ಬೆಂಗಳೂರು: ದಿಶಾಭಾರತ್ ಗೆ 20ನೇ ವರ್ಷದ ಸಂಭ್ರಮ, ಫೆ.24ರಂದು ವಿವಿಧ ಕಾರ್ಯಕ್ರಮಗಳಿಗೆ ಚಾಲನೆ
ಕಳೆದ ಎರಡು ದಶಕಗಳಿಂದ, ದಿಶಾ ಭಾರತ್ ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯಗಳು, ನಾಯಕತ್ವ ಗುಣಗಳು ಮತ್ತು ಜೀವನ ಕೌಶಲ್ಯ, ಸಮಾಜಕ್ಕೆ ಧನಾತ್ಮಕವಾಗಿ ಕೊಡುಗೆ ನೀಡುವ ಜವಾಬ್ದಾರಿಯುತ ನಾಗರಿಕರನ್ನು ಬೆಳೆಸುವ ಗುರಿಯನ್ನು ಹೊಂದಿದೆ. ಈ ದಿಕ್ಕಿನಲ್ಲಿ ಸಂಸ್ಥೆಯ 19 ವರ್ಷಗಳನ್ನು ಪೂರೈಸಿದ್ದು ಈ ಪಯಣ ಒಂದು ಮಹತ್ವದ ಮೈಲಿಗಲ್ಲಾಗಿದೆ.
ವರದಿ: ಸ್ವಸ್ತಿಕ್ ಕನ್ಯಾಡಿ, ಏಷಿಯಾನೆಟ್ ಸುವರ್ಣ ನ್ಯೂಸ್, ಬೆಂಗಳೂರು
ಬೆಂಗಳೂರು(ಫೆ.22): ದಿಶಾಭಾರತ್ ಸಂಸ್ಥೆ 19 ವರ್ಷಗಳನ್ನು ಪೂರೈಸಿದ್ದು ಇಪ್ಪತ್ತನೇ ವರ್ಷಕ್ಕೆ ಕಾಲಿಡುತ್ತಿರುವ ಹಿನ್ನಲೆ ಇದೇ ಫೆಬ್ರವರಿ 24ರಂದು ಸಂಭ್ರಮ ಕಾರ್ಯಕ್ರಮ ನಡೆಯಲಿದೆ. ಈ ಹಿನ್ನಲೆಯಲ್ಲಿ ಇಂದು ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ದಿಶಾಭಾರತ್ ಸಂಸ್ಥಾಪಕಿ ರೇಖಾ ರಾಮಚಂದ್ರನ್ ಕಾರ್ಯಕ್ರಮದ ರೂಪುರೇಷೆಯ ಕುರಿತು ಮಾತನಾಡಿದರು.
ಕಳೆದ ಎರಡು ದಶಕಗಳಿಂದ, ದಿಶಾ ಭಾರತ್ ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯಗಳು, ನಾಯಕತ್ವ ಗುಣಗಳು ಮತ್ತು ಜೀವನ ಕೌಶಲ್ಯ, ಸಮಾಜಕ್ಕೆ ಧನಾತ್ಮಕವಾಗಿ ಕೊಡುಗೆ ನೀಡುವ ಜವಾಬ್ದಾರಿಯುತ ನಾಗರಿಕರನ್ನು ಬೆಳೆಸುವ ಗುರಿಯನ್ನು ಹೊಂದಿದೆ. ಈ ದಿಕ್ಕಿನಲ್ಲಿ ಸಂಸ್ಥೆಯ 19 ವರ್ಷಗಳನ್ನು ಪೂರೈಸಿದ್ದು ಈ ಪಯಣ ಒಂದು ಮಹತ್ವದ ಮೈಲಿಗಲ್ಲಾಗಿದೆ.
GUARANTEES: ಲೋಕಸಭೆ ಚುನಾವಣೆ ನಂತರ ಕೆಲವರಿಗೆ ಕಾಂಗ್ರೆಸ್ ಗ್ಯಾರಂಟಿ ಬಂದ್: ಅರವಿಂದ್ ಬೆಲ್ಲದ್
ಈ ವಿಶೇಷ ಸಂದರ್ಭದಲ್ಲಿ ವರ್ಷ ಪೂರ್ತಿ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು ಅವುಗಳ ಉದ್ಘಾಟನಾ ಕಾರ್ಯಕ್ರಮ ‘ಸಂಭ್ರಮ’ ಫೆ. 24, 2024 ಶನಿವಾರ ಬೆಂಗಳೂರಿನ ಜಯನಗರ 2ನೇ ಬ್ಲಾಕ್ ನಲ್ಲಿರುವ ಆರ್ ವಿ ಟೀಚರ್ಸ್ ಕಾಲೇಜಿನಲ್ಲಿ ಸಂಜೆ 4:00 ಗಂಟೆಗೆ ನಡೆಯಲಿದೆ.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (ಯುಜಿಸಿ) ಮುಖ್ಯಸ್ಥ ಪ್ರೊ. ಎಂ. ಜಗದೀಶ್ ಕುಮಾರ್, ಆ್ಯಕ್ಟ್ ಸಂಸ್ಥೆಯ ಮುಖ್ಯಸ್ಥ ಡಾ. ಗುರುರಾಜ ಕರಜಗಿ, ಬೆಂಗಳೂರಿನ ಐಐಎಂನ ಪ್ರೊ. ಮಹಾದೇವನ್ ಆಗಮಿಸಲಿದ್ದಾರೆ.
20ನೇ ವರ್ಷದ ಸಂಭ್ರಮದಲ್ಲಿ ವಿವಿಧ ಕಾರ್ಯಕ್ರಮಗಳ ಆಯೋಜನೆಗೆ ಯೋಜನೆ :
ದಿಶಾಭಾರತ್ ಇಪ್ಪತ್ತು ವರ್ಷಗಳ ಸಂಭ್ರಮವನ್ನು ಮತ್ತಷ್ಟು ಮೆರುಗುಗೊಳಿಸಲು ವರ್ಷವಿಡೀ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲು ದಿಶಾಭಾರತ್ ಯೋಜನೆ ರೂಪಿಸಿದೆ. ಭಾರತೀಯ ಇತಿಹಾಸಗಳಿಂದ ನೈತಿಕತೆ ಮತ್ತು ಜೀವನಾದರ್ಶಗಳು ವಿಷಯವಾಗಿ ಮಾಸಿಕ ಉಪನ್ಯಾಸ ಮಾಲಿಕೆ, ಶಿಕ್ಷಣ ತಜ್ಞರ ವಿಚಾರಘೋಷ್ಠಿ, ಮೆಗಾ ಯುವ ಸಮಾವೇಶ, #spreadinggoodness ಚಾಲೆಂಜ್ – ಆನ್ಲೈನ್ ಅಭಿಯಾನ, ಮೌಲ್ಯ ಶಿಕ್ಷಣದ ಕುರಿತಾಗಿ ರಾಷ್ಟ್ರಮಟ್ಟದ ಶಿಕ್ಷಣ ತಜ್ಞರ ಮತ್ತು ಶಿಕ್ಷಕರ ಸಮ್ಮೇಳನ, ಎನ್ ಎಸ್ ಎಸ್ ಸಂಯೋಜಕರ ಸಮಾಗಮ, ಯುವಜನರ ಸಬಲೀಕರಣ ಮತ್ತು ಮೌಲ್ಯಾಧಾರಿತ ಶಿಕ್ಷಣಕ್ಕಾಗಿ ಸೇವೆ ಸಲ್ಲಿಸುತ್ತಿರುವ ಸಂಸ್ಥೆಗಳ ಒಕ್ಕೂಟ ‘ಸೇವಾ ಕುಂಭ’, ಕಾರ್ಯಕರ್ತರ ಕೌಶಲ್ಯಾಭಿವೃದ್ಧಿ ಕಾರ್ಯಾಗಾರಗಳು, ಮೇರಾ ಭಾರತ್ ಮಹಾನ್ – ರಾಜ್ಯ ಮಟ್ಟದ ರಸಪ್ರಶ್ನೆ, ಶಿಕ್ಷಕರಿಗೆ ಮತ್ತು ಪೋಷಕರಿಗೆ ಕಾರ್ಯಾಗಾರಗಳು, ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ, ಸಮರ್ಥ ನಾಯಕತ್ವ, ಭಾರತದ ಜ್ಞಾನಧಾರೆ ಮುಂತಾದ ವಿಷಯಗಳ ಬಗ್ಗೆ ಆನ್ಲೈನ್ ಮತ್ತು ಆಫ್ ಲೈನ್ ಕೋರ್ಸ್ ಪ್ರಾರಂಭ, ಮೌಲ್ಯಾಧಾರಿತ ಶಿಕ್ಷಣ ಕಲಿಸಲು ಆಸಕ್ತ ತರಬೇತುದಾರರಿಗೆ ತರಬೇತಿ, Train the trainer ಕಾರ್ಯಾಗಾರ, ದಿಶಾಭಾರತ್ – ರಾಜ್ಯಾದ್ಯಂತ / ರಾಷ್ಟ್ರಾದ್ಯಂತ ಘಟಕಗಳ ಪ್ರಾರಂಭ, ಯುವಜನ – ರಾಷ್ಟ್ರನಿರ್ಮಾಣದ ರೂವಾರಿಗಳು ಎಂಬ ಯುವಜನರ ಮೂಲಕವೇ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ವಿಶೇಷ ಕಾರ್ಯಕ್ರಮಗಳು ನಡೆಯಲಿದೆ.