Car catches fire near CM Siddaramaiah house  ಮುಖ್ಯಮಂತ್ರಿಗಳ ನಿವಾಸದ ಬಳಿ ಪಿಯೆಟ್ ಕಾರಿಗೆ ಆಕಸ್ಮಿಕ ಬೆಂಕಿ ತಗುಲಿ ಧಗಧಗನೆ ಉರಿದ ಘಟನೆ. ಹೋಟೆಲ್ ಸಿಬ್ಬಂದಿ ಮತ್ತು ಪೊಲೀಸರ ಸಮಯಪ್ರಜ್ಞೆಯಿಂದ ಬೆಂಕಿ ನಂದಿಸಲಾಯಿತು. ಅಗ್ನಿಶಾಮಕ ದಳ ತಡವಾಗಿ ಆಗಮಿಸಿದ್ದು ಟೀಕೆಗೆ ಗುರಿಯಾಗಿದೆ.

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸದ ಹತ್ತಿರ ರೋಡ್‌ ಮಧ್ಯೆ ಪಿಯೆಟ್ ಕಾರಿಗೆ ಅಚಾನಕ್ ಆಗಿ ಬೆಂಕಿ ತಗುಲಿ ಹೊತ್ತಿಕೊಂಡು ಧಗಧಗನೆ ಉರಿದ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ. ಆದರೆ ಅರ್ಧ ಗಂಟೆಗೂ ಹೆಚ್ಚು ಹೊತ್ತು ಕಾರು ಉರಿದು ಹೋಗಿದೆ. ಮಾಹಿತಿಯ ಪ್ರಕಾರ, ಕಾರು ಅಚಾನಕ್ ನಿಲ್ಲಿಸಿ ಹೋಗುತ್ತಿದ್ದ ವೇಳೆ ಇಂಜಿನ್‌ನಿಂದ ಹೊಗೆ ಕಾಣಿಸಿಕೊಂಡು ತಕ್ಷಣವೇ ಬೆಂಕಿ ಹೊತ್ತಿಕೊಂಡಿದೆ. ಕಾರು ಅರ್ಧ ಗಂಟೆಗೂ ಹೆಚ್ಚು ಕಾಲ ಹೊತ್ತಿ ಉರಿಯುತ್ತಿದ್ದರೂ ಅಗ್ನಿಶಾಮಕ ದಳದ ವಾಹನ ತಡವಾಗಿ ಸ್ಥಳಕ್ಕೆ ತಲುಪಿದ್ದು, ಅದಾಗಲೇ ಸ್ಥಳೀಯ ಹೊಟೇಲ್ ಸಿಬ್ಬಂದಿ ಕಾರಿಗೆ ಹೊತ್ತಿದ್ದ ಬೆಂಕಿಯನ್ನು ನಂದಿಸಿದರು.

Add Asianetnews Kannada as a Preferred SourcegooglePreferred

ಎಚ್ಚೆತ್ತ ಹೋಟೆಲ್ ಸಿಬ್ಬಂದಿ

ಅಗ್ನಿಶಾಮಕ ದಳ ತಡವಾಗಿ ಬಂದು ತಲುಪಿದ ಕಾರಣ ಸಮೀಪದಲ್ಲಿದ್ದ ಐಟಿಸಿ ವಿಂಡ್ಸರ್ ಮ್ಯಾನರ್ ಹೋಟೆಲ್ ಸಿಬ್ಬಂದಿ ತಕ್ಷಣ ಬೆಂಕಿ ಆರಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಹೋಟೆಲ್‌ನಲ್ಲಿದ್ದ ಬೆಂಕಿ ನಂದಿಸುವ ವ್ಯವಸ್ಥೆಯಿಂದ ನೀರು ಹಾಯಿಸಿ ಬೆಂಕಿ ನಿಯಂತ್ರಿಸಲು ಪ್ರಯತ್ನ ನಡೆಸಲಾಯಿತು.

ಪೊಲೀಸರ ನೆರವು

ಹೋಟೆಲ್ ಸಿಬ್ಬಂದಿಯ ಪ್ರಯತ್ನದಿಂದಲೂ ಬೆಂಕಿ ಸಂಪೂರ್ಣ ನಿಯಂತ್ರಣಕ್ಕೆ ಬರದ ಕಾರಣ, ಪೊಲೀಸರು ವಾಟರ್ ಟ್ಯಾಂಕ್‌ನಿಂದ ನೀರು ಹಾಯಿಸಿ ಬೆಂಕಿ ಆರಿಸುವ ಕಾರ್ಯ ನಡೆಸಿದರು. ಕೊನೆಗೂ ಬೆಂಕಿ ನಂದಿಸಲಾಯಿತು.

ಬೆಂಕಿ ಆರಿದ ಬಳಿಕ ಅಗ್ನಿಶಾಮಕ ವಾಹನ ಆಗಮನ

ಘಟನೆಯ ನಂತರ ಮಾತ್ರ ಅಗ್ನಿಶಾಮಕ ದಳದ ವಾಹನ ಸ್ಥಳಕ್ಕೆ ತಲುಪಿದ್ದು, ಸ್ಥಳೀಯರಲ್ಲಿ ಅಸಮಾಧಾನ ಉಂಟುಮಾಡಿತು. “ಅರ್ಧ ಗಂಟೆಗೂ ಹೆಚ್ಚು ಕಾಲ ಕಾರು ಉರಿಯುತ್ತಿದ್ದರೂ ಅಗ್ನಿಶಾಮಕ ದಳ ತಡವಾಗಿ ತಲುಪಿರುವುದು ಗಂಭೀರ ನಿರ್ಲಕ್ಷ್ಯ” ಎಂದು ಸಾಕ್ಷಿದಾರರು ಪ್ರತಿಕ್ರಿಯಿಸಿದರು.

ಕಾರಿನ ಮಾಲೀಕ ಮತ್ತು ಚಾಲಕರ ಹೇಳಿಕೆ

ಕಾರಿನ ಮಾಲೀಕರು ಮಾಧ್ಯಮಗಳಿಗೆ ಮಾತನಾಡಿ, “ಇಂಜಿನ್‌ನಿಂದ ಹೊಗೆ ಕಾಣಿಸಿಕೊಂಡು ಕಾರಿಗೆ ಬೆಂಕಿ ಹೊತ್ತಿಕೊಂಡಿದೆ. ಇದರಲ್ಲಿ ಯಾವುದೇ ಶಂಕಾಸ್ಪದ ಅಂಶವಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ಇನ್ನೊಂದೆಡೆ, ಕಾರನ್ನು ಚಾಲನೆ ಮಾಡುತ್ತಿದ್ದ ವ್ಯಕ್ತಿ ತನ್ನ ಹೇಳಿಕೆಯಲ್ಲಿ, “ನಾನು ಡ್ರೈವ್ ಯು ಆಫ್ ಅಪ್ಲಿಕೇಶನ್ ಮೂಲಕ ಬುಕ್ ಮಾಡಿಕೊಂಡಿದ್ದ ಗ್ರಾಹಕರನ್ನು ಕೋರಮಂಗಲದಿಂದ ಕರೆದುಕೊಂಡು ಬರುತ್ತಿದ್ದೆ. ಸಿಗ್ನಲ್‌ನಲ್ಲಿ ನಿಲ್ಲುತ್ತಿದ್ದಾಗ اچಾನಕ್ ಹೊಗೆ ಕಾಣಿಸಿಕೊಂಡಿತು. ತಕ್ಷಣ ಕಾರನ್ನು ಸೈಡ್‌ಗೆ ಹಾಕಿ ಪರಿಶೀಲಿಸಲು ಹೋದಾಗಲೇ ಬೆಂಕಿ ಹೊತ್ತಿಕೊಂಡಿತು. ನಂತರ ಅದನ್ನು ಆರಿಸಲು ಸಾಧ್ಯವಾಗಲಿಲ್ಲ” ಎಂದು ವಿವರಿಸಿದರು.

ಘಟನೆಯ ಕುರಿತು ಹೈಗ್ರೌಂಡ್ ಪೊಲೀಸರು ಕಾರಿನ ಮಾಲೀಕರನ್ನು ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದ್ದಾರೆ. ಸದ್ಯ ಯಾವುದೇ ಪ್ರಾಣಾಪಾಯ ಸಂಭವಿಸದಿರುವುದು ಸಂತೋಷದ ವಿಚಾರವಾಗಿದೆ.