Asianet Suvarna News Asianet Suvarna News

ಎರಡು ವರ್ಷದಿಂದ ನರ್ಸಿಂಗ್ ವಿದ್ಯಾರ್ಥಿಗಳಿಗಿಲ್ಲ ಸ್ಕಾಲರ್ ಶಿಪ್

  • ಕೊರೋನಾದ ಮೊದಲ ,ಎರಡನೇ ಅಲೆಯಲ್ಲಿ ನರ್ಸ್  ಗಳು ಹಗಲು ರಾತ್ರಿ ಎನ್ನದೇ ಕರ್ತವ್ಯ ನಿರ್ವಹಿಸಿದರು
  • ಚಿಕ್ಕಮಗಳೂರಿನ ನರ್ಸಿಗ್ ಟ್ರೈನಿಂಗ್ ಪಡೆಯುವ ವಿದ್ಯಾರ್ಥಿಗಳು ಈಗ ಸಂಕಷ್ಟದಲ್ಲಿ
chikkamagaluru nursing Students did not get Scholarship from last 2 year snr
Author
Bengaluru, First Published Oct 31, 2021, 9:57 AM IST

 ಚಿಕ್ಕಮಗಳೂರು (ಅ.31):  ಕೊರೋನಾದ (Corona) ಮೊದಲ ,ಎರಡನೇ ಅಲೆಯಲ್ಲಿ ನರ್ಸ್ ಗಳು ಹಗಲು ರಾತ್ರಿ ಎನ್ನದೇ ಕರ್ತವ್ಯ ನಿರ್ವಹಿಸಿದರು. ಅಂತಹ ನರ್ಸ್ ಗಳ (Nurse) ಸೇವೆ ಅನನ್ಯ, ಆದರೆ ಚಿಕ್ಕಮಗಳೂರಿನ (Chikkamagaluru) ನರ್ಸಿಗ್ ಟ್ರೈನಿಂಗ್ ಪಡೆಯುವ ವಿದ್ಯಾರ್ಥಿಗಳು ಈಗ ಸಂಕಷ್ಟದಲ್ಲಿ ಇದ್ದಾರೆ.  ಎರಡು ವರ್ಷದಿಂದ ವಿದ್ಯಾರ್ಥಿ (Students) ವೇತನ ಬರದೆ ಬಡ ವಿದ್ಯಾರ್ಥಿಗಳು (Students) ಸಮಸ್ಯೆ ಎದುರಿಸುತ್ತಿದ್ದಾರೆ.

"  
  ಚಿಕ್ಕಮಗಳೂರು (Chikkamagaluru) ನಗರದ ನೈಟಿಂಗೆಲ್ ನರ್ಸಿಂಗ್ ಕಾಲೇಜಿನಲ್ಲಿ (College) ನರ್ಸಿಂಗ್ ಶಿಕ್ಷಣ ಪಡೆಯುತ್ತಿರೋ ವಿದ್ಯಾರ್ಥಿಗಳು ಕಳೆದ ಎರಡು ವರ್ಷದಿಂದ ಸ್ಕಾಲರ್ ಶಿಪ್ ವಂಚಿತರಾಗಿದ್ದಾರೆ.  ವಿದ್ಯಾರ್ಥಿಗಳು ಸರ್ಕಾರದ ನಡೆಯಿಂದ ವಿದ್ಯಾಭ್ಯಾಸಕ್ಕೆ ಗುಡ್ ಬೈ ಹೇಳುವ ನಿರ್ಧಾರಕ್ಕೆ ಬಂದಿದ್ದಾರೆ. ನರ್ಸಿಗ್ (Nursing) ಓದುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು  ಅರ್ಜಿ ಸಲ್ಲಿಸಿದರೂ  ಎರಡು ವರ್ಷದಿಂದ ವಿದ್ಯಾರ್ಥಿ ವೇತನ (Scholarship) ಬಾರದೆ ಬಡ ವಿದ್ಯಾರ್ಥಿಗಳು ಸಂಕಷ್ಟ ಎದುರಿಸುವಂತಾಗಿದೆ.  

ರೈತರ ಮಕ್ಕಳ ಶಿಷ್ಯ ವೇತನಕ್ಕೆ ಇಂದು ಚಾಲನೆ : ಯಾರಿಗೆ ಎಷ್ಟು ?
 
ಇಲ್ಲಿ ಸ್ಕಾಲರ್ ಶಿಪ್‌ಗಾಗಿ ಸಮಾಜ ಕಲ್ಯಾಣ ಇಲಾಖೆ (Social welfare Department) ಕಚೇರಿ ಅಲೆದು ಅಲೆದು ನರ್ಸಿಂಗ್ ವಿದ್ಯಾರ್ಥಿಗಳು ಸುಸ್ತಾಗಿದ್ದಾರೆ.  2019-20, 2020-21ರ ಅವಧಿಯಲ್ಲಿ ಅರ್ಜಿ ಸಲ್ಲಿಸಲಾಗಿದ್ದು ಈ ವರೆಗೂ ವೇತನ ನೀಡಿಲ್ಲ.

 ಇದರಿಂದ ವಿದ್ಯಾಭ್ಯಾಸಕ್ಕೆ (Education) ಸಾಕಷ್ಟು ತೊಂದರೆಯಾಗಿದ್ದು ಕೂಡಲೇ ವಿದ್ಯಾರ್ಥಿ ವೇತನ ನೀಡುವಂತೆ ವಿದ್ಯಾರ್ಥಿಗಳು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಇನ್ನು ಮನೆಯಲ್ಲಿ ಬಡತನ ಹಾಗೂ ಕೋವಿಡ್ (Covid) ಸಂದರ್ಭದಲ್ಲಿ ಜೀವನ ನಡೆಸುವುದು ಪೋಷಕರಿಗೆ ಕಷ್ಟಕರವಾಗಿದೆ. ವಿದ್ಯಾರ್ಥಿ ವೇತನವನ್ನು ನೆಚ್ಚಿಕೊಂಡು ನಾವು ಶಿಕ್ಷಣ (Education) ಪಡೆಯಲು ಬಂದಿದ್ದು, ಈಗ ಕಳೆದ ಎರಡು ವರ್ಷದಿಂದ ವಿದ್ಯಾರ್ಥಿ ವೇತನ ಬರದಿರುವುದರಿಂದ ಸಾಕಷ್ಟು ತೊಂದರೆಯಾಗಿದೆ ಎಂದು ವಿದ್ಯಾರ್ಥಿಗಳು ಆಳಲನ್ನ ತೋಡಿಕೊಂಡಿದ್ದಾರೆ. ಇನ್ನು  ಈ ಬಗ್ಗೆ ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ (DC KN Ramesh) ಭೇಟಿಯಾಗಿಯೂ ಸ್ಕಾಲರ್ ಶಿಪ್ ಗಾಗಿ ಮನವಿ ಸಲ್ಲಿಸಿದ್ದಾರೆ. 

ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ನೀಡಿದ ಸಚಿವ ಶ್ರೀನಿವಾಸ್​ ಪೂಜಾರಿ

 ಒಟ್ಟಾರೆ ಕಾಫಿನಾಡಿನಲ್ಲಿ ಮಾತ್ರವಲ್ಲ ಇಡೀ ರಾಜ್ಯದಲ್ಲೇ ನರ್ಸಿಗ್ ಓದುತ್ತಿರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಜಿಲ್ಲೆಯಲ್ಲಿ ನೂರಾರು ವಿದ್ಯಾರ್ಥಿಗಳು ಇಂತಹ ಪರಿಸ್ಥಿತಿಯನ್ನು ಎದುರಿಸುತ್ತಿದ್ದು ಸರ್ಕಾರದ ವಿರುದ್ದ ವಿದ್ಯಾರ್ಥಿಗಳು ಆಕ್ರೋಶವನ್ನು ಹೊರಹಾಕಿದ್ದಾರೆ. ನಿರ್ಲಕ್ಷ್ಯ ವೋ  ಅಥವಾ ಸರ್ಕಾರದ ಬೇಜವಾಬ್ದಾರಿತನದಿಂದ ಎರಡು ವರ್ಷ ಕಳೆದರೂ, ಅಧಿಕಾರಿಗಳು ಕಣ್ಣು  ಮುಚ್ಚಿ ಕುಳಿತಿದ್ದಾರೆ. ಇನ್ನಾದ್ರೂ ಇತ್ತ ಸರ್ಕಾರ ಗಮನಹರಿಸಿ ವಿದ್ಯಾರ್ಥಿ ಸಮೂಹದ ಸಮಸ್ಯೆಯನ್ನು ಬಗ್ಗೆಹರಿಸಬೇಕಾಗಿದೆ ಎಂದು ಹೇಳುತ್ತಿದ್ದಾರೆ. 

  • ನರ್ಸಿಂಗ್ ವಿದ್ಯಾರ್ಥಿಗಳಿಗೆ ಬಂದಿಲ್ಲ ಸ್ಕಾಲರ್ ಶಿಪ್
  • ಕೊರೋನಾದ ಮೊದಲ ,ಎರಡನೇ ಅಲೆಯಲ್ಲಿ ನರ್ಸ್  ಗಳು ಹಗಲು ರಾತ್ರಿ ಎನ್ನದೇ ಕರ್ತವ್ಯ 
  • ಅಂತಹ ನರ್ಸ್ ಗಳ ಸೇವೆ ಅನನ್ಯ , ಆದ್ರೆ ನರ್ಸಿಗ್ ಟ್ರೈನಿಂಗ್ ಪಡೆಯುವ ವಿದ್ಯಾರ್ಥಿಗಳು ಈಗ ಸಂಕಷ್ಟದಲ್ಲಿ
  • ಅಧಿಕಾರಿಗಳಿಗೆ ಸ್ಕಾಲರ್ ಶಿಪ್ ಕೇಳಿ ಕೇಳಿ ಸುಸ್ತಾದ ವಿದ್ಯಾರ್ಥಿಗಳು 
  • ಚಿಕ್ಕಮಗಳೂರಿನ ನೂರಾರು ವಿದ್ಯಾರ್ಥಿಗಳ ಗೋಳು ಕೇಳೋರಿಲ್ಲ
  • ಸಮಾಜ ಕಲ್ಯಾಣ ಇಲಾಖೆ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ
  • ಸ್ಕಾಲರ್ ಶಿಪ್ ಕೊಡಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದ ವಿದ್ಯಾರ್ಥಿಗಳು
  • ಹಾಗಾದರೆ ಎಸ್ಸಿ, ಎಸ್ಟಿ ಮಕ್ಕಳಿಗೆ ಎರಡು ವರ್ಷದಿಂದ ಸ್ಕಾಲರ್ ಶಿಪ್ ಬಂದಿಲ್ವ
  • ಅಧಿಕಾರಿಗಳ ನಿರ್ಲಕ್ಷ್ಯ ವೋ  ಅಥವಾ ಸರ್ಕಾರದ ಬೇಜವಬ್ದಾರಿವೋ
  • ಎರಡು ವರ್ಷ ಕಳೆದ್ರು ಕಣ್ಣು ಮುಚ್ಚಿ ಕುಳಿತ ಅಧಿಕಾರಿಗಳು
Follow Us:
Download App:
  • android
  • ios