Asianet Suvarna News Asianet Suvarna News

ಅಕ್ರಮ ಮರಳು ದಂಧೆ ಹಿಂದೆ ಇವರೆಲ್ಲ ಇದ್ದಾರೆ: ಸಿಎಂ ಬಿಚ್ಚಿಟ್ಟ ಸತ್ಯ

ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನಲ್ಲಿ ಮರಳು ದಂಧೆಕೋರರಿಗೆ ಗ್ರಾಮ‌ಲೆಕ್ಕ ಬಳಿಯಾಗಿದ್ದು, ಈ ಬಗ್ಗೆ ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು ಹೀಗೆ.

CM HD Kumaraswamy Reacts on illegal Sand Mining in Karnataka
Author
Bengaluru, First Published Dec 24, 2018, 4:57 PM IST

ಕೊಪ್ಪಳ, (ಡಿ.24): ರಾಯಚೂರು ಜಿಲ್ಲೆಯಲ್ಲಿ ನಡೆದ ಗ್ರಾಮ‌ಲೆಕ್ಕಿಗನ ಕೊಲೆ ವಿಚಾರವಾಗಿ ಸರಕಾರ ಕೈ ಕಟ್ಟಿ ಕೂಡಲ್ಲ. ರಾಜ್ಯ ಸರಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

ಸೋಮವಾರ ಬಾಗಲಕೋಟೆಗೆ ತೆರಳುವ ಮಾರ್ಗದಲ್ಲಿ ಕೊಪ್ಪಳದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಎಚ್​ಡಿಕೆ, ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಮರಳು ದಂಧೆಗೆ ಮೈತ್ರಿ ಸರಕಾರ ಕಾರಣ ಅಲ್ಲ. ಕಳೆದ ಹತ್ತು ವರ್ಷಗಳಿಂದ ಅಕ್ರಮ‌ ನಡೆಯುತ್ತಿದೆ ಎಂಬುದನ್ನು ಕೆ.ಎಸ್.ಈಶ್ವರಪ್ಪ ಮಾತನಾಡಬೇಕು ಎಂದು ತಿರುಗೇಟು ನೀಡಿದರು.

ಸ್ಯಾಂಡ್‌ ಮಾಫಿಯಾ ಅಟ್ಟಹಾಸ: ಸರ್ಕಾರಕ್ಕೆ 5 ಸವಾಲ್!

ರಾಯಚೂರಿನಲ್ಲಿ ನಡೆದ ಗ್ರಾಮ‌ಲೆಕ್ಕಿಗನ ಕೊಲೆ ವಿಚಾರವಾಗಿ ಸರಕಾರ ಕೈ ಕಟ್ಟಿ ಕೂಡಲ್ಲ. ರಾಜ್ಯ ಸರಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಇಬ್ಬರನ್ನ ಬಂಧಿಸಿದೆ.

ರಾಜ್ಯದಲ್ಲಿ ನಡಿಯುತ್ತಿರೊ ಅಕ್ರಮ ಮರಳು ದಂಧೆಯನ್ನ ರಾತ್ರೋರಾತ್ರಿ ನಿಲ್ಲಿಸಲು ಕಷ್ಟಸಾಧ್ಯ. ಇದರಲ್ಲಿ ಅಧಿಕಾರಿಗಳ ಕುಮ್ಮಕ್ಕೂ, ರಾಜಕಾರಣಿಗಳ ಒತ್ತಡವೂ ಇದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ.

ರಾಯಚೂರು: ಅಕ್ರಮ ತಡೆಯಲು ಹೋದ ಅಧಿಕಾರಿಗೆ ಸಿಕ್ಕಿದ್ದು ಸಾವು

ರಾಜ್ಯದಲ್ಲಿ ಅಕ್ರಮ ಮರಳು ದಂಧೆ ನಿಲ್ಲಿಸಲು ಶೀಘ್ರದಲ್ಲೇ ಅಧಿಕಾರಿಗಳ ಸಭೆ ಕರೆದು ತೀರ್ಮಾನ ಕೈಗೊಳ್ಳಲಾಗುವುದು ಎಂದರು.

Follow Us:
Download App:
  • android
  • ios