Asianet Suvarna News Asianet Suvarna News

Karnataka Rains: ಸಂತ್ರ​ಸ್ತ​ರ​ಲ್ಲ​ದ​ವರ ಖಾತೆಗೆ ನೆರೆ ಪರಿ​ಹಾರ ಹಣ..!

ನೆರೆ ಸಂತ್ರ​ಸ್ತ​ರಿಗೆ ಇನ್ನೂ ಸಿಗದ ಪರಿ​ಹಾರ, ಪರಿ​ಹಾ​ರ​ಕ್ಕಾಗಿ ಅಲೆ​ದಾ​ಡು​ತ್ತಿ​ರುವ ಸಂತ್ರ​ಸ್ತರು, ಸಂತ್ರ​ಸ್ತ​ರ​ಲ್ಲದ 70 ಮಂದಿಯ ಖಾತೆಗೆ ಹಣ ವರ್ಗ

Compensation for the Account of Who Are Not Flood Victims in Ramanagara grg
Author
First Published Sep 20, 2022, 10:30 PM IST

ಎಂ.ಅ​ಫ್ರೋಜ್‌ ಖಾನ್‌

ರಾಮನ​ಗರ(ಸೆ.20): ನೆರೆ ಸಂತ್ರ​ಸ್ತ​ ಕುಟುಂಬ​ಗ​ಳಿಗೆ ವಿತ​ರಣೆ ಆಗ​ಬೇ​ಕಾದ ಪರಿ​ಹಾರ ಹಣವನ್ನು ಸಂತ್ರ​ಸ್ತ​ರ​ಲ್ಲ​ದ​ವರ ಖಾತೆಗೆ ಜಮೆ ಮಾಡುವ ಮೂಲಕ ನಗ​ರ​ಸಭೆ ಹಾಗೂ ತಾಲೂಕು ಆಡ​ಳಿತ ಎಡ​ವಟ್ಟು ಮಾಡಿದೆ. ಮಹಾಮಳೆ​ಯಿಂದ ಮನೆ ಮಠ ಕಳೆ​ದು​ಕೊಂಡ ಸಂತ್ರ​ಸ್ತರ ಪೈಕಿ ಬಹು​ತೇ​ಕ​ರಿಗೆ ಇನ್ನೂ ಸರ್ಕಾ​ರದ ಪರಿ​ಹಾರ ಹಣ ಕೈಗೆ​ಟ​ಕಿಲ್ಲ. ಆದರೆ, ಸಂತ್ರ​ಸ್ತರೇ ಅಲ್ಲದ ಕುಟುಂಬ​ಗಳ ಖಾತೆಗೆ ತಲಾ 10 ಸಾವಿರ ರುಪಾಯಿನಂತೆ ಲಕ್ಷಾಂತರ ರುಪಾಯಿ ಪರಿ​ಹಾರ ಹಣ ತಲು​ಪಿ​ರು​ವುದು ಸಾಕಷ್ಟುಅನು​ಮಾ​ನ​ಗ​ಳಿಗೆ ಎಡೆ​ಮಾ​ಡಿ​ಕೊ​ಟ್ಟಿ​ದೆ.

ಕಳೆದ ಆಗಸ್ಟ್‌ ತಿಂಗ​ಳಲ್ಲಿ ಸುರಿದ ರಣ​ಮ​ಳೆಗೆ ಜಲ​ಪ್ರ​ಳಯ ಉಂಟಾಗಿ ರಾಮ​ನ​ಗ​ರದ ಅರ್ಕೇ​ಶ್ವರ ಕಾಲೋನಿ, ಟಿಪ್ಪು​ನ​ಗರ, ಜಿಯಾ​ವುಲ್ಲಾ ಬ್ಲಾಕ್‌, ಯಾರಬ್‌ ನಗರ, ಗೌಸಿಯಾ ನಗರ, ಟ್ರೂಪ್‌ ಲೈನ್‌ ಪ್ರದೇ​ಶ​ಗಳು ಜಲಾ​ವೃ​ತ​ಗೊಂಡಿ​ದ್ದವು. ಕುರಿ, ಮೇಕೆ, ಕೋಳಿ​ಗಳು ಕೊಚ್ಚಿ ಹೋಗಿ​ದ್ದವು.

ರಾಮನಗರ ಜಿಲ್ಲೆಯಲ್ಲಿ ಮುಂದುವರಿದ ಮಳೆ: ಜಮೀನುಗಳು ಜಲಾವೃತ

ಈ ಬಡಾ​ವ​ಣೆ​ಗ​ಳಲ್ಲಿ 2250 ಮನೆ​ಗ​ಳಿಗೆ ನೀರು ನುಗ್ಗಿತ್ತು. ಇದ​ರಲ್ಲಿ 150 ಮನೆ​ಗ​ಳಿಗೆ ಹೆಚ್ಚಿನ ಹಾನಿ​ಯಾ​ಗಿತ್ತು. ಸುಮಾರು 100 ಮನೆ​ಗ​ಳಿಗೆ ಭಾಗಶಃ ಹಾನಿ​ಯಾ​ಗಿದೆ. ಸುಮಾರು 40 ಕಿ.ಮೀ ಉದ್ದದ ರಸ್ತೆಗೆ ಹಾನಿ​ಯಾ​ಗಿತ್ತು. ನೀರು ನುಗ್ಗಿದ ಪ್ರತಿ ಮನೆಗೂ 10 ಸಾವಿರ ರುಪಾಯಿ ಘೋಷಣೆಯಾಗಿ​ತ್ತು.

ಮುಖ್ಯ​ಮಂತ್ರಿ ಬಸ​ವ​ರಾಜ ಬೊಮ್ಮಾಯಿ, ಕಂದಾಯ ಸಚಿವ ಅಶೋಕ್‌ ಹಾಗೂ ಜಿಲ್ಲಾ ಉಸ್ತು​ವಾರಿ ಸಚಿವ ಅಶ್ವತ್ಥ ನಾರಾ​ಯ​ಣ​ರ​ವರು ಖುದ್ಧ ಮಳೆ ಹಾನಿ ಪ್ರದೇ​ಶಗ​ಳಿಗೆ ಭೇಟಿ ನೀಡಿ ನೆರೆ ಸಂತ್ರ​ಸ್ತ​ರಿಗೆ ಮೂರು ದಿನ​ದೊ​ಳಗೆ ಪರಿ​ಹಾರ ವಿತ​ರಣೆ ಮಾಡು​ವಂತೆ ಅಧಿ​ಕಾ​ರಿ​ಗ​ಳಿಗೆ ಕಟ್ಟು​ನಿ​ಟ್ಟಿನ ಸೂಚನೆ ನೀಡಿ​ದ್ದರು.

ಆದ​ರೀಗ ನೆರೆ ಬಂದು 20 ರಿಂದ 22 ದಿನ ಕಳೆ​ದರೂ ಅರ್ಹ ಫಲಾ​ನು​ಭ​ವಿ​ಗ​ಳ ಖಾತೆಗೆ ಪರಿ​ಹಾ​ರ ಹಣವೇ ತಲು​ಪಿಲ್ಲ. ಅವ​ರೆ​ಲ್ಲರು ಪ್ರತಿ​ನಿತ್ಯ ನಗ​ರ​ಸಭಾ ಸದ​ಸ್ಯರು ಹಾಗೂ ರಾಜ​ಕೀಯ ಮುಖಂಡರೊಂದಿಗೆ ಪರಿ​ಹಾ​ರ ಹಣ​ಕ್ಕಾಗಿ ತಾಲೂಕು ಕಚೇರಿ ಹಾಗೂ ನಗ​ರ​ಸಭೆ ಕಚೇ​ರಿಗೆ ಎಡ​ತಾ​ಕು​ತ್ತಿ​ದ್ದಾರೆ. ಆದರೆ, ಮಳೆ​ಯಿಂದ ಯಾವ ಹಾನಿಯಾಗದ ರೆಹ​ಮಾ​ನಿ​ಯ​ನ​ಗರ (ಜ​ನ​ತಾ​ಕಾ​ಲೋ​ನಿ​)ದ ಸುಮಾರು 70 ಮಂದಿಯ ಖಾತೆಗೆ ತಲಾ 10 ಸಾವಿರ ರುಪಾ​ಯಿ​ನಂತೆ ಲಕ್ಷಾಂತರ ರುಪಾಯಿ ವರ್ಗಾ​ವ​ಣೆ​ಯಾ​ಗಿದೆ. ರೆಹ​ಮಾ​ನಿಯನಗರ ಮಾತ್ರ​ವ​ಲ್ಲದೆ ಸುತ್ತ​ಮು​ತ್ತಲ ಬಡಾ​ವ​ಣೆ​ಗಳ ಜನರ ಖಾತೆ​ಗ​ಳಿಗೂ ಹಣ ಜಮೆ ಆಗಿರುವ ದೂರು​ಗಳು ಕೇಳಿ ಬರು​ತ್ತಿವೆ.

ಅರ್ಕೇ​ಶ್ವರ ಕಾಲೋನಿ ಒಂದ​ರ​ಲ್ಲಿಯೇ ಸುಮಾರು 15ಕ್ಕೂ ಹೆಚ್ಚು ಮನೆ​ಗ​ಳಿಗೆ ಹಾನಿ​ಯಾ​ಗಿದ್ದು, ಕೇವಲ 3 - 4 ಮನೆ​ಗ​ಳಿಗೆ ಪರಿ​ಹಾರ ಹಣ ದೊರ​ಕಿದೆ. ಉಳಿದ ಮನೆ​ಗಳ ಪರಿ​ಹಾರ ಹಣದ ಬಗ್ಗೆ ಅಧಿ​ಕಾ​ರಿ​ಗಳು ಯಾವ ಮಾಹಿ​ತಿ​ಯನ್ನು ನೀಡು​ತ್ತಿಲ್ಲ ಎಂದು ಸಂತ್ರ​ಸ್ತರು ಬೇಸರ ವ್ಯಕ್ತ​ಪ​ಡಿ​ಸು​ತ್ತಿ​ದ್ದಾ​ರೆ.

ಈಗಾ​ಗಲೇ ಜಿಲ್ಲಾ​ಡ​ಳಿತ ಮಳೆ ಹಾನಿ ಕುರಿತು ರಾಜ್ಯ ಸರ್ಕಾ​ರಕ್ಕೆ ವರದಿ ಸಲ್ಲಿ​ಸಿದೆ. ಈವ​ರೆಗೆ 2267 ಫಲಾ​ನು​ಭ​ವಿ​ಗ​ಳಿಗೆ 2.26 ಕೋಟಿ ಹಾಗೂ ಮನೆ ಹಾನಿ ಸಂಬಂಧ 1 ಕೋಟಿಗೂ ಹೆಚ್ಚಿನ ಪರಿ​ಹಾ​ರ​ವನ್ನು ಫಲಾ​ನು​ಭ​ವಿ​ಗಳ ಖಾತೆಗೆ ನೇರ​ವಾಗಿ ವರ್ಗಾ​ವಣೆ ಮಾಡ​ಲಾ​ಗಿದೆ.

ಫಲಾ​ನು​ಭ​ವಿ​ಗ​ಳ ಖಾತೆಗೆ ಹಣ ಕಳು​ಹಿ​ಸಲು ಚೆಕ್‌ ನೀಡ​ಲಾ​ಗಿದೆ. ಅದೆ​ಲ್ಲವೂ ಬ್ಯಾಂಕರ್ಸ್‌ ಬಳಿ ಇದೆ. ಆ ಹಣ ಯಾವುದೇ ಕಾರ​ಣಕ್ಕೂ ಹಿಂದಿ​ರು​ಗು​ವು​ದಿಲ್ಲ. ತಾಂತ್ರಿಕ ದೋಷ​ದಿಂದ ಕೆಲ ಫಲಾ​ನು​ಭ​ವಿ​ಗಳ ಖಾತೆಗೆ ಪರಿ​ಹಾರ ಹಣ ತಲು​ಪಿಲ್ಲ. ತಾಂತ್ರಿಕ ದೋಷ​ವನ್ನು ಸರಿ​ಪ​ಡಿಸಿ ಹಣ ವರ್ಗಾ​ಯಿ​ಸುವ ಕೆಲಸ ಮಾಡು​ತ್ತೇವೆ ಎನ್ನು​ತ್ತಾರೆ ಅಧಿ​ಕಾ​ರಿ​ಗ​ಳು.

ರಾಮನಗರ: ವಯ​ಸ್ಸಾ​ಗಿದೆ ಎಷ್ಟು ಮಾತಾ​ಡ್ತೀ​ರ್ರಿ ಎಂದ ಶಾ​ಸಕಿ ಅನಿತಾ ವಿರುದ್ಧ ನೆರೆ ಸಂತ್ರ​ಸ್ತರು ಗರಂ

ಸಂತ್ರ​ಸ್ತರು ಪರಿ​ಹಾರ ಹಣ ಕೇಳಿಕೊಂಡು ನಗ​ರ​ಸಭೆ ಮತ್ತು ತಾಲೂಕು ಕಚೇ​ರಿಗೆ ತೆರ​ಳಿ​ದರೆ ಸರಿ​ಯಾದ ಮಾಹಿತಿ ಸಿಗು​ತ್ತಿಲ್ಲ. ರಾಜ​ಕಾ​ರ​ಣಿ​ಗಳು ಶಿಫಾ​ರಸ್ಸು ಮಾಡುವ​ವ​ರಿಗೆ ಸುಲ​ಭ​ವಾಗಿ ಪರಿ​ಹಾರ ತಲು​ಪು​ತ್ತಿದೆ. ಸಂತ್ರ​ಸ್ತರ ಪೈಕಿ ಬಹು​ಪಾಲು ಜನರು ಪರಿ​ಹಾ​ರ ಹಣ​ವನ್ನು ಎದುರು ನೋಡು​ತ್ತಿ​ದ್ದಾರೆ.

ಲೋಕಾ​ಯು​ಕ್ತಕ್ಕೆ ದೂರು

ನೆರೆ ಸಂತ್ರ​ಸ್ತ​ರಿಗೆ ಪರಿ​ಹಾರ ವಿತ​ರ​ಣೆ​ಯಲ್ಲಿ ಗೋಲ್‌ಮಾಲ್‌ ನಡೆ​ದಿದೆ. ಅರ್ಹರಿಗೆ ತಲು​ಪ​ಬೇ​ಕಾದ ಪರಿ​ಹಾರ ಹಣ ಬೇರೆ​ಯ​ವರ ಪಾಲಾ​ಗು​ತ್ತಿದೆ. ಇದ​ರಲ್ಲಿ ತಾಲೂಕು ಕಚೇರಿ ಹಾಗೂ ನಗ​ರ​ಸಭೆ ಅಧಿ​ಕಾ​ರಿ​ಗಳು ಶಾಮೀ​ಲಾ​ಗಿ​ದ್ದಾ​ರೆ. ಪರಿ​ಹಾರ ಹಣ ದುರು​ಪ​ಯೋ​ಗ​ವಾ​ಗಿ​ರುವ ಕುರಿತು ಲೋಕಾ​ಯು​ಕ್ತ​ರಿಗೆ ದೂರು ಸಲ್ಲಿ​ಸು​ತ್ತೇವೆ. ಅಲ್ಲದೆ, ಅರ್ಹ ಫಲಾ​ನು​ಭ​ವಿ​ಗ​ಳಿಗೆ ಕೂಡಲೇ ಪರಿ​ಹಾರ ಒದ​ಗಿ​ಸು​ವಂತೆ ಹೋರಾಟ ನಡೆ​ಸು​ತ್ತೇವೆ 
- ಕೊತ್ತೀ​ಪುರ ಗೋವಿಂದ​ರಾಜು, ಜಿಲ್ಲಾ​ಧ್ಯ​ಕ್ಷರು, ದಸಂಸ

ನೆರೆ ಸಂತ್ರಸ್ತ ಫಲಾ​ನು​ಭ​ವಿ​ಗ​ಳ ಖಾತೆಗೆ ನೇರ​ವಾಗಿ ಆರ್‌ ಟಿಜಿ​ಎಸ್‌ ಮೂಲಕ ಪರಿ​ಹಾರ ಹಣ ವರ್ಗಾ​ಯಿ​ಸ​ಲಾ​ಗಿದೆ. ಈವ​ರೆಗೆ 8 ಕಂತು​ಗ​ಳಲ್ಲಿ 2267 ಫಲಾ​ನು​ಭ​ವಿ​ಗ​ಳಿಗೆ ತಲಾ 10 ಸಾವಿರ ರುಪಾಯಿ ಪರಿ​ಹಾರ ಹಣ ತಲು​ಪಿ​ಸ​ಲಾ​ಗಿದೆ. ಬ್ಯಾಂಕ್‌ ಅಕೌಂಟ್‌ ಮತ್ತು ಐಎಫ್‌ಸಿ ಕೋಡ್‌ ವ್ಯತ್ಯಾ​ಸ​ದಿಂದ ಹಣ ತಲು​ಪಿಲ್ಲ ಎಂದರೆ ಅದು ನಮ್ಮ ತಪ್ಪಲ್ಲ. ಆ ಸಮ​ಸ್ಯೆ​ಯನ್ನು ಶೀಘ್ರ​ದ​ಲ್ಲಿಯೇ ಬಗೆ​ಹ​ರಿ​ಸ​ಲಾ​ಗು​ವುದು.
- ವಿಜಯ್‌ ಕುಮಾರ್‌, ತಹ​ಸೀ​ಲ್ದಾರ್‌
 

Follow Us:
Download App:
  • android
  • ios