ಅಮೂಲ್ಯ ಮೇಲಷ್ಟೇ ಅಲ್ಲ, ಆಯೋಜಕರ ವಿರುದ್ಧವೂ ಕ್ರಮ: ಭಾಸ್ಕರ್ ರಾವ್
ಪ್ರತಿಭಟನೆಗೆ ಮತ್ತಷ್ಟು ಕಠಿಣ ನಿಯಮ: ಪೊಲೀಸ್ ಆಯುಕ್ತ ವೇದಿಕೆ ಮೇಲೆ ಹಾಜರಿರುವವರ ಪೂರ್ವಾಪರ ಮಾಹಿತಿ ಭಾಷಣ ಮಾಡಲು ಬಿಟ್ಟು ಬಳಿಕ ಮೈಕ್ ಕಸಿದರೆ ಒಪ್ಪಲ್ಲ| ವಾಕ್ ಸ್ವಾತಂತ್ರ್ಯವನ್ನು ನಾವು ಗೌರವಿಸುತ್ತೇವೆ|
ಬೆಂಗಳೂರು(ಫೆ.22): ಪ್ರತಿಭಟನೆ ಹಾಗೂ ಕಾರ್ಯಕ್ರಮಗಳಿಗೆ ಅನುಮತಿ ನೀಡುವಾಗ ಈವರೆಗೂ ವಿಧಿಸಲಾಗುತ್ತಿದ್ದ ಷರತ್ತುಗಳನ್ನು ಮತ್ತಷ್ಟು ಹೆಚ್ಚಿಸಲಾಗುವುದು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೇಳಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರ್ಯಕ್ರಮವೊಂದರಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗಿದ ಅಮೂಲ್ಯ ಲಿಯೋನ ಮೇಲಷ್ಟೇ ಎಫ್ಐಆರ್ ದಾಖಲಾಗಿಲ್ಲ. ಆಯೋಜಕರ ವಿರುದ್ಧವೂ ಕ್ರಮ ಜರುಗಿಸಲಾ ಗುವುದು. ಆಕೆಗೆ ಯಾರು ಕುಮ್ಮಕ್ಕು ನೀಡಿದ್ದಾರೆ, ಆಕೆ ಹಿಂದೆ ಯಾರಿದ್ದಾರೆ ಎಂಬ ಅಂಶಗಳನ್ನು ತನಿಖೆಯ ಮೂಲಕ ಪತ್ತೆ ಹಚ್ಚುತ್ತೇವೆ ಎಂದಿದ್ದಾರೆ.
ಅಮೂಲ್ಯ ವಿರುದ್ಧ ಪ್ರತಿಭಟನೆಯಲ್ಲಿ ಪಾಕ್ ಜಿಂದಾಬಾದ್ ಎಂದ ಯುವತಿ
ಇಂತಹ ಕಾರ್ಯಕ್ರಮಗಳಿಗೆ ಅನುಮತಿ ನೀಡುವ ಮುನ್ನ ಇನ್ನು ಮುಂದೆ ಹೆಚ್ಚು ಷರತ್ತುಗಳನ್ನು ವಿಧಿಸಲಾಗುವುದು. ವೇದಿಕೆ ಮೇಲೆ ಹಾಜರಿರುವವರ ಪೂರ್ವಾಪರ ಮಾಹಿತಿ ಕಲೆ ಹಾಕಲಾಗುವುದು ಎಂದು ತಿಳಿಸಿದರು.
ಬೆಂಗಳೂರು ಪೊಲೀಸರು ಈವರೆಗೂ ಆಯೋಜಕರ ಜತೆ ಅತ್ಯಂತ ತಾಳ್ಮೆಯಿಂದ ಸಹಕರಿಸಿದ್ದಾರೆ. ಕಾರ್ಯಕ್ರಮ ಆಯೋಜಕರು ಜವಾಬ್ದಾರಿಯುತವಾಗಿ ವರ್ತಿಸಬೇಕು. ಯಾರನ್ನು ಕಾರ್ಯಕ್ರಮಕ್ಕೆ ಕರೆಯುತ್ತೇವೆ. ಏನೆಲ್ಲಾ ಮಾತನಾಡಬಹುದು ಎಂಬ ಮುನ್ನೆಚ್ಚರಿಕೆ ವಹಿಸಬೇಕು. ಮೊದಲಿಗೆ ಮಾತನಾಡಲು ಅವಕಾಶ ಕೊಟ್ಟು ದೇಶದ್ರೋಹಿ ಹೇಳಿಕೆ ನೀಡಿದ ಬಳಿಕ ಮೈಕ್ ಪಡೆಯುವುದಲ್ಲ. ಮೊದಲೇ ಮುಂಜಾಗ್ರತೆ ಕ್ರಮ ವಹಿಸಬೇಕು ಎಂದರು.
ಬೆಂಗಳೂರಿನಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ ಅಮೂಲ್ಯ
ವೇದಿಕೆಯಲ್ಲಿ ನಿಂತು ನೀವು ಅಷ್ಟು ಸಂಖ್ಯೆಯಲ್ಲಿದ್ದೀರಿ, ನಾವು ಇಷ್ಟು ಸಂಖ್ಯೆಯಲ್ಲಿ ಇದ್ದೇವೆ ಎಂದು ಪ್ರಚೋದನಕಾರಿಯಾಗಿ ಮಾತನಾಡಿ ಗಲಾಟೆ ಮಾಡಿಸುವ ಪ್ರಯತ್ನ ನಡೆಯುತ್ತಿದೆ. ಬೇಜವಾಬ್ದಾರಿಯಿಂದ ಮಾತ ನಾಡುವುದರಿಂದ ಅಶಾಂತಿಯ ವಾತಾವರಣ ನಿರ್ಮಾಣವಾಗುತ್ತದೆ. ಇದನ್ನು ಕಂಡು ಕಣ್ಣು ಮುಚ್ಚಿ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದರು. ವಾಕ್ ಸ್ವಾತಂತ್ರ್ಯವನ್ನು ನಾವು ಗೌರವಿಸುತ್ತೇವೆ. ಹಾಗೆಂದು ಶಾಂತಿ ಭಂಗ ಮಾಡುವುದನ್ನು ಸಹಿಸುವುದಿಲ್ಲ. ಶಾಂತಿ ಭಂಗಕ್ಕೆ ಪ್ರಯತ್ನಿಸುವವರ ಸಂಖ್ಯೆ ಸಣ್ಣ ಪ್ರಮಾಣದಲ್ಲೇ ಇದ್ದರೂ ಅಪಾಯಕಾರಿ ಎಂದು ತಿಳಿಸಿದ್ದಾರೆ.
#NewsIn100Seconds ಈ ಕ್ಷಣದ ಪ್ರಮುಖ ಹೆಡ್ಲೈನ್ಸ್
"