Asianet Suvarna News Asianet Suvarna News

ಡಿಕೆ ಸಹೋ​ದ​ರ​ರ ವಿರುದ್ಧ ಗಂಭೀರ ಆರೋಪ

ಡಿಕೆ ಶಿವಕುಮಾರ್ ಹಾಗೂ ಡಿಕೆ ಸುರೇಶ್ ವಿರುದ್ಧ ಗಂಭೀರ ಆರೋಪ ಮಾಡಲಾಗಿದೆ. ಪ್ರಾಮಾಣಿಕರ ಮೇಲೆ ಗೂಂಡಾ ವರ್ತನೆ ಮಾಡುತ್ತಿದ್ದಾರೆ ಎನ್ನಲಾಗಿದೆ. 

BJP Leader Ashwath Narayan Gowda Slams DK Brothers
Author
Bengaluru, First Published Dec 3, 2019, 11:38 AM IST

ರಾಮ​ನ​ಗರ [ಡಿ.03]:  ತಮ್ಮ ಅಕ್ರಮ ದಂಧೆ​ಗ​ಳಿಗೆ ಸಹ​ಕಾರ ನೀಡು​ತ್ತಿ​ಲ್ಲ​ವೆಂಬ ಕಾರ​ಣಕ್ಕೆ ಜಿಲ್ಲಾ ಪೊಲೀಸ್‌ ವರಿ​ಷ್ಠಾ​ಧಿ​ಕಾ​ರಿ​ ಸೇರಿ​ದಂತೆ ಜಿಲ್ಲೆಯ ಪ್ರಾಮಾ​ಣಿಕ ಅಧಿ​ಕಾ​ರಿ​ಗಳೊಂದಿಗೆ ಡಿಕೆ ಸಹೋ​ದ​ರರು ಗೂಂಡಾ​ಗ​ಳಂತೆ ವರ್ತಿ​ಸು​ತ್ತಿ​ದ್ದಾರೆ ಎಂದು ಬಿಜೆಪಿ ರಾಜ್ಯ ವಕ್ತಾರ ಅಶ್ವತ್‌ ನಾರಾ​ಯ​ಣ​ಗೌಡ ವಾಗ್ದಾಳಿ ನಡೆ​ಸಿ​ದರು.

ನಗ​ರದ ಖಾಸಗಿ ಹೋಟೆಲ್‌ನಲ್ಲಿ ಸೋಮ​ವಾರ ಸುದ್ದಿ​ಗೋ​ಷ್ಠಿ​ಯಲ್ಲಿ ಮಾತ​ನಾ​ಡಿದ ಅವರು, ಸರ್ಕಾರಿ ಅಧಿ​ಕಾ​ರಿ​ಗಳು ಕಾನೂನು ವ್ಯಾಪ್ತಿ​ಯಲ್ಲಿ ಕೆಲಸ ಮಾಡು​ತ್ತಿ​ದ್ದಾರೆ. ತಮ್ಮ ಹಿಡಿ​ತಕ್ಕೆ ಸಿಗು​ತ್ತಿ​ಲ್ಲ​ವೆಂಬ ಕಾರ​ಣ​ಕ್ಕಾಗಿ ಪ್ರಾಮಾ​ಣಿಕ ಅಧಿ​ಕಾ​ರಿ​ಗ​ಳನ್ನು ಗುರಿ​ಯಾ​ಗಿ​ಸಿ​ಕೊಂಡು ಡಿಕೆ ಸಹೋ​ದ​ರರು ಬ್ಲಾಕ್‌ಮೇಲ್‌ ಮಾಡಿ ಹೆದ​ರಿ​ಸುವ ಕೆಲ​ಸ​ ಮಾಡು​ತ್ತಿ​ದ್ದಾರೆ ಎಂದು ಟೀಕಿ​ಸಿ​ದರು.

ಸರ್ಕಾರಿ ಅಧಿ​ಕಾ​ರಿ​ಗಳು ಚುನಾ​ಯಿತ ಪ್ರತಿ​ನಿ​ಧಿ​ಗಳ ಕೈಗೊಂಬೆ​ಯಾಗಿ ಕೆಲಸ ಮಾಡಲು ಬರು​ವು​ದಿಲ್ಲ. ಕಾನೂನು ವ್ಯಾಪ್ತಿ​ಯಲ್ಲಿ ತಾವೇನು ಕೆಲಸ ಮಾಡ​ಬೇಕೊ ಅದನ್ನು ಮಾಡು​ತ್ತಾರೆ. ಇದು ತಿಳಿ​ದಿ​ದ್ದರೂ ಸಹ ಮಾಜಿ ಸಚಿವ ಡಿ.ಕೆ. ​ಶಿ​ವ​ಕು​ಮಾರ್‌ ಮತ್ತು ಸಂಸದ ಡಿ.ಕೆ.​ ಸು​ರೇಶ್‌ ಅಧಿ​ಕಾ​ರಿ​ಗ​ಳೊಂದಿಗೆ ಬಿಹಾರಿ ರಾಜ​ಕಾ​ರ​ಣಿ​ಗಳಂತೆ ನಡೆ​ದು​ಕೊ​ಳ್ಳು​ತ್ತಿ​ದ್ದಾರೆ ಎಂದರು.

ಕಾಲಹರಣ

ಮಾಜಿ ಸಚಿವ ಡಿ.ಕೆ. ​ಶಿ​ವ​ಕು​ಮಾರ್‌ ಇಡಿ ಮತ್ತು ಐಟಿ ಪ್ರಕ​ರ​ಣ​ದಲ್ಲಿ ಸಿಲುಕಿ ತಿಹಾರ್‌ ಜೈಲು ಸೇರಿ​ದ್ದರು. ಡಿ.ಕೆ.​ ಸು​ರೇಶ್‌ ಸಂಸ​ದ​ರಾಗಿ ಆಯ್ಕೆ​ಯಾದ ನಂತರ ಆರು ತಿಂಗ​ಳಿಂದ ಸಹೋ​ದ​ರನ ಜೈಲು ಬೇಲು

ಇದ​ರ​ಲ್ಲಿಯೇ ಓಡಾ​ಡಿ​ಕೊಂಡು ಕಾಲಹರಣ ಮಾಡಿ​ದರು. ಜೈಲಿ​ನಿಂದ ಹೊರ ಬಂದ ನಂತರ ಡಿಕೆ ಸಹೋ​ದ​ರರು ರಾಮ​ನ​ಗರ ಜಿಲ್ಲೆ​ಯನ್ನು ರಿಪ​ಬ್ಲಿಕ್‌ ಆಫ್‌ ಡಿಕೆ​ಎಸ್‌ ಮಾಡಲು ಹೊರ​ಟಿ​ದ್ದಾರೆ ಎಂದು ಟೀಕೆ ಮಾಡಿ​ದರು.

ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜ​ನೆ​ಯಲ್ಲಿ ಜಿಲ್ಲೆಯ ಒಂದೂ​ವರೆ ಲಕ್ಷ ರೈತರು ವಂಚಿ​ತ​ರಾ​ಗಿ​ದ್ದಾರೆ. ಅಷ್ಟುಪ್ರಮಾ​ಣದ ರೈತರು ವಂಚಿ​ತ​ರಾ​ಗಲು ಕಾರ​ಣ ಏನೆಂಬು​ದರ ಮಾಹಿತಿಯನ್ನು ಸಂಸ​ದರು ಸಂಗ್ರ​ಹಿ​ಸಿ​ಕೊ​ಳ್ಳ​ಬೇ​ಕಿತ್ತು. ಆದರೆ, ಅಧಿ​ಕಾ​ರಿ​ಗಳು ತಮ್ಮ ಹಿಡಿ​ತಕ್ಕೆ ಬರು​ತ್ತಿ​ಲ್ಲ​ವೆಂದು ದಿಶಾ ಸಭೆ​ಯಲ್ಲಿ ಸಂಸ​ದರು ಮಾನ​ಸಿಕ ಸ್ಥಿಮಿ​ತತೆ ಕಳೆ​ದು​ಕೊಂಡು ಅಧಿ​ಕಾ​ರಿ​ಗಳ ವಿರುದ್ಧ ಅರೆ ಹುಚ್ಚರ ರೀತಿ​ಯಲ್ಲಿ ಕೂಗಾ​ಡಿ​ದ್ದಾರೆ ಎಂದರು.

ಎಸ್ಪಿ ಟಾರ್ಗೆಟ್‌:

ಜಿಲ್ಲಾ ಎಸ್ಪಿ ಅನೂಪ್‌ ದಕ್ಷ ಅಧಿ​ಕಾ​ರಿ​ಯೆಂದು ಹೆಸರು ಪಡೆ​ದಿ​ದ್ದಾರೆ. ಮಾಜಿ ಸಚಿವ ಡಿ.ಕೆ. ​ಶಿ​ವ​ಕು​ಮಾರ್‌ ಕೆಲ ದಿನ​ಗಳ ಹಿಂದೆ​ಯಷ್ಟೇ ಜಿಲ್ಲಾ ಎಸ್ಪಿ ಅವ​ರಿಗೆ ಜಿಲ್ಲೆ ಬಗ್ಗೆ ಏನು ಗೊತ್ತಿಲ್ಲ. ಹೊಸ​ದಾಗಿ ಬಂದಿ​ದ್ದಾರೆ. ಅವ​ರನ್ನು ಹೇಗೆ ನಿಯಂತ್ರ​ಣಕ್ಕೆ ತೆಗೆ​ದು​ಕೊ​ಳ್ಳ​ಬೇಕು ಗೊತ್ತಿದೆ ಎಂದಿ​ದ್ದರು. ಇದೀಗ ಸಂಸ​ದರು ಎಸ್ಪಿ ಅವ​ರನ್ನು ಟಾರ್ಗೆಟ್‌ ಮಾಡುತ್ತಿ​ದ್ದಾರೆ ಎಂದು ತಿಳಿ​ಸಿ​ದ​ರು.

ಕನ​ಕ​ಪು​ರ​ದಲ್ಲಿ ಅರಣ್ಯ ಪ್ರದೇಶ ಒತ್ತು​ವ​ರಿ ಪ್ರಕ​ರ​ಣ​ದಲ್ಲಿ 64 ಅಧಿ​ಕಾ​ರಿ​ಗಳು, ಮಾಜಿ ಸಚಿವ ಡಿ.ಕೆ. ​ಶಿ​ವ​ಕು​ಮಾರ್‌, ಅ​ವರ ಪತ್ನಿ ಉಷಾ ಶಿವ​ಕು​ಮಾರ್‌, ಸಂಸದ ಡಿ.ಕೆ. ​ಸು​ರೇಶ್‌ ಹೆಸ​ರು ಅಪ​ರಾ​ಧಿ​ಗಳ ಪಟ್ಟಿ​ಯ​ಲ್ಲಿದೆ. ಅಧಿ​ಕಾ​ರಿ​ಗ​ಳನ್ನು ಹೇಗೆಲ್ಲ ಬಳ​ಸಿ​ಕೊಳ್ಳುತ್ತಿದ್ದಾರೆ ಎಂಬು​ದಕ್ಕೆ ಅರಣ್ಯ ಲೂಟಿ ಪ್ರಕ​ರ​ಣ​ಕ್ಕಿಂತಲೂ ಮತ್ತೊಂದು ಉದಾ​ಹ​ರಣೆ ಬೇಕಿಲ್ಲ ಎಂದು ಹೇಳಿ​ದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮುಖ್ಯ​ಮಂತ್ರಿ ಯಡಿ​ಯೂ​ರಪ್ಪ ಮತ್ತು ಮಾಜಿ ಸಚಿವ ಡಿ.ಕೆ. ​ಶಿ​ವ​ಕು​ಮಾರ್‌ ಸದ​ನ​ದಲ್ಲಿ ಚೆನ್ನಾ​ಗಿ​ರ​ಬ​ಹುದು. ಭ್ರಷ್ಟಾ​ಚಾ​ರದ ವಿಚಾ​ರ​ದಲ್ಲಿ ಡಿಕೆಶಿ ಬಗ್ಗೆ ಸಾಫ್ಟ್‌ ಕಾರ್ನರ್‌ ತೋರಿ​ಸಲು ಬರು​ವು​ದಿಲ್ಲ. ಹೈಕೋರ್ಟ್‌ ಆದೇ​ಶ​ದಂತೆ 64 ಅಧಿ​ಕಾ​ರಿ​ಗಳು ಸೇರಿ​ದಂತೆ ತಪ್ಪಿ​ತ​ಸ್ಥರ ವಿರುದ್ಧ ಸರ್ಕಾರ ಕ್ರಮ ಕೈಗೊ​ಳ್ಳಲಿದೆ ಎಂದು ಅಶ್ವತ್‌್ಥ ನಾರಾ​ಯ​ಣ​ಗೌಡ ಪ್ರಶ್ನೆ​ಯೊಂದಕ್ಕೆ ಉತ್ತ​ರಿ​ಸಿ​ದರು.

ಹಾಗೂ ಲೋಕ​ಸಭೆ ಸ್ಪೀಕರ್‌ಗೆ ದೂರು:

ಅಕ್ರಮ ದಂಧೆ​ಗ​ಳಿಗೆ ಪ್ರಾಮಾ​ಣಿಕ ಅಧಿ​ಕಾ​ರಿ​ಗಳು ಸಹ​ಕಾರ ನೀಡು​ತ್ತಿ​ವೆಂದು ಡಿಕೆ ಸಹೋ​ದ​ರರು ಬ್ಲಾಕ್‌ ಮೇಲೆ ಮಾಡಿ ತಮ್ಮ ಹಿಡಿ​ತಕ್ಕೆ ಇಟ್ಟು​ಕೊ​ಳ್ಳು​ವು​ದನ್ನು ಬಿಜೆಪಿ ಖಂಡಿ​ಸು​ತ್ತದೆ. ಈ ಕೂಡಲೇ ಅಧಿ​ಕಾ​ರಿ​ಗ​ಳಲ್ಲಿ ಕ್ಷಮೆ ಕೇಳ​ಬೇಕು. ಅಧಿ​ಕಾ​ರಿ​ಗ​ಳಿಗೆ ಧಮಕಿ ಹಾಕಿ​ರುವ ವಿಚಾ​ರ​ವನ್ನು ರಾಜ್ಯ ಸರ್ಕಾರ ಹಾಗೂ ಲೋಕ​ಸಭೆ ಸ್ಪೀಕರ್‌ಗೆ ದೂರು ಸಲ್ಲಿ​ಸು​ತ್ತೇವೆ ಎಂದರು.

ಡಿಕೆ ಸಹೋ​ದ​ರರ ಅಕ್ರ​ಮ ದಂಧೆ​ಗಳ ಹಿಂದೆ ತಹ​ಸೀ​ಲ್ದಾರ್‌ ಆನಂದಯ್ಯ ಕಾಣದ ಕೈಯಾಗಿ ಕೆಲಸ ಮಾಡು​ತ್ತಿ​ದ್ದಾರೆ. ಶಿರ​ಸ್ತೆ​ದಾ​ರ​ರಾ​ಗಿದ್ದ ಅವ​ರನ್ನು ತಹ​ಸೀ​ಲ್ದಾರ್‌ ಹುದ್ದೆ​ಯಲ್ಲಿ ಕೂರಿ​ಸಿ​ದ್ದಾರೆ. ರೈತನ ಜಮೀ​ನನ್ನು ಅಕ್ರಮವಾಗಿ ಖಾತೆ ಮಾಡಿ​ದ್ದಕ್ಕೆ ಆನಂದಯ್ಯ ಅವ​ರನ್ನು ಹೈಕೋರ್ಟ್‌ ಅಮಾ​ನತಿಗೆ ಆದೇ​ಶಿ​ಸಿತ್ತು. ಆದರೆ, ಕೆಇ​ಟಿಯಿಂದ ತಡೆ​ಯಾಜ್ಞೆ ತಂದ ಅಂತಹ ಅಧಿ​ಕಾ​ರಿ​ಯನ್ನು ಉಳಿ​ಸಿ​ಕೊಂಡಿ​ದ್ದಾರೆ.

ಶಿಸ್ತು ಕ್ರಮ ಜರು​ಗಿಸಿ:  ಉಪ​ವಿ​ಭಾ​ಗಾ​ಧಿ​ಕಾರಿ ದಾಕ್ಷಾಯಿಣಿ, ನಗ​ರ​ಸಭೆ ಆಯುಕ್ತೆ ಶುಭಾ ಸೇರಿ​ದಂತೆ ಕೆಲ ಅಧಿ​ಕಾ​ರಿ​ಗಳು ಅಕ್ರಮ ಖಾತೆ ಮಾಡಿ​ರುವ ದೂರು​ಗ​ಳಿ​ದ್ದರೆ, ಅವರ ವಿರುದ್ಧ ಶಿಸ್ತು ಕ್ರಮ ಜರು​ಗಿ​ಸಲು ರಾಜ್ಯ​ಸ​ರ್ಕಾ​ರಕ್ಕೆ ಪತ್ರ ಬರೆ​ದು ಅಮಾ​ನ​ತಿಗೆ ಆದೇ​ಶಿ​ಸು​ವಂತೆ ಒತ್ತಡ ಹೇರು​ತ್ತಿ​ಲ್ಲ​ವೇಕೆ ಎಂದು ಡಿಕೆ ಸಹೋ​ದ​ರ​ರನ್ನು ಪ್ರಶ್ನಿ​ಸಿ​ದರು.

ಸರ್ಕಾರಿ ಅಧಿ​ಕಾ​ರಿ​ಗ​ಳಿಗೆ ಧಮಕಿ ಹಾಕುವ ಕಾಲ ಹೊರಟು ಹೋಗಿದೆ. ಜಿಲ್ಲೆ​ಯಲ್ಲಿ ಪ್ರಾಮಾ​ಣಿ​ಕ​ವಾಗಿ ಕೆಲಸ ಮಾಡುವುದಕ್ಕೆ ಅವ​ಕಾಶ ಮಾಡಿ​ಕೊ​ಟ್ಟರೆ ನಾವು ಅದಕ್ಕೆ ಸಹ​ಕಾರ ನೀಡು​ತ್ತೇವೆ. ಅದನ್ನು ಬಿಟ್ಟು ಗೂಂಡಾ ರೀತಿ​ಯಲ್ಲಿ ವರ್ತನೆ ಮಾಡು​ವು​ದನ್ನು ಯಾರು ಸಹಿ​ಸು​ವು​ದಿಲ್ಲ ಎಂದು ಅಶ್ವತ್‌  ನಾರಾ​ಯಣಗೌಡ ಎಚ್ಚ​ರಿಕೆ ನೀಡಿ​ದ​ರು.

ಸುದ್ದಿ​ಗೋ​ಷ್ಠಿ​ಯಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಪ್ರವೀಣ್‌ ಗೌಡ, ಮುಖಂಡ​ರಾದ ಪದ್ಮ​ನಾಭ, ರುದ್ರ​ದೇ​ವರು, ಸುರೇಶ್‌, ಭರತ್‌ ರಾಜ್‌, ಜಯಣ್ಣ, ಮಂಜು, ನಗ​ರ​ಸಭೆ ಮಾಜಿ ಅಧ್ಯಕ್ಷ ರವಿ​ಕು​ಮಾರ್‌, ಮಾಜಿ ಸದಸ್ಯ ನಾಗೇಶ್‌ ಇದ್ದ​ರು.

Follow Us:
Download App:
  • android
  • ios