Asianet Suvarna News Asianet Suvarna News

ದೇವಾಲಯದ ಕಟ್ಟಡದ ಮೇಲೇರಿದ ಬಸವ!

ಬಸವಣ್ಣ ದೇವಾಲಯದ ಚಾವಣಿ ಮೇಲೆ ಏರಿ ತನ್ನ ಕೋಪ ತಾಪ ಪ್ರದರ್ಶನ ಮಾಡಿರುವ ಘಟನೆ ಚಾಮರಾಜನಗರದ ದೇವಾಲಯ ಒಂದರಲ್ಲಿ ನಡೆದಿದೆ. 

Basava Stands On Temple roof In Chamarajanagar
Author
Bengaluru, First Published Mar 17, 2020, 10:45 AM IST

ಚಾಮರಾಜನಗರ [ಮಾ.17]:  ಗ್ರಾಮದ ಬಸವ ದೇಗುಲದ ಮೇಲೇರಿ ಕೋಪ ತಾಪ ಪ್ರದರ್ಶಿಸಿದ ಘಟನೆ ಚಾಮರಾಜನಗರ ತಾಲೂಕಿನ ಹರದನಹಳ್ಳಿಯ ದಿವ್ಯಲಿಂಗೇಶ್ವರ ದೇಗುಲದಲ್ಲಿ ನಡೆದಿದೆ.

ಸೋಮವಾರ ನಡೆಯಬೇಕಿದ್ದ ದಿವ್ಯಲಿಂಗೇಶ್ವರ ಜಾತ್ರಾ ಮಹೋತ್ಸವವನ್ನು ಕೊರೋನಾ ವೈರಸ್‌ನಿಂದ ಮುಂದೂಡಲಾಗಿತ್ತು. ತೇರಿನ ಮುಂದೆ ಹೆಜ್ಜೆ ಹಾಕುತ್ತಿದ್ದ ಬಸವನನ್ನು ಈ ಬಾರಿ ಬಿಟ್ಟು ಉತ್ಸವಮೂರ್ತಿಯನ್ನು ಗ್ರಾಮದಲ್ಲಿ ಮೆರವಣಿಗೆ ಮಾಡಿ ದೇಗುಲಕ್ಕೆ ಹಿಂತಿರುಗುವಾಗ ದೇಗುಲದ ಛಾವಣಿ ಮೇಲೆ ಬಸವ ಗಂಭೀರವದನನ್ನಾಗಿ ನಿಂತಿದ್ದು ಕೆಲವರಲ್ಲಿ ಭಕ್ತಿ, ಆತಂಕ ಉಂಟು ಮಾಡಿತು.

ಕಾರವಾರ ದೇವರಿಗೆ ಮದ್ಯದ ಅಭಿಷೇಕ, ಸಿಗರೇಟಿನ ಆರತಿ : ಸಿದ್ಧಿಯಾಗುತ್ತೆ ಇಷ್ಟಾರ್ಥ...

ಛಾವಣಿ ಮೇಲೇರಲು ಜಾಗವಿದ್ದು ಆಗಾಗ್ಗೆ ಬಸವ ಹತ್ತುತ್ತಾನೆ. ಆದರೆ, ಈ ಬಾರಿ ಕೊರೊನಾ ಕಾರಣದಿಂದ ರಥೋತ್ಸವ ರದ್ದಾಗಿದ್ದರಿಂದ ಬಸವನನ್ನು ಕರೆದೊಯ್ದಿರಲಿಲ್ಲ, ದೇವರು ದೇಗುಲಕ್ಕೆ ಬರುವ ವೇಳೆಗೆ ಬಸವ ಛಾವಣಿ ಮೇಲೇರಿ ಸ್ವಾಗತ ಕೋರಿದ್ದಾನೆ ಎಂದು ಗ್ರಾಮಸ್ಧರು ತಿಳಿಸಿದರು. ನಂತರ ಬಸವನನ್ನು ಜೋಪಾನವಾಗಿ ಕೆಳಕ್ಕೆ ಇಳಿಸಲಾಯಿತು.

Follow Us:
Download App:
  • android
  • ios