಮಿ​ಕರ ಸಮಸ್ಯೆ ಬಗೆ​ಹ​ರಿ​ಸ​ಲಾ​ಗ​ದ​ವರು ಧೈರ್ಯ​ವಿ​ಲ್ಲದೆ ರಾತ್ರೋ​ರಾ​ತ್ರಿ ​ಕಂಪೆ​ನಿಯ ಕಾರ್ಯ​ಕ್ರಮ ನಿಗದಿಪಡಿ​ಸಿ​ಕೊಂಡು ಭಾಗಿಯಾಗು​ತ್ತಿ​ದ್ದಾ​ರೆ. ನಾಯ​ಕರು ಎನಿ​ಸಿ​ಕೊಂಡ​ವರು ಸಾಮಾ​ಜಿಕ ಜಾಲ​ತಾ​ಣ​ಗ​ಳಲ್ಲಿ ಬೆಂಬಲ ಸೂಚಿ​ಸಿ ಕಣ್ಣೊ​ರೆ​ಸುವ ನಾಟ​ಕ​ವಾ​ಡಿ​ದರೆ ಸಾಲದು. ಕಾರ್ಮಿ​ಕರ ಜತೆ ನಿಂತು ಹೋರಾ​ಟಕ್ಕೆ ಶಕ್ತಿ ತುಂಬ​ಬೇಕು. ಈ ಹೋರಾ​ಟಕ್ಕೆ ತಾರ್ಕಿಕ ಅಂತ್ಯ ಸಿಗು​ವ​ವ​ರೆಗೂ ಮಾಡು ಇಲ್ಲವೆ ಮಡಿ ಹೋರಾಟ ನಡೆ​ಸು​ತ್ತೇವೆ. ದಬ್ಬಾ​ಳಿಕೆ ನಡೆ​ಸುವ ಇಂತಹ ಕಂಪೆ​ನಿ​ಗಳ ಅವ​ಶ್ಯ​ಕತೆ ಇಲ್ಲ ಎಂದು ಹೇಳಿ​ದರು.

ಬಿಎಸ್ಪಿ ರಾಜ್ಯಾ​ಧ್ಯಕ್ಷ ಎಂ.ಕೃ​ಷ್ಣ​ಮೂರ್ತಿ ಮಾತ​ನಾಡಿ, ಟೊಯೋಟಾ ಆಡ​ಳಿತ ಮಂಡಳಿ ಹಾಗೂ ಕಾರ್ಮಿ​ಕರ ಸಮಸ್ಯೆ ಸೌಹಾ​ರ್ದ​ಯು​ತ​ವಾಗಿ ಬಗೆ​ಹ​ರಿ​ಸಿ​ಕೊ​ಳ್ಳಲು ಅವ​ಕಾ​ಶ​ವಿತ್ತು. ಆದರೆ, ಬಿಜೆಪಿ ಸರ್ಕಾರ ಕಂಪೆ​ನಿಯ ಆಡ​ಳಿತ ಮಂಡ​ಳಿ​ಯೊಂದಿಗೆ ಶಾಮೀ​ಲಾ​ಗಿ​ರುವುದೇ ಸಮಸ್ಯೆ ಉಲ್ಬ​ಣ​ಗೊ​ಳ್ಳಲು ಕಾರ​ಣ​. ಕಂಪ​ನಿ​ಯ ಮೂರು​ವರೆ ಸಾವಿರ ಕಾರ್ಮಿ​ಕ​ರನ್ನು ಬಲಿ ತೆಗೆ​ದು​ಕೊ​ಳ್ಳಲು ಬಾಯಿ ಮುಚ್ಚಿ​ಕೊಂಡು ಕುಳಿ​ತಿರುವ ಬಿಜೆಪಿ ಸರ್ಕಾರ ಪಂಚೇಂದ್ರಿ​ಯ​ಗ​ಳನ್ನು ಕಳೆ​ದು​ಕೊಂಡಿದೆ. ಖಾಸಗಿ ಕಂಪೆ​ನಿಯ ಆಡ​ಳಿತ ಮಂಡ​ಳಿ​ಯನ್ನು ಬಗ್ಗಿ​ಸಲು ಸಾಧ್ಯ​ವಾ​ಗ​ದಿ​ದ್ದ ಮೇಲೆ ಮುಖ್ಯ​ಮಂತ್ರಿ​ಗಳು ಹಾಗೂ ಸಚಿ​ವ​ರು ರಾಜೀ​ನಾಮೆ ನೀಡು​ವುದು ಸೂಕ್ತ ಎಂದು ಹೇಳಿ​ದ​ರು.

ಮಾಜಿ ಸಚಿವ ನರೇಂದ್ರಸ್ವಾಮಿ, ಮಾಜಿ ಶಾಸಕ ಕೆ.ರಾಜು, ಜಿಪಂ ಅಧ್ಯಕ್ಷ ಅಶೋಕ್‌, ಕಾಂಗ್ರೆಸ್‌ ಮುಖಂಡ​ರಾದ ಗಣಿಗ ರವಿ, ಡಾ.ರ​ವೀಂದ್ರ, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿ​ಮಾನಿ ಬಣ ರಾಜ್ಯಾ​ಧ್ಯಕ್ಷ ಕೃಷ್ಣೇ​ಗೌಡ, ಕರವೇ ಜಿಲ್ಲಾ​ಧ್ಯಕ್ಷ ಕಬ್ಬಾ​ಳೇ​ಗೌಡ, ರೈತ​ಸಂಘ ಮುಖಂಡ​ರಾದ ಭೈರೇ​ಗೌಡ, ರಾಮು, ಟೊಯೋಟಾ ಕಾರ್ಮಿ​ಕರ ಸಂಘದ ಅಧ್ಯಕ್ಷ ಪ್ರಸನ್ನ ಚಕ್ಕೆರೆ ಮತ್ತಿ​ತ​ರರು ಹಾಜ​ರಿ​ದ್ದ​ರು.

ಆರೋಗ್ಯ ಸೇವೆಗೆ ಸಜ್ಜಾದ ಟೊಯೋಟಾ ಕಿರ್ಲೋಸ್ಕರ್; ಸಮುದಾಯ ಕೇಂದ್ರಕ್ಕೆ DCM ಶಂಕು ಸ್ಥಾಪನೆ! ...
ರಾಜ್ಯ ಸರ್ಕಾರ ಹಾಗೂ ಜಿಲ್ಲಾ​ಡ​ಳಿತ ಕಾರ್ಮಿ​ಕರ ಸಮ​ಸ್ಯೆ​ಗಳನ್ನು ತಕ್ಷಣ ಬಗೆ​ಹ​ರಿ​ಸ​ಬೇಕು. ಪೊಲೀ​ಸ​ರನ್ನು ಮುಂದಿಟ್ಟುಕೊಂಡು ಕಾರ್ಮಿ​ಕ​ರನ್ನು ಹೆದ​ರಿ​ಸುವ ಅಥವಾ ಹತ್ತಿಕ್ಕುವ ಕೆಲಸ ನಡೆ​ಯು​ವು​ದಿಲ್ಲ. ಟೊಯೋ​ಟಾ ಅಧಿ​ಕಾ​ರಿ​ಗಳು ಕಾರ್ಮಿ​ಕರ ಕುಟುಂಬ​ಗ​ಳಿಗೆ ಫೋನು ಮಾಡಿ ಬೀದಿಗೆ ಬರು​ತ್ತೀರಾ ಎಂದು ಹೆದ​ರಿ​ಸು​ತ್ತಿ​ದ್ದಾರೆ. ಸಮಸ್ಯೆ ಬಗೆ​ಹ​ರಿ​ಯ​ದಿ​ದ್ದರೆ ಇಡೀ ಸಂಸ್ಥೆ ಬೀದಿಗೆ ಬೀಳ​ಲಿದೆ.

ಡಿ.ಕೆ. ಸುರೇಶ್‌, ಸಂಸದ

Follow Us:
Download App:
  • android
  • ios