'ಕಾಂಗ್ರೆಸ್ನಲ್ಲಿ ಒಡಕು ತರುತ್ತಿರುವ ಸಂತೋಷ ಲಾಡ್'
* ಧಾರವಾಡದಲ್ಲಿ ಪಕ್ಷದ ಮುಖಂಡ ಆನಂದ ಸಿಂಗನಾಥ ಆರೋಪ
* ಕಲಘಟಗಿಯಲ್ಲಿ ಇಬ್ಬರು ಮುಖಂಡರ ನಡುವೆ ಪೈಪೋಟಿ
* ಸಭೆಗಳಿಗೆ ಒಬಿಸಿ ಘಟಕದ ಪದಾಧಿಕಾರಿಗಳನ್ನು ಆಹ್ವಾನಿಸದಿರುವುದು ಖಂಡನೀಯ
ಧಾರವಾಡ(ಜು.10): ನವಲೂರ ರಸ್ತೆಯಲ್ಲಿರುವ ಮಯೂರ ಹೋಟೆಲ್ನಲ್ಲಿ ಕಾಂಗ್ರೆಸ್ ಮುಖಂಡ ಸಂತೋಷ ಲಾಡ್ ಎರಡು ಬಾರಿ ಸಭೆ ನಡೆಸಿದ್ದು ಪಕ್ಷದಲ್ಲಿ ಒಡಕು ತರುತ್ತಿದ್ದಾರೆ. ಇಲ್ಲಿ ನಡೆಸುತ್ತಿರುವ ಸಭೆಗಳಿಗೆ ಒಬಿಸಿ ಘಟಕದ ಪದಾಧಿಕಾರಿಗಳನ್ನು ಆಹ್ವಾನಿಸದಿರುವುದು ಖಂಡನೀಯ ಎಂದು ಒಬಿಸಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂದ ಸಿಂಗನಾಥ ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಈಗಾಗಲೇ ಕಲಘಟಗಿಯಲ್ಲಿ ಇಬ್ಬರು ಮುಖಂಡರ ನಡುವೆ ಪೈಪೋಟಿ ಏರ್ಪಟ್ಟಿದೆ. ಆ ಕ್ಷೇತ್ರದಲ್ಲಿ ಏನು ಮಾಡಬೇಕು ಎಂಬುದನ್ನು ಸಂತೋಷ ಲಾಡ್ ಅವರು ತಿಳಿದುಕೊಳ್ಳಬೇಕು. ಅದನ್ನು ಬಿಟ್ಟು ತಮ್ಮ ಕ್ಷೇತ್ರವಲ್ಲದ ಬೇರೆ ಕ್ಷೇತ್ರದಲ್ಲಿ ಸಭೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಬಿಜೆಪಿಯಿಂದ ಬರೀ ಲಸಿಕೆ ಪ್ರಚಾರವಷ್ಟೇ: ಸಂತೋಷ ಲಾಡ್
ಧಾರವಾಡದಲ್ಲಿ ಸಭೆ ನಡೆಸುವುದಿದ್ದರೆ ಎಲ್ಲ ಘಟಕದ ಪದಾಧಿಕಾರಿಗಳನ್ನು ಸಭೆಗೆ ಕರೆಯಬೇಕು. ಅದನ್ನು ಬಿಟ್ಟು ತಮಗೆ ಬೇಕಾದವರನ್ನು ಸಭೆಗೆ ಕರೆಯುವುದರಿಂದ ಪಕ್ಷದಲ್ಲಿ ಗುಂಪುಗಾರಿಕೆಗೆ ಹೆಚ್ಚುತ್ತದೆ ಎಂದು ತಿಳಿಸಿದ್ದಾರೆ.