Asianet Suvarna News Asianet Suvarna News

ಭಿನ್ನಮತ ಸ್ಫೋಟ: ತುರ್ತು ಸಭೆ ಕರೆದ ಜೆಡಿಎಸ್

ಬೆಂಗಳೂರು ನಗರ ಜೆಡಿಎಸ್ ಘಟಕದಲ್ಲಿ ಭಿನ್ನಮತ ಸ್ಫೋಟಗೊಂಡಿದೆ.  ವಿಧಾನ ಪರಿಷತ್ ಗೆ ರಮೇಶ್ ಗೌಡ ಅವರನ್ನು ಆಯ್ಕೆ ಮಾಡಿದ್ದರಿಂದ  ಅಸಮಾಧಾನ ವ್ಯಕ್ತವಾಗಿದೆ.

Bengaluru City JDS Leaders Unhappy over MLC Candidate
Author
Bengaluru, First Published Sep 25, 2018, 9:37 PM IST

ಬೆಂಗಳೂರು, [ಸೆ. 25]: ಬೆಂಗಳೂರು ನಗರ ಜೆಡಿಎಸ್ ಘಟಕದಲ್ಲಿ ಭಿನ್ನಮತ ಸ್ಫೋಟಗೊಂಡಿದೆ.  ವಿಧಾನ ಪರಿಷತ್ ಗೆ ರಮೇಶ್ ಗೌಡ ಅವರನ್ನು ಆಯ್ಕೆ ಮಾಡಿದ್ದರಿಂದ  ಅಸಮಾಧಾನ ವ್ಯಕ್ತವಾಗಿದೆ.

ವಿಧಾನ ಪರಿಷತ್ ಗೆ ರಮೇಶ್ ಗೌಡ ಅವರನ್ನು  ಆಯ್ಕೆ ಮಾಡಿರುವ ಜೆಡಿಎಸ್ ವರಿಷ್ಟರ ವಿರುದ್ಧ ಬೆಂಗಳೂರು ನಗರ ಜೆಡಿಎಸ್ ಘಟಕದ ಪದಾಧಿಕಾರಿಗಳು ಗರಂ ಆಗಿದ್ದಾರೆ.

ವರಿಷ್ಟರ ತೀರ್ಮಾನದಿಂದ ಬೇಸರಗೊಂಡಿರುವ ಪದಾಧಿಕಾರಿಗಳು  ಸಾಮೂಹಿಕ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಜೆಡಿಎಸ್ ಬೆಂಗಳೂರು ನಗರ ಘಟಕದ ಅಧ್ಯಕ್ಷ ಆರ್. ಪ್ರಕಾಶ್ ನಾಳೆ [ಬುಧವಾರ] ಸಂಜೆ 4ಕ್ಕೆ ತುರ್ತು ಸಭೆ ಕರೆದಿದ್ದಾರೆ.

Follow Us:
Download App:
  • android
  • ios