Asianet Suvarna News Asianet Suvarna News

ಸ್ವಂತ ಹಣದಿಂದ ರಸ್ತೆಗೆ ಕಾಂಕ್ರಿಟ್‌ ಹಾಕಿಸಿದ ಎಎಸ್‌ಐ

  • ಗುಂಡಿ ಬಿದ್ದಿದ್ದ ಮೈಸೂರಿನ ಮಾದಾಪುರದ ರಸ್ತೆ
  • ಎಚ್‌.ಡಿ. ಕೋಟೆ ಎಎಸ್‌ಐ ದೊರೆಸ್ವಾಮಿ ಮತ್ತು ರಕ್ಷಣಾ ಟ್ರಸ್ಟ್‌ ಅಧ್ಯಕ್ಷೆ ಚಂದ್ರಿಕೆ ಸ್ವಂತ ಹಣದಿಂದ  ರಸ್ತೆ ರಿಪೇರಿ
  • ಸ್ವಂತ ಹಣದಿಂದ ಸಿಮೆಂಟ್‌ ಕಾಂಕ್ರಿಟ್‌ ಹಾಕಿಸಿ ಸರಿಪಡಿಸಿದ ಎಎಸ್‌ಐ
ASI Spends Own Money For Repair  Mysuru Madapura Road  snr
Author
Bengaluru, First Published Jul 9, 2021, 11:57 AM IST

ಮೈಸೂರು (ಜು.09):  ರಸ್ತೆ ಗುಂಡಿಬಿದ್ದಿದ್ದ ಮಾದಾಪುರ- ಕೆ. ಬೆಳತ್ತೂರು ಮುಖ್ಯರಸ್ತೆಯನ್ನು ಎಚ್‌.ಡಿ. ಕೋಟೆ ಎಎಸ್‌ಐ ದೊರೆಸ್ವಾಮಿ ಮತ್ತು ರಕ್ಷಣಾ ಟ್ರಸ್ಟ್‌ ಅಧ್ಯಕ್ಷೆ ಚಂದ್ರಿಕೆ ಸ್ವಂತ ಹಣದಿಂದ ಸಿಮೆಂಟ್‌ ಕಾಂಕ್ರಿಟ್‌ ಹಾಕಿಸಿ ಸರಿಪಡಿಸಿದ್ದಾರೆ.

ಎಎಸ್‌ಐ ದೊರೆಸ್ವಾಮಿ ಮಾತನಾಡಿ, ಪೊಲೀಸ್‌ ಇಲಾಖೆ ಕಾರ್ಯಕ್ರಮವಾದ ನಮ್ಮ ಗ್ರಾಮ- ನಮ್ಮ ಹೊಣೆ, ಮತ್ತು ಜನಸ್ನೇಹಿ ಪೊಲೀಸ್‌ ಅಡಿಯಲ್ಲಿ ಈ ರಸ್ತೆಯು ತಾಲೂಕಿನ ಪ್ರಸಿದ್ಧ ದೇವತೆ ಚಿಕ್ಕದೇವಮ್ಮನವರ ಬೆಟ್ಟಕ್ಕೆ ಸಂಪರ್ಕ ಕಲ್ಪಿಸುತ್ತಿದ್ದು ಪ್ರತಿದಿನ ಸಾವಿರಾರು ಜನರು ಸಂಚರಿಸುತ್ತಿರುವುದರಿಂದ ಎಲ್ಲರಿಗೂ ಅನುಕೂಲವಾಗಲೆಂದು ಈ ಕೆಲಸ ಮಾಡಿದ್ದೇವೆ ಎಂದರು.

ರಾತ್ರೋ ರಾತ್ರಿ 1 ಕಿ.ಮೀಟರ್ ರಸ್ತೆ ಕಳ್ಳತನ: ದೂರು ಕೊಟ್ಟ ಗ್ರಾಮಸ್ಥರು ...

ಇವರು ಕಳೆದ ವರ್ಷ ಕೊರೋನ ಸಂದಿಗ್ಧ ಕಾಲದಲ್ಲೂ ಸಹ ಅರ್ಹರಿಗೆ ಆಹಾರ ಕಿಟ್‌ ಹಾಗೂ ಮತ್ತಿತರ ಜನೋಪಯೋಗಿ ಕೆಲಸ ಮಾಡಿದ್ದರು. ಈಗ ಇವರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

Follow Us:
Download App:
  • android
  • ios