Asianet Suvarna News Asianet Suvarna News

ಬಿಎಂಟಿಸಿಯಿಂದ ಮಹತ್ವದ ಪ್ರಕಟಣೆ: ಬಸ್ ಪ್ರಯಾಣಿಕರೇ ಹುಷಾರ್...!

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಒಂದು ಮಹತ್ವದ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಪ್ರಯಾಣಿಕರು ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಇಲ್ಲಂದ್ರೆ ದಂಡ ಫಿಕ್ಸ್

bmtc new rules passengers will be fined if not get tickets rbj
Author
Bengaluru, First Published Mar 5, 2021, 10:19 PM IST

ಬೆಂಗಳೂರು, (ಮಾ.05): ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಬಸ್​ಗಳಲ್ಲಿ ಟಿಕೆಟ್ ಪಡೆಯುವುದು ಪ್ರಯಾಣಿಕರ ಹೊಣೆ ಎಂದು ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕಿ ಸಿ.ಶಿಖಾ ಆದೇಶ ಹೊರಡಿಸಿದ್ದಾರೆ. 

ಪರಿಷ್ಕೃತ ಆದೇಶದ ಪ್ರಕಾರ ತಪಾಸಣೆ ವೇಳೆ ಟಿಕೆಟ್ ಇಲ್ಲದ ಪ್ರಯಾಣಿಕರು ಸಿಕ್ಕಿಬಿದ್ದರೆ ಕಂಡಕ್ಟರ್​ಗೆ ಇನ್ನು ಮುಂದೆ ದಂಡ ವಿಧಿಸುವುದಿಲ್ಲ. ಪ್ರಯಾಣಿಕರೇ ದಂಡ ಪಾವತಿಸಬೇಕಾಗುತ್ತದೆ.

ಬಸ್ ಸೀಟ್ ಸಾಮರ್ಥ್ಯಕ್ಕಿಂತಲೂ ಹೆಚ್ಚಿನ ಪ್ರಯಾಣಿಕರು ಇರುವ ಸಂದರ್ಭಗಳಲ್ಲಿ ಮಾತ್ರ ಈ ನಿಯಮ ಅನ್ವಯವಾಗುತ್ತದೆ. ವೋಲ್ವೊ ಬಸ್​ಗಳಿಗೆ ಈ ಹೊಸ ನಿಯಮ ಅನ್ವಯವಾಗುವುದಿಲ್ಲ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಭಾರತದವರಿಂದ ಅಮೆರಿಕ ಕಂಟ್ರೋಲ್, ಶೂನ್ಯ ಸಂಪಾದಿಸಿದ ವಿರಾಟ್: ಮಾ.5ರ ಟಾಪ್ 10 ಸುದ್ದಿ!

ಬಸ್ ಹತ್ತುವ ಪ್ರಯಾಣಿಕರು ಟಿಕೆಟ್ ಕೇಳಿ ಪಡೆಯಬೇಕು. ತಪಾಸಣೆ ವೇಳೆ ಟಿಕೆಟ್ ಇಲ್ಲದ ಪ್ರಯಾಣಿಕರು ಪತ್ತೆಯಾದರೆ ಮೊದಲಿನಂತೆ ಕಂಡಕ್ಟರ್ ವಿರುದ್ಧ ಕರ್ತವ್ಯಲೋಪ ಪ್ರಕರಣ ದಾಖಲಿಸಿ, ವಿಚಾರಣೆ ನಡೆಸುವುದಿಲ್ಲ. ಕಂಡಕ್ಟರ್​ಗೆ ದಂಡವನ್ನೂ ವಿಧಿಸುವುದಿಲ್ಲ. ಟಿಕೆಟ್ ಪಡೆಯುವುದು ಪ್ರಯಾಣಿಕರ ಹೊಣೆಯಾಗಿರುತ್ತದೆ.

ಎನ್​ಐಎನ್​ಸಿ ನಿಯಮ ರದ್ದು ಮಾಡಿರುವುದರಿಂದ ಕಂಡಕ್ಟರ್​ ಇಂಥ ಕಂಟಕಗಳಿಂದ ತಪ್ಪಿಸಿಕೊಂಡಂತೆ ಆಗಿದೆ. ಈ ಹಿಂದೆ ಸಾರಿಗೆ ನೌಕರರು ಮುಷ್ಕರ ನಡೆಸುತ್ತಿದ್ದಾಗ ಎನ್​ಐಎಸಿ ರದ್ದತಿಯ ಬೇಡಿಕೆಯನ್ನೂ ಮುಂದಿಟ್ಟಿದ್ದರು. ಇದೀಗ ನೌಕರರ ಬೇಡಿಕೆಗೆ ಬಿಎಂಟಿಸಿ ಒಪ್ಪಿಕೊಂಡಿದೆ.

ಕೆಲ ಪ್ರಯಾಣಿಕರು ಟಿಕೆಟ್ ಖರೀದಿಸದೆ ಸುಮ್ಮನೆ ಕುಳಿತುಬಿಡುತ್ತಿದ್ದರು. ತಪಾಸಣೆ ವೇಳೆ ಸಿಕ್ಕಿಬಿದ್ದಾಗ, 'ಕಂಡಕ್ಟರ್​ ಈ ಕಡೆಗೆ ಬರಲೇ ಇಲ್ಲ. ಹಣಕೊಟ್ಟರೂ ಟಿಕೆಟ್ ಕೊಟ್ಟಿಲ್ಲ' ಎಂದೆಲ್ಲಾ ದೂರುತ್ತಿದ್ದರು. ಇಂಥ ಸಂದರ್ಭಗಳಲ್ಲಿ ತಪಾಸಣೆಗೆ ಬಂದ ಅಧಿಕಾರಿಗಳು ಪ್ರಯಾಣಿಕರಿಗೆ ದಂಡ ವಿಧಿಸಿ, ಕಂಡಕ್ಟರ್​ಗಳನ್ನು ಹೊಣೆ ಮಾಡಿ ವಿಚಾರಣೆಗೆ ಸೂಚಿಸುತ್ತಿದ್ದರು.

Follow Us:
Download App:
  • android
  • ios