Asianet Suvarna News Asianet Suvarna News

ಬೆಳಗಾವಿ: ಸಾರ್ವಜನಿಕ ಪ್ರದೇಶದಲ್ಲಿ ಪೊಲೀ​ಸರ ಮುಂದೆಯೇ ಫೈರಿಂಗ್..!

ಬೆಳಗಾವಿ ಬೆಚ್ಚಿ​ಬೀ​ಳು​ವಂತಹ ಮತ್ತೊಂದು ಘಟನೆ ನಡೆ​ದಿದೆ. ವ್ಯಕ್ತಿ​ಯೊಬ್ಬ ಸಾವಿ​ರಾರು ಜನರ ಮಧ್ಯೆ ಬಹಿ​ರಂಗ​ವಾ​ಗಿಯೇ ರಿವಾ​ಲ್ವಾರ್‌ನಿಂದ ಫೈರಿಂಗ್‌ ಮಾಡಿ​ದ್ದಾನೆ. ಈ ಘಟ​ನೆ​ಯಿಂದ ನಗ​ರದ ಜನತೆ ಭೀತಿ​ಗೊ​ಳ್ಳು​ವಂತಾ​ಗಿದೆ. ಅಷ್ಟೇ ಅಲ್ಲ ಪಕ್ಕ​ದಲ್ಲಿ ಪೊಲೀ​ಸ​ರಿ​ದ್ದರೂ ಯಾವ ಕ್ರಮ ಕೂಡ ಕೈಗೊಂಡಿಲ್ಲ.

Belagavi man fired bullet into air
Author
Bangalore, First Published Aug 27, 2019, 11:02 AM IST

ಬೆಳಗಾವಿ(ಆ.27): ನಗ​ರದಲ್ಲಿ ಬೆಚ್ಚಿ​ಬೀ​ಳು​ವಂತಹ ಮತ್ತೊಂದು ಘಟನೆ ನಡೆ​ದಿದೆ. ವ್ಯಕ್ತಿ​ಯೊಬ್ಬ ಸಾವಿ​ರಾರು ಜನರ ಮಧ್ಯೆ ಬಹಿ​ರಂಗ​ವಾ​ಗಿಯೇ ರಿವಾ​ಲ್ವಾರ್‌ನಿಂದ ಫೈರಿಂಗ್‌ ಮಾಡಿ​ದ್ದಾನೆ. ಈ ಘಟ​ನೆ​ಯಿಂದ ನಗ​ರದ ಜನತೆ ಭೀತಿ​ಗೊ​ಳ್ಳು​ವಂತಾ​ಗಿದೆ.

ಅಷ್ಟೇ ಅಲ್ಲ ಪಕ್ಕ​ದಲ್ಲಿ ಪೊಲೀ​ಸ​ರಿ​ದ್ದರೂ ಯಾವ ಕ್ರಮ ಕೂಡ ಕೈಗೊಂಡಿಲ್ಲ. ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಶಸ್ತ್ರಾಸ್ತ್ರ ಪ್ರದರ್ಶಿಸಬಾರದೆಂಬ ನಿಯಮವಿದೆ. ಹೀಗಿ​ರು​ವಾಗ ಗುಂಡು ಹಾರಿ​ಸಿ​ದರೂ ಕ್ರಮ ಕೈಗೊ​ಳ್ಳದ ಪೊಲೀ​ಸ​ರಿಂದ ನಮಗೆ ರಕ್ಷಣೆ ಸಿಗಲು ಸಾಧ್ಯವೇ? ಎಂದು ಪ್ರಶ್ನಿ​ಸಿ​ಕೊಂಡಿ​ದ್ದಾರೆ ನಾಗ​ರಿ​ಕರು.

ನಡೆ​ದಿದ್ದು ಎಲ್ಲಿ, ಯಾವಾ​ಗ?:

ಆ.24ರಂದು ರಾತ್ರಿ 8 ಗಂಟೆ ಸುಮಾರಿಗೆ ಗುರುನಾನಕರ 550ನೇ ಜನ್ಮದಿನಾಚರಣೆ ಪ್ರಯುಕ್ತ ಪ್ರಕಾಶ ಯಾತ್ರೆ ಆಯೋಜಿಸಲಾಗಿತ್ತು. ಇದರಂಗವಾಗಿ ನಿಪ್ಪಾಣಿಯಿಂದ ಗೋವಾ ಕಡೆಗೆ ಹೊರಟಿದ್ದ ವಿಕಾಸ ಜ್ಯೋತಿ ಮೆರವಣಿಗೆಯಲ್ಲಿ ಈ ಘಟನೆ ನಡೆದಿದೆ. ನಗರದ ಚನ್ನಮ್ಮ ವೃತ್ತಕ್ಕೆ ಯಾತ್ರೆಯ ರೂಪಕವಾಹನ ಬರುತ್ತಿದ್ದಂತೆ ವ್ಯಕ್ತಿಯೋರ್ವ ಗುರುನಾನಕರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ್ದಾನೆ. ನಂತರ ಕುದುರೆ ಮೇಲೆ ಹೊರಟಿದ್ದ ವ್ಯಕ್ತಿಗೆ ಹೂವಿನ ಹಾರ ಹಾಕಿ, ತನ್ನ ಜೇಬಿ​ನಿಂದ ರಿವಾಲ್ವಾರ್‌ ತೆಗೆದು ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ.

ವಿಕಾಸ ಜ್ಯೋತಿ​ಯನ್ನು ಬರಮಾಡಿಕೊಳ್ಳಲು ಮಹಿಳೆ, ಮಕ್ಕಳು ಸೇರಿದಂತೆ ಸುಮಾರು 1200ಕ್ಕೂ ಹೆಚ್ಚು ಜನರು ನೆರೆದಿದ್ದರು. ಎಲ್ಲರೂ ಸಂಭ್ರಮಾಚರಣೆಯಲ್ಲಿ​ದ್ದರು. ಆಗ ಬಂದ ಗುಂಡಿನ ಶಬ್ದಕ್ಕೆ ಕುದುರೆ ಸಮೇತ ಇವ​ರೆ​ಲ್ಲರೂ ಬೆಚ್ಚಿ ಬಿದ್ದಿ​ದ್ದಾರೆ. ಅಲ್ಲದೆ ಕುದುರೆ ಮೇಲೆ ಕುಳಿತ ವ್ಯಕ್ತಿ ಕತ್ತಿಯನ್ನು ಪ್ರದ​ರ್ಶಿ​ಸಿ​ದ್ದಾ​ನೆ. ಜತೆಗೆ ಕತ್ತಿ​ಯಿಂದ ಮತ್ತಿ​ಬ್ಬರು ವ್ಯಕ್ತಿ​ಗ​ಳು ವರ​ಸೆ​ಯನ್ನೂ ಪ್ರದ​ರ್ಶನ ಮಾಡಿ​ದ್ದಾರೆ.

ಈ ಘಟ​ನೆಗೆ ಅಲ್ಲಿದ್ದ ಪೊಲೀಸರೂ ಸಾಕ್ಷಿಯಾಗಿದ್ದಾರೆ. ಅವರ ಸಮ್ಮುಖದಲ್ಲೇ ಇದು ನಡೆದು ಎರಡು ದಿನಗಳಾದರೂ ಯಾವುದೇ ಕ್ರಮಕೈಗೊಂಡಿಲ್ಲ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಮತ್ತೊಂದು ಘಟ​ನೆ:

ನಗರದಲ್ಲಿ ಯುವತಿಯೋರ್ವಳು ಬೆತ್ತಲೆಯಾಗಿ ಬೈಕ್‌ ಓಡಿಸಿರುವ ವಿಡಿಯೋ ಈಚೆ​ಗಷ್ಟೇ ವೈರಲ್‌ ಆಗಿತ್ತು. ಈ ಪ್ರಕರಣದಲ್ಲಿ ಯಾವುದೇ ಕ್ರಮಕೈಗೊಳ್ಳದೆ ಕೈಚೆಲ್ಲಿ ಕುಳಿತಿದ್ದ ಪೊಲೀಸರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿ​ದ್ದ​ರಿಂದ ಕ್ಯಾಂಪ್‌ ಪೊಲೀಸ್‌ ಠಾಣೆಯಲ್ಲಿ ಸ್ವಯಂ ಪ್ರೇರಿತ ದೂರು ದಾಖಲಾಗಿತ್ತು.

ಆದರೆ ಬೆತ್ತಲೆಯಾಗಿ ಬೈಕ್‌ ಓಡಿಸಿದ ಯುವತಿ ಮತ್ತು ಆಕೆಯ ಜತೆ​ಗಿದ್ದ ವ್ಯಕ್ತಿ ವಿರುದ್ಧ ಯಾವುದೇ ಕ್ರಮ ಕೈಗೊ​ಳ್ಳ​ಲಾ​ಗಿಲ್ಲ. ಕನಿಷ್ಠ ಪಕ್ಷ ಅವ​ರನ್ನು ಪತ್ತೆ ಹಚ್ಚಲೂ ಆಗಿಲ್ಲ. ಇಂತಹ ಸಂದ​ರ್ಭ​ದಲ್ಲಿ ಪೊಲೀಸರ ಸಮ್ಮುಖವೇ ಗಾಳಿಯಲ್ಲಿ ಗುಂಡು ಹಾರಿಸಿದ ಘಟನೆ ನಡೆದಿದೆ. ಇದು ಬೆಳಗಾವಿ ನಗರದ ಜನ​ರಲ್ಲಿ ಭೀತಿ ಹುಟ್ಟು​ವಂತೆ ಮಾಡಿದೆ. ಅದರ ಜತೆಗೆ ಪೊಲೀಸರ ಕಾರ್ಯ​ವೈ​ಖರಿ ಬಗ್ಗೆಯೂ ಬೇಸರ ವ್ಯಕ್ತ​ವಾ​ಗು​ವಂತೆ ಮಾಡಿದೆ.

Follow Us:
Download App:
  • android
  • ios