Asianet Suvarna News Asianet Suvarna News

'ಕಾಂಗ್ರೆಸ್‌ನಲ್ಲಿ ಒಡಕು ತರು​ತ್ತಿ​ರುವ ಸಂತೋಷ ಲಾಡ್‌'

* ಧಾರ​ವಾ​ಡ​ದಲ್ಲಿ ಪಕ್ಷದ ಮುಖಂಡ ಆನಂದ ಸಿಂಗ​ನಾಥ ಆರೋ​ಪ
* ಕಲಘಟಗಿಯಲ್ಲಿ ಇಬ್ಬರು ಮುಖಂಡರ ನಡುವೆ ಪೈಪೋಟಿ
* ಸಭೆ​ಗ​ಳಿಗೆ ಒಬಿಸಿ ಘಟಕದ ಪದಾಧಿಕಾರಿಗಳನ್ನು ಆಹ್ವಾನಿಸದಿರುವುದು ಖಂಡನೀಯ 

Congress Leader Anand  Singhnath Talks Over Former Minister Santosh Lad grg
Author
Bengaluru, First Published Jul 10, 2021, 1:04 PM IST

ಧಾರವಾಡ(ಜು.10): ನವಲೂರ ರಸ್ತೆಯಲ್ಲಿರುವ ಮಯೂರ ಹೋಟೆಲ್‌ನಲ್ಲಿ ಕಾಂಗ್ರೆಸ್‌ ಮುಖಂಡ ಸಂತೋಷ ಲಾಡ್‌ ಎರಡು ಬಾರಿ ಸಭೆ ನಡೆ​ಸಿದ್ದು ಪಕ್ಷದಲ್ಲಿ ಒಡಕು ತರು​ತ್ತಿ​ದ್ದಾರೆ. ಇಲ್ಲಿ ನಡೆ​ಸು​ತ್ತಿ​ರುವ ಸಭೆ​ಗ​ಳಿಗೆ ಒಬಿಸಿ ಘಟಕದ ಪದಾಧಿಕಾರಿಗಳನ್ನು ಆಹ್ವಾನಿಸದಿರುವುದು ಖಂಡನೀಯ ಎಂದು ಒಬಿಸಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂದ ಸಿಂಗನಾಥ ಆರೋಪಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಈಗಾಗಲೇ ಕಲಘಟಗಿಯಲ್ಲಿ ಇಬ್ಬರು ಮುಖಂಡರ ನಡುವೆ ಪೈಪೋಟಿ ಏರ್ಪಟ್ಟಿದೆ. ಆ ಕ್ಷೇತ್ರದಲ್ಲಿ ಏನು ಮಾಡಬೇಕು ಎಂಬುದನ್ನು ಸಂತೋಷ ಲಾಡ್‌ ಅವರು ತಿಳಿದುಕೊಳ್ಳಬೇಕು. ಅದನ್ನು ಬಿಟ್ಟು ತಮ್ಮ ಕ್ಷೇತ್ರವಲ್ಲದ ಬೇರೆ ಕ್ಷೇತ್ರದಲ್ಲಿ ಸಭೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. 

ಬಿಜೆಪಿಯಿಂದ ಬರೀ ಲಸಿಕೆ ಪ್ರಚಾರವಷ್ಟೇ: ಸಂತೋಷ ಲಾಡ್‌

ಧಾರವಾಡದಲ್ಲಿ ಸಭೆ ನಡೆಸುವುದಿದ್ದರೆ ಎಲ್ಲ ಘಟಕದ ಪದಾಧಿಕಾರಿಗಳನ್ನು ಸಭೆಗೆ ಕರೆಯಬೇಕು. ಅದನ್ನು ಬಿಟ್ಟು ತಮಗೆ ಬೇಕಾದವರನ್ನು ಸಭೆಗೆ ಕರೆಯುವುದರಿಂದ ಪಕ್ಷದಲ್ಲಿ ಗುಂಪುಗಾರಿಕೆಗೆ ಹೆಚ್ಚು​ತ್ತದೆ ಎಂದು ತಿಳಿಸಿದ್ದಾರೆ. 
 

Follow Us:
Download App:
  • android
  • ios