ಬೆಳ್ಳಿ ಗದೆ ಹಿಡಿದ ಸಿದ್ದರಾಮಯ್ಯ ಅವರು ತಲೆ ಮೇಲೆ ಬೆಳ್ಳಿ ಕಿರೀಟ ಇಡಲು ಬಂದ ವೇಳೆ ಸುತಾರಾಂ ನಿರಾಕರಿಸಿದರು. ಇದಕ್ಕೂ ಮೊದಲು ಸಂಘಟಕರು ವೇದಿಕೆ ಮೇಲಿದ್ದ ಗಣ್ಯರಿಗೆ ಹಳದಿ ಪೇಟಾ ತೊಡಿಸುತ್ತಿದ್ದರು. ಈ ವೇಳೆ ಕೂಡ ಸಿದ್ದರಾಮಯ್ಯ ಪೇಟಾ ಧರಿಸಲು ನಿರಾಕರಿಸಿದರು. ಅಲ್ಲದೇ, ಕುರಿ ಕಾಯಲು ಬಳಸುವ ಕೋಲು ತಂದ ವೇಳೆಯೂ ಅದನ್ನು ಕೂಡ ಸ್ವೀಕರಿಸಲಿಲ್ಲ.

ಬೆಳಗಾವಿ(ಅ.04): ಬೆಳಗಾವಿಯಲ್ಲಿ ಮಂಗಳವಾರ ನಡೆದ ಶೆಫರ್ಡ್ಸ ಇಂಡಿಯನ್‌ ನ್ಯಾಷನಲ್‌ನ ನೇ ರಾಷ್ಟ್ರೀಯ ಮಹಾ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಆದರೆ, ಈ ವೇಳೆ ಸಿದ್ದರಾಮಯ್ಯ ಪೇಟಾ, ಬೆಳ್ಳಿ ಕಿರೀಟ ಹಾಗೂ ಕೋಲು ಸ್ವೀಕರಿಸಲು ನಿರಾಕರಿಸಿದ ಪ್ರಸಂಗ ನಡೆಯಿತು

Add Asianetnews Kannada as a Preferred SourcegooglePreferred

ಬೆಳ್ಳಿ ಗದೆ ಹಿಡಿದ ಸಿದ್ದರಾಮಯ್ಯ ಅವರು ತಲೆ ಮೇಲೆ ಬೆಳ್ಳಿ ಕಿರೀಟ ಇಡಲು ಬಂದ ವೇಳೆ ಸುತಾರಾಂ ನಿರಾಕರಿಸಿದರು. ಇದಕ್ಕೂ ಮೊದಲು ಸಂಘಟಕರು ವೇದಿಕೆ ಮೇಲಿದ್ದ ಗಣ್ಯರಿಗೆ ಹಳದಿ ಪೇಟಾ ತೊಡಿಸುತ್ತಿದ್ದರು. ಈ ವೇಳೆ ಕೂಡ ಸಿದ್ದರಾಮಯ್ಯ ಪೇಟಾ ಧರಿಸಲು ನಿರಾಕರಿಸಿದರು. ಅಲ್ಲದೇ, ಕುರಿ ಕಾಯಲು ಬಳಸುವ ಕೋಲು ತಂದ ವೇಳೆಯೂ ಅದನ್ನು ಕೂಡ ಸ್ವೀಕರಿಸಲಿಲ್ಲ.

ಕೋಮುಗಲಭೆ ಮಾಡಿದವರ ವಿರುದ್ಧ ಮುಲಾಜಿಲ್ಲದೆ ಕ್ರಮ: ಸಿಎಂ ಸಿದ್ದರಾಮಯ್ಯ

ಸಮಾವೇಶದಲ್ಲಿ ಪಾಲ್ಗೊಂಡಿದ್ದ ಜನರು ಸಿಎಂ ಸಿದ್ದರಾಮಯ್ಯ ಅವರ ಭಾವಚಿತ್ರವನ್ನು ಹಿಡಿದು ಪ್ರದರ್ಶಿಸಿ, ಸಿದ್ದರಾಮಯ್ಯ ಅವರ ಪರ ಘೋಷಣೆ ಕೂಗಿದರು.