Asianet Suvarna News Asianet Suvarna News

ಮಾರಮ್ಮನ ಪ್ರಸಾದಕ್ಕೆ 10 ಮಂದಿ ಬಲಿ: ವಿಷವಿಕ್ಕಿದ ಇಬ್ಬರ ಬಂಧನ

ಚಾಮರಾಜನಗರ ಜಿಲ್ಲೆಯ ಹನೂರು ಸಮೀಪದ ಸುಳ್ವಾಡಿ ಗ್ರಾಮ ಮಾರಮ್ಮನ ಪ್ರಸಾದ ದುರಂತಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. 

Chamarajanagar district police arrets two persons over Maramma Devi prasadam tragedy
Author
Bengaluru, First Published Dec 14, 2018, 8:04 PM IST

ಚಾಮರಾಜನಗರ,[ಡಿ.14]: ಜಿಲ್ಲೆಯ ಹನೂರು ಸಮೀಪದ ಸುಳ್ವಾಡಿ ಗ್ರಾಮ ಮಾರಮ್ಮನ ಪ್ರಸಾದ ಸೇವಿಸಿದ ಸುಮಾರು 65ಕ್ಕೂ ಹೆಚ್ಚು ಭಕ್ತರು ಆಸ್ಪತ್ರೆ ಸೇರಿದ್ದು, ಸಾವಿನ ಸಂಖ್ಯೆ 10ಕ್ಕೆ ಏರಿಕೆಯಾಗಿದೆ.

ದೇವಸ್ಥಾನದ ಗೋಪುರ ಸಂಬಂಧ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿತ್ತು ಎನ್ನಲಾಗಿದ್ದು, ಈ ಕಾರಣದಿಂದಾಗಿಯೇ ವಿಷ ಹಾಕಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಈ ಘಟನೆ ಸಂಬಂಧ ಚಾಮರಾಜನಗರ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಚಾಮರಾಜನಗರ: ಏರುತ್ತಿರುವ ಸಾವಿನ ಸರಣಿ, ಪ್ರಸಾದದಲ್ಲಿ ವಿಷ ಹಾಕಿದ್ರಾ ಪಾಪಿಗಳು..?

ದೇವಾಲಯ ಆಡಳಿತ ಮಂಡಳಿ ಸದಸ್ಯ ಗೌಡರ್​ ಚಿನ್ನತ್ತಿ ಹಾಗೂ ದೇವಾಲಯ ಮ್ಯಾನೇಜರ್ ಮಾದೇಶ್ ಎನ್ನುವ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ದೇವಾಲಯ ಮ್ಯಾನೇಜರ್ ಮಾದೇಶ್​​ನೇ ಈ ಹೀನಾ ಕೃತ್ಯ ಮಾಡಿರಬಹುದು ಎಂದು ಶಂಕಿಸಲಾಗಿದೆ.

ಇನ್ನು ಘಟನೆ ಸಂಬಂಧ ಪ್ರತಿಕ್ರಿಯಿಸಿರುವ ಮೈಸೂರಿನ ಕೆಆರ್​ ಆಸ್ಪತ್ರೆಯ ಡಿಹೆಚ್​ಒ ಬಸವರಾಜ್, ​ ಪ್ರಸಾದದಲ್ಲಿ ಓಪಿ ಪಾಯ್ಸನ್ ಮಿಕ್ಸ್​ ಆಗಿರಬಹುದು. ಇದು ಒಂದು ರೀತಿಯ ಕೀಟ ನಾಶಕ. ಈ ಕೀಟ ನಾಶಕವನ್ನು  ಜಮೀನಿಗೆ ಸಿಂಪಡಿಸಲಾಗುತ್ತದೆ.ಆದರೆ ಈ ಬಗ್ಗೆ ಖಚಿತವಾಗಿ ಹೇಳಲಾಗುವುದಿಲ್ಲ. ಈ ಬಗ್ಗೆ ಫೊರೆನ್ಸಿಕ್​ ಲ್ಯಾಬ್​ ರಿಪೋರ್ಟ್​ ಬಳಿಕ ಖಚಿತ ಪಡಿಸಲಾಗುವುದು ಎಂದರು.

Follow Us:
Download App:
  • android
  • ios