Asianet Suvarna News Asianet Suvarna News

ಬಿಜೆಪಿ ತೆಕ್ಕೆಗೆ ದಕ್ಕಿದ ಅಧಿಕಾರ : ಜೆಡಿಎಸ್‌ಗೆ ಮುಖಭಂಗ

ಬಿಜೆಪಿ ತೆಕ್ಕೆಗೆ ಅಧಿಕಾರ ಒಲಿದಿದೆ. ಜೆಡಿಎಸ್‌ಗೆ ಮುಖಭಂಗವಾಗಿದೆ. ಬಹುಮತವಿದ್ದರೂ ಜೆಡಿಎಸ್‌ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನವನ್ನು ದಕ್ಕಿಸಿಕೊಳ್ಳಲಾಗಲಿಲ್ಲ. ಅಧ್ಯಕ್ಷ-ಉಪಾಧ್ಯಕ್ಷ ಮೀಸಲಾತಿ ಪ್ರಕಾರ ಅಧ್ಯಕ್ಷ, ಉಪಾಧ್ಯಕ್ಷ ಪಟ್ಟಗಳೆರಡು ಬಿಜೆಪಿ ಪಾಲಾಗಿವೆ.

BJP Bags Hassan City municipal council snr
Author
Bengaluru, First Published Apr 24, 2021, 2:57 PM IST

ಹಾಸನ (ಏ.24):  ಬಹು ನಿರೀಕ್ಷೆಯ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷರ ನೇಮಕಾತಿ ಕೊನೆಗೂ ನೆರವೇರಿದೆ. ಬಹುಮತವಿದ್ದರೂ ಜೆಡಿಎಸ್‌ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನವನ್ನು ದಕ್ಕಿಸಿಕೊಳ್ಳಲಾಗಲಿಲ್ಲ. ಅಧ್ಯಕ್ಷ-ಉಪಾಧ್ಯಕ್ಷ ಮೀಸಲಾತಿ ಪ್ರಕಾರ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿಗರಾದ ಮೋಹನ್‌ ಹಾಗೂ ಉಪಾಧ್ಯಕ್ಷರಾಗಿ ಮಂಗಳಾ ಶುಕ್ರವಾರ ಅಧಿಕಾರ ಸ್ವೀಕರಿಸಿದರು.

ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಮಾಡಲು ಚುನಾವಣಾಧಿಕಾರಿ ಹಾಗೂ ಹಾಸನ ಉಪವಿಭಾಗಾಧಿ​ಕಾರಿ ಜಗದೀಶ್‌ ಘೋಷಣೆ ಮಾಡಿದರು. ನ್ಯಾಯಾಲಯದ ಆದೇಶದಂತೆ ಫಲಿತಾಂಶ ಘೋಷಣೆ ಮಾಡಿದ ಚುನಾವಣಾ ಅ​ಧಿಕಾರಿಗಳು 2020 ಅ.29ರಂದು ಚುನಾವಣೆ ನಿಗದಿ ಮಾಡಿದ್ದರು. ಕೋರ್ಟ್‌ ಆದೇಶದಂತೆ ಫಲಿತಾಂಶ ತಡೆ ಹಿಡಿಯಲಾಗಿತ್ತು. ಮೊನ್ನೆಯಷ್ಟೇ ಮೀಸಲು ಪ್ರಶ್ನಿಸಿ ಜೆಡಿಎಸ್‌ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ಪೀಠ ತಿರಸ್ಕರಿಸಿದ ಹಿನ್ನೆಲೆಯಲ್ಲಿ ಹೊರಬಿದ್ದ ಫಲಿತಾಂಶದ ಪ್ರಕಾರ ಅಧ್ಯಕ್ಷ- ಉಪಾಧ್ಯಕ್ಷ ಎರಡೂ ಬಿಜೆಪಿ ಪಕ್ಷಕ್ಕೆ ದಕ್ಕಿದಂತಾಗಿದೆ.

ಕಾಂಗ್ರೆಸ್‌ ಮುಖಂಡಗೆ ಸೋಲಿನ ಭೀತಿ : ಜೆಡಿಎಸ್‌ ನಾಯಕರಿಂದ ತಿರುಗೇಟು .

ಜೆಡಿಎಸ್‌ಗೆ ಮುಖಭಂಗ:  ಜೆಡಿಎಸ್ ಬಹುಮತವಿದ್ದರೂ ಉಪಾಧ್ಯಕ್ಷ ಸ್ಥಾನಕ್ಕೆ ಸರಿಯಾದ ಸಮಯಕ್ಕೆ ನಾಮಪತ್ರ ಸಲ್ಲಿಸದೆ ಪ್ರತಿಭಟನೆಯಲ್ಲಿ ತೊಡಗಿತ್ತು. ಹಾಗಾಗಿ ಉಪಾಧ್ಯಕ್ಷ ಆ ಸ್ಥಾನವೂ ಬಿಜೆಪಿ ಪಾಲಾಗುವ ಮೂಲಕ ಹಾಸನದ ನಗರಸಭೆ ಐತಿಹಾಸಿಕ ಎಂಬಂತೆ ಬಿಜೆಪಿ ಪಾಲಾಗಿದೆ. ಪರಿಶಿಷ್ಟಪಂಗಡಕ್ಕೆ ಅಧ್ಯಕ್ಷ ಸ್ಥಾನ ಮೀಸಲಾದ್ದರಿಂದ ಬಹುಮತವಿಲ್ಲದಿದ್ದರೂ ಆ ಮೀಸಲಿನಿಂದ ಗೆದ್ದ ಏಕೈಕ ಸದಸ್ಯ ಮೋಹನ್‌ ಅಧ್ಯಕ್ಷರಾಗಿದ್ದಾರೆ. ಕೊರೋನಾ ಎರಡನೆ ಅಲೆ ಇರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಬಿಜೆಪಿಯ ಯಾವ ನಾಯಕರು ಇತ್ತ ಕಡೆ ಸುಳಿಯಲಿಲ್ಲ.

Follow Us:
Download App:
  • android
  • ios