ತಮಿಳು ಬ್ಯಾನರ್ ಕಿತ್ತುಹಾಕಿದ ವಾಟಾಳ್ ಮೇಲೆ ಕೇಸ್, ಕೇಸ್
ವಾಟಾಳ್ ನಾಗರಾಜ್ ಇದೀಗ ಮತ್ತೊಮ್ಮೆ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಎರೆಡೆರಡು ಬಾರಿ ವಿವಾದವಾಗಿದ್ದು ಈ ಸಂಬಂಧ ಇದೀಗ ಪ್ರಕರಣ ದಾಖಲಾಗಿದೆ.
ಚಾಮರಾಜನಗರ (ಜ.18): ಚಾಮರಾಜನಗರದ ಗಡಿಭಾಗದಲ್ಲಿ ತಮಿಳು ನಾಮಫಲಕ ಕಿತ್ತು ಹಾಕಿ ವಾಟಾಳ್ ನಾಗರಾಜ್ ವಿವಾದ ಒಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಭಾನುವಾರ ಚಾಮರಾಜನಗರದ ಗಡಿಭಾಗಕ್ಕೆ ತೆರಳಿದ್ದ ವಾಟಾಳ್ ಅರಕಲವಾಡಿ ಸಮೀಪ ಎತ್ತಗಟ್ಟಿ ಬೆಟ್ಟದ ರಸ್ತೆಯಲ್ಲಿ ಹಾಕಿದ್ದ ತಮಿಳು ನಾಮಫಲಕ ಕಿತ್ತೆಸೆದರು.
ಕೇವಲ 8 ದಿನಗಳ ಅಂತರದಲ್ಲಿ ಎರಡು ಬಾರಿ ತಮಿಳು ನಾಮಫಲಕಗಳನ್ನ ವಾಟಾಳ್ ನಾಗರಾಜ್ ಕಿತ್ತೆಸೆದಿದ್ದರು. ಕಳೆದ ವಾರ ಚಾಮರಾಜನಗರ ತಾಲೋಕು ಅಟ್ಟುಗೂಳಿಪುರದ ಬಳಿ ತಮಿಳು ನಾಮ ಫಲಕಗಳನ್ನು ಕೆಡವಿ ಹಾಕಿದ್ದರು.
ಚಾಮರಾಜನಗರ: ನಡುರಸ್ತೆಯಲ್ಲಿ ಮಲಗಿ ವಾಟಾಳ್ ನಾಗರಾಜ್ ಪ್ರತಿಭಟನೆ
ಕರ್ನಾಟಕ ತಮಿಳುನಾಡು ಗಡಿ ಸಂಧಿಸುವ ಜಾಗದಲ್ಲಿ ಈ ಘಟನೆ ನಡೆದಿದ್ದು, ತಮಿಳುನಾಡಿಗೆ ಸೇರಿದ ಜಾಗದಲ್ಲಿ ನಾಮಫಲಕ ಕೆಡವಿರುವ ಆರೋಪ ಎದುರಾಗಿದೆ.
ಇದೀಗ ಈ ಸಂಬಂಧ ವಾಟಾಳ್ ನಾಗರಾಜ್ ಹಾಗು ಬೆಂಬಲಿಗರ ವಿರುದ್ಧ ತಾಳವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೆಕ್ಷನ್ 143, 147, 270/3(1) ಅನ್ವಯ ಕೇಸು ದಾಖಲು ಮಾಡಲಾಗಿದೆ.