Asianet Suvarna News Asianet Suvarna News

ಮತ್ತೋರ್ವ ಅಂಬರೀಶ್ ಅಭಿಮಾನಿ ಆತ್ಮಹತ್ಯೆ

ಅಂಬಿ ನಿಧನದಿಂದ ರೈಲಿಗೆ ತಲೆಕೊಟ್ಟು ಅಭಿಮಾನಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ ಮತ್ತೊಬ್ಬ ಅಭಿಮಾನಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Another Ambareesh  fan Commits Suicide in Mandya
Author
Bengaluru, First Published Nov 26, 2018, 3:58 PM IST

ಮಂಡ್ಯ, (ನ.26): ಅಂಬಿ ನಿಧನದಿಂದ ರೈಲಿಗೆ ತಲೆಕೊಟ್ಟು ಅಭಿಮಾನಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ ಮತ್ತೊಬ್ಬ ಅಭಿಮಾನಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಪಾರ್ಥಿವ ಶರೀರದ ದರ್ಶನ ಬಳಿಕ ಸುರೇಂದ್ರ.ಜಿ.ಎಸ್ (46) ಎಂಬಾತ ನೇಣಿಗೆ ಶರಣಾಗಿದ್ದಾನೆ.

ಅಗಲಿದ ಅಂಬಿ: ರೈಲಿಗೆ ತಲೆಕೊಟ್ಟು ಅಭಿಮಾನಿ ಆತ್ಮಹತ್ಯೆ

ನಿನ್ನೆ (ಭಾನುವಾರ) ರಾತ್ರಿ ಮಂಡ್ಯದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಅಂಬಿ ದರ್ಶನ ಪಡೆದಿದ್ದ ಮದ್ದೂರು ತಾಲೂಕಿನ ಗೊರವನಹಳ್ಳಿ ಗ್ರಾಮದ ಸುರೇಂದ್ರ. ಮದ್ದೂರಿನಲ್ಲಿ ವಾಸವಿದ್ದ ಬಾಡಿಗೆ ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ.

ಅಂಬಿ ಮೇಲಿನ ಅಭಿಮಾನದಿಂದ ಹಲವು ವರ್ಷಗಳ ಹಿಂದೆಯೇ ತನ್ನ ಕೈ ಮೇಲೆ ಅಂಬಿ ಹೆಸರನ್ನು ಹಚ್ಚೆ ಹಾಕಿಸಿಕೊಂಡಿದ್ದ. ಆದರೆ, ಇದೀಗ ಅಂಬಿ ಅಗಲಿಕೆ ಸಹಿಸಲಾಗದೆ ನೇಣಿಗೆ ಶರಣಾಗಿದ್ದಾನೆ.

Follow Us:
Download App:
  • android
  • ios