ರಾಜರಾಜೇಶ್ವರಿ ನಗರ ವಲಯ ವ್ಯಾಪ್ತಿಯ ಸುಮ್ಮನಹಳ್ಳಿ ವಿದ್ಯುತ್‌ ಚಿತಾಗಾರವನ್ನು ಮೇ 4ರಿಂದ 10ರ ವರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಚಿಮಣಿಗಳು ಹಾಳಾದ ಹಿನ್ನೆಲೆ ಸ್ಥಗಿತವಾಗಿದೆ. 

ಬೆಂಗಳೂರು (ಮೇ.04): ತುರ್ತು ನಿರ್ವಹಣಾ ಕೆಲಸಗಳನ್ನು ಕೈಗೊಳ್ಳಬೇಕಾದ ಕಾರಣ ರಾಜರಾಜೇಶ್ವರಿ ನಗರ ವಲಯ ವ್ಯಾಪ್ತಿಯ ಸುಮ್ಮನಹಳ್ಳಿ ವಿದ್ಯುತ್‌ ಚಿತಾಗಾರವನ್ನು ಮೇ 4ರಿಂದ 10ರ ವರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುವುದು ಎಂದು ಬಿಬಿಎಂಪಿ ತಿಳಿಸಿದೆ.

Add Asianetnews Kannada as a Preferred SourcegooglePreferred

ಕೋವಿಡ್‌ ಸೋಂಕಿತರ ಶವಗಳನ್ನು ಸುಮ್ಮನಹಳ್ಳಿ ವಿದ್ಯುತ್‌ ಚಿತಾಗಾರದಲ್ಲಿ ನಿರಂತರವಾಗಿ ದಹಿಸುವ ಕಾರ್ಯ ನೆರವೇರಿಸಲಾಗುತ್ತಿತ್ತು. ಆದರೆ, ಇದೀಗ ಚಿತಾಗಾರದ ಎರಡು ಚಿಮಿಣಿಗಳು(ಫರ್ನೇಸ್‌) ಹಾಳಾಗಿದ್ದು ಹೊಸ ಫರ್ನೇಸ್‌ಗಳನ್ನು ಅಳವಡಿಸಬೇಕಿದೆ.

ಬೆಂಗಳೂರಲ್ಲಿ ಪ್ರಾಣಿಗಳಿಗೆ ಚಿತಾಗಾರ..! .

ಆದ್ದರಿಂದ ಏಳು ದಿನ ತಾತ್ಕಾಲಿಕವಾಗಿ ಚಿತಾಗಾರವನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ ಎಂದು ರಾಜರಾಜೇಶ್ವರಿ ನಗರ ವಲಯ ಕಾರ್ಯಪಾಲಕ ಅಭಿಯಂತರರು (ವಿದ್ಯುತ್‌) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುಮ್ಮನಹಳ್ಳಿ ವಿದ್ಯುತ್‌ ಚಿತಾಗಾರದಲ್ಲಿ ಪ್ರತಿದಿನ ಬೆಳಗ್ಗೆ 7ರಿಂದ ರಾತ್ರಿ 12ರವರೆಗೆ 25ರಿಂದ 30 ಕೋವಿಡ್‌ ಶವಗಳ ಅಂತ್ಯಸಂಸ್ಕಾರ ನೆರವೇರಿಸಲಾಗುತ್ತಿತ್ತು.