Asianet Suvarna News Asianet Suvarna News

ಜಾರಕಿಹೊಳಿ ರಾಸಲೀಲೆ : ಗೊಂದಲ ಮೂಡಿಸಿದ ಕೇಸ್

ಮಾಜಿ ಸಚಿವ ರಮೇಶ್ ಜಾರಕಿಹೊಳಿ  ಸಿಡಿ ಪ್ರಕರಣವೂ ಸಾಕಷ್ಟು ಗೊಂದಲ ಮೂಡಿಸಿದ್ದಾಗಿ ನಾಯಕರೋರ್ವರು ಹೇಳಿದ್ದಾರೆ. ಈ ಸಂಬಂಧ ವಿಚಾರಣೆ ನಡೆಸಲು ಆಗ್ರಹಿಸಿದ್ದಾರೆ. 

Congress Leader Cheluvarayaswamy Talks About Ramesh Jarkiholi Scandal snr
Author
Bengaluru, First Published Mar 7, 2021, 11:00 AM IST

ತುಮ​ಕೂರು (ಮಾ.07): ರಮೇಶ್‌ ಜಾರ​ಕಿ​ಹೊಳಿ ರಾಸ​ಲೀ​ಲೆ ಪ್ರಕ​ರಣ ತನಿ​ಖೆ​ಯಾಗಿ ಒಂದು ಹಂತಕ್ಕೆ ಬರ​ಬೇ​ಕಾ​ಗಿದೆ ಎಂದು ಮಾಜಿ ಸಚಿವ ಚೆಲು​ವ​ರಾ​ಯ​ಸ್ವಾಮಿ ತಿಳಿ​ಸಿ​ದ್ದಾರೆ.

ತಿಪ​ಟೂರು ತಾಲೂಕು ನೊಣ​ವಿ​ನ​ಕೆ​ರೆ​ಯಲ್ಲಿ ಸುದ್ದಿ​ಗಾ​ರ​ರೊಂದಿಗೆ ಮಾತ​ನಾಡಿ, ರಮೇಶ್‌ ಜಾರ​ಕಿ​ಹೊಳಿ ಈಗಾ​ಗಲೇ ನೀಡಿ​ರುವ ರಾಜಿ​ನಾ​ಮೆ​ಯನ್ನು ಸರ್ಕಾರ ಸ್ವೀಕಾರ ಮಾಡಿದೆ ಎಂದ ಅವರು ಈ ವಿಚಾ​ರವೇ ಸಾಕಷ್ಟುಗೊಂದಲ ಮೂಡಿ​ಸು​ತ್ತಿದ್ದು ವಿಚಾ​ರ​ಣೆ​ಯಾ​ಗ​ಬೇಕು ಎಂದರು.

ರಾಸಲೀಲೆ ಕೇಸ್ : ರಾಜಕಾರಣಿಗಳ ಬಗ್ಗೆ ಹೇಸಿಗೆ ಬರುವಂತಾಯ್ತು

ಸಾರ್ವ​ಜ​ನಿ​ಕ​ವಾಗಿ ಈ ಬಗ್ಗೆ ಮಾತ​ನಾ​ಡು​ವುದು ಸರಿ​ಯಲ್ಲ. ಪ್ರಕ​ರ​ಣಕ್ಕೆ ಸಂಬಂಧಿ​ಸಿ​ದಂತೆ ಅವರ ಪರ ವಹಿ​ಸಲು ಹಾಗೂ ಬೆಂಬ​ಲಿ​ಸಲು ಸಾಧ್ಯ​ವಿಲ್ಲ ಎಂದಿ​ದ್ದಾರೆ.

ಆರು ಮಂದಿ ಸಚಿ​ವರು ಯಾವ ವಿಚಾ​ರಕ್ಕೆ ನ್ಯಾಯಾ​ಲ​ಯಕ್ಕೆ ಹೋಗಿ​ದ್ದಾರೆ ಎಂಬುದು ಗೊತ್ತಿಲ್ಲ. ಈ ಬಗ್ಗೆ ತಿಳಿ​ಯದೇ ಮಾತ​ನಾ​ಡು​ವುದು ಸೂಕ್ತ​ವಲ್ಲ ಎಂದರು. ನ್ಯಾಯಾ​ಲ​ಯಕ್ಕೆ ಹೋಗಿ​ರುವ ಅವ​ಶ್ಯ​ಕತೆ ಇತ್ತಾ ಎನ್ನು​ವುದು ಎನ್ನು​ವು​ದರ ಬಗ್ಗೆ ನಮಗೂ ಗೊಂದಲವಿದೆ ಎಂದ​ರು.

ಪ್ರಜಾಪ್ರಭುತ್ವದಲ್ಲಿ ಜನಪ್ರತಿನಿಧಿಗಳು ಎಚ್ಚರದಿಂದ ಇರಬೇಕು. ಎಲ್ಲ​ರಿಗೂ ಸೇವೆ ಮಾಡುವ ಅವ​ಕಾಶ ಸಿಗು​ವು​ದಿಲ್ಲ ಎಂದರು.

Follow Us:
Download App:
  • android
  • ios