* ಚಾಮರಾಜನಗರ ಆಕ್ಸಿಜನ್ ದುರಂತದ ಆಡಿಯೋ* ರೋಹಿಣಿ ಸಿಂಧೂರಿ ಸರಿಯಾದ ಹೆಜ್ಜೆ ಇಟ್ಟಿದ್ದರೆ ಪ್ರಾಣ ಉಳಿಯುತ್ತಿತ್ತಾ?* ವೈರಲ್ ಆದ ಆಡಿಯೋ ತೆರೆದಿಟ್ಟ ಸತ್ಯ
ಮೈಸೂರು/ ಬೆಂಗಳೂರು(ಜೂ. 06) ಚಾಮರಾಜನಗರ ಆಕ್ಸಿಜನ್ ದುರಂತಕ್ಕೆ ಪ್ರಬಲ ಸಾಕ್ಷಿ ಸಿಕ್ಕಿದೆ. ಮಹಾದುರಂತಕ್ಕೆ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಅವರೇ ಕಾರಣ ಎನ್ನುತ್ತಿದೆ ಈ ಆಡಿಯೋ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಅಂದು ಡಿಸಿ ರೋಹಿಣಿ ಸಿಂಧೂರಿ ಎಚ್ಚೆತ್ತುಕೊಂಡಿದ್ದರೆ 34 ಜನರ ಪ್ರಾಣ ಉಳಿಯುತ್ತಿತ್ತಾ? ರೈತ ಮುಖಂಡರು ಬಿಡುಗಡೆ ಮಾಡಿರುವ ಆಡಿಯೋ ಇದೀಗ ಹಲ್ ಚಲ್ ಸೃಷ್ಟಿಸಿದೆ. ಅಧಿಕಾರಿಯೊಬ್ಬರೊಂದಿಗೆ ರೋಹಿಣಿ ಸಿಂಧೂರಿ ಮಾತನಾಡಿರುವ ಆಡಿಯೋ ಎಲ್ಲ ಮಾಹಿತಿಯನ್ನು ತೆರೆದಿರಿಸಿದೆ.
ಏನಿದು ಮೈಸೂರಿನಲ್ಲಿ ಐಎಎಸ್ ಕಿತ್ತಾಟ
ಆಕ್ಸಿಜನ್ ಕೊಡುವಂತೆ ಚಾಮರಾಜನಗರದಿಂದ ಅಧಿಕಾರಿಗೆ ಕರೆ ಬಂದಿತ್ತು. ನಮಗೆ ಕೊಡಿ ಎಂದು ಚಾಮರಾಜನಗರದವರು ಕೇಳಿಕೊಂಡಿದ್ದರು.
"
"
