ಅಕ್ರಮವಾಗಿ ಹದ್ದುಗಳನ್ನು ತರಬೇತಿ ನೀಡುವ ದಂಧೆ ಮೇಲೆ ಪೊಲೀಸರು ಹದ್ದಿನ ಕಣ್ಣು ಇಟ್ಟಿದ್ದಾರೆ. ಅಕ್ರಮ ದಂಧೆಕೋರರ ಬೇಟೆ ಶುರು ಮಾಡಿದ್ದಾರೆ. 

ಬೆಂಗಳೂರು [ಫೆ.28]:  ನಗರದಲ್ಲಿ ಅಕ್ರಮವಾಗಿ ಹದ್ದು ತರಬೇತಿ ದಂಧೆ ವಿರುದ್ಧ ಪೊಲೀಸ್‌ ಆಯುಕ್ತ ಎಸ್‌.ಭಾಸ್ಕರ್‌ ರಾವ್‌ ಬೇಟೆ ಶುರು ಮಾಡಿದ್ದು, ಇದಕ್ಕೆ ಸಾರ್ವಜನಿಕರ ಸಹಕಾರ ಕೇಳಿದ್ದಾರೆ.

Add Asianetnews Kannada as a Preferred SourcegooglePreferred

ನಗರದಲ್ಲಿರುವರ ಹದ್ದುಗಳ ತರಬೇತಿದಾರರ ಕುರಿತು ಮಾಹಿತಿ ನೀಡುವಂತೆ ಗುರುವಾರ ಆಯುಕ್ತರು ಟ್ವೀಟ್‌ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಹುಟ್ಟು ಹಾಕಿದೆ.

ಎಸ್ಕೇಪ್ ಆಗಿ ಬೆಂಗಳೂರಿಗೆ ನಾನೇ ನಂಬರ್ 1 ಎನ್ನುತ್ತಿದ್ದ ರೌಡಿ ಸ್ಲಂ ಭರತ್ ಫಿನಿಶ್..

ಈ ಟ್ವೀಟ್‌ಗೆ ನೂರಾರು ಜನರು ಪ್ರತಿಕ್ರಿಯಿಸಿದ್ದಾರೆ. ಹದ್ದುಗಳ ಮೂಲಕ ನಗರ ಗಸ್ತು ವ್ಯವಸ್ಥೆ ರೂಪಿಸುವ ಯೋಜನೆ ಎಂದೆಲ್ಲ ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಐಎಫ್‌ಎಸ್‌ ಅಧಿಕಾರಿಯೊಬ್ಬರು, ಹದ್ದುಗಳ ತರಬೇತಿಗೆ ಉತ್ತೇಜಿಸುವುದು ಅರಣ್ಯ ಸಂರಕ್ಷಣಾ ಹಾಗೂ ಕಾಡು ಪ್ರಾಣಿಗಳ ರಕ್ಷಣಾ ಕಾಯ್ದೆ ಉಲ್ಲಂಘನೆ ಎಂದು ಹೇಳಿದ್ದಾರೆ.

ಈ ಟ್ವೀಟ್‌ಗೆ ಬಗ್ಗೆ ‘ಕನ್ನಡಪ್ರಭ’ ಜತೆ ಮಾತನಾಡಿದ ಆಯುಕ್ತರು, ಹದ್ದುಗಳಿಗೆ ತರಬೇತಿ ನೀಡುವುದು ಕಾನೂನು ಬಾಹಿರಕೃತ್ಯವಾಗಿದೆ. ರಾಮನಗರ ಸೇರಿದಂತೆ ಕೆಲವೆಡೆ ಈ ದಂಧೆ ನಡೆದಿರುವ ಕುರಿತು ಮಾಹಿತಿ ಇದೆ. ಹೀಗಾಗಿ ನಗರದಲ್ಲೂ ಏನಾದರೂ ಹದ್ದುಗಳ ತರಬೇತಿ ನಡೆದಿಯೇ ಎಂಬ ಬಗ್ಗೆ ಪರಿಶೀಲನೆಗೆ ನಾಗರಿಕರ ನೆರವು ಕೋರಿದ್ದೇನೆ ಎಂದು ತಿಳಿಸಿದರು.