Asianet Suvarna News Asianet Suvarna News

ಕನಕಗಿರಿಯಲ್ಲಿ ಬಾಲಕ ಸಾವು ಪ್ರಕರಣ: ಆರೋಗ್ಯ ಇಲಾಖೆಯಿಂದ ಪತ್ರಿಕಾ ಪ್ರಕಟಣೆ

ನಿನ್ನೆ‌ ಕೊಪ್ಪಳ ಜಿಲ್ಲೆಯ ಕನಕಗಿರಿ ಪಟ್ಟಣದಲ್ಲಿ 5 ವರ್ಷದ ಕನಕರಾಯ ಎನ್ನುವ ಬಾಲಕ ಸಾವನ್ನಪ್ಪಿದ್ದ ಪ್ರಕರಣಕ್ಕೆ ಆರೋಗ್ಯ ಇಲಾಖೆಯಿಂದ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.

Child dies of respiratory problem in Kanakagiri Doctor press release at koppal rav
Author
First Published Jun 20, 2023, 8:15 AM IST

ಕೊಪ್ಪಳ (ಜೂ.20): ನಿನ್ನೆ‌ ಕೊಪ್ಪಳ ಜಿಲ್ಲೆಯ ಕನಕಗಿರಿ ಪಟ್ಟಣದಲ್ಲಿ 5 ವರ್ಷದ ಕನಕರಾಯ ಎನ್ನುವ ಬಾಲಕ ಸಾವನ್ನಪ್ಪಿದ್ದ ಪ್ರಕರಣಕ್ಕೆ ಆರೋಗ್ಯ ಇಲಾಖೆಯಿಂದ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.

ಕನಕರಾಯ ಸಾವು ಸಂಭವಿಸಿದ ಏರಿಯಾದಲ್ಲಿ ಕಲುಷಿತ ನೀರಿ‌ನ ಸಮಸ್ಯೆ ಇಲ್ಲ. ಜೊತೆಗೆ ಯಾವುದೇ ವಾಂತಿ-ಬೇಧಿ ಪ್ರಕರಣಗಳಿಲ್ಲ ನಿನ್ನೆ ಉಸಿರಾಟದ ಸಮಸ್ಯೆಯಿಂದ ಬಾಲಕ ಸಾವನ್ನಪ್ಪಿದ್ದಾನೆ. ವಾಂತಿ ಬೇಧಿಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಕನಕರಾಯ. ಚಿಕಿತ್ಸೆ ಫಲಕಾರಿಯಾಗದೆ ಸಾವು. ಈಗಾಗಲೇ ಜಿಲ್ಲೆಯಲ್ಲಿ ವಾಂತಿ-ಬೇಧಿ ಯಿಂದ ಮೂವರು ಮೃತಪಟ್ಟಿದ್ದಾರೆ. 

ಕನಕರಾಯನಿಗೆ ಜ್ವರದ ಜೊತೆಗೆ ವಾಂತಿ-ಬೇಧಿ ಆಗಿದೆ. ಕನಕಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ಬಳಿಕ ಮನೆಗೆ ತೆರಳಿದ್ದಾನೆ. ಮನೆಯಲ್ಲಿ ತಾಯಿ ಇಡ್ಲಿ ತಿನಿಸಿದ್ದಾಳೆ. ಈ ವೇಳೆ ಆತ‌ನಿಗೆ ವಾಂತಿಯಾಗಿದೆ. ಪೂರ್ತಿ ವಾಂತಿ ಮಾಡಿಕೊಳ್ಳದೆ ಕನಕ ಮಲಗಿದ್ದಾನೆ. ವಾಂತಿ ಶ್ವಾಸಕೋಶದ ಒಳಗೆ ಹೋಗಿ ಉಸಿರಾಟದ ಸಮಸ್ಯೆಯಿಂದ ಕನಕರಾಯ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಕುಷ್ಟಗಿ: ಕಲುಷಿತ ನೀರು ಸೇವಿಸಿ ಮಗು ಸಾವು, ಮೃತರ ಸಂಖ್ಯೆ 2ಕ್ಕೇರಿಕೆ

Follow Us:
Download App:
  • android
  • ios