Asianet Suvarna News Asianet Suvarna News

ಕೊರೋನಾತಂಕ: ಕ್ವಾರಂಟೈನ್‌ನಲ್ಲಿದ್ದ 206 ಮಂದಿ ಪರಾರಿ, ಗೊಂದಲ

ಮಹಾರಾಷ್ಟ್ರ ಮುಂಬೈ ಸೇರಿ ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿದ ಜನರಿಗೆ ರಾಯಚೂರು ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಕ್ವಾರಂಟೈನ್‌| ಕ್ವಾರಂಟೈನ್‌ನಲ್ಲಿದ್ದ ಕೆಲವರು ತಪ್ಪು ಮೊಬೈಲ್‌ ಸಂಖ್ಯೆಗಳನ್ನು ನೀಡಿದ್ದರಿಂದ ಗೊಂದಲ ಸೃಷ್ಟಿ|

206 Persons Missing from Quarantine Center in Raichur district
Author
Bengaluru, First Published Jun 5, 2020, 8:55 AM IST

ರಾಯಚೂರು(ಜೂ.05): ಜಿಲ್ಲೆಯಲ್ಲಿ ಕ್ವಾರಂಟೈನ್‌ನಲ್ಲಿದ್ದ 206 ಜನರು ಪರಾರಿಯಾಗಿದ್ದಾರೆ ಎನ್ನುವ ಮಾಹಿತಿ ಗೊಂದಲ ಸೃಷ್ಟಿಸಿತ್ತು. ಆದರೆ ಇಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಎಸ್‌ಪಿ ವೇಧಮೂರ್ತಿ ಸ್ಪಷ್ಟಪಡಿಸಿದ್ದಾರೆ. 

ಮಹಾರಾಷ್ಟ್ರ ಮುಂಬೈ ಸೇರಿ ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿದ ಜನರನ್ನು ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಕ್ವಾರಂಟೈನ್‌ ಮಾಡಲಾಗಿತ್ತು. ಕ್ವಾರಂಟೈನ್‌ನಲ್ಲಿದ್ದ ಕೆಲವರು ತಪ್ಪು ಮೊಬೈಲ್‌ ಸಂಖ್ಯೆಗಳನ್ನು ನೀಡಿದ್ದರಿಂದ ಈ ಗೊಂದಲ ಸೃಷ್ಟಿಯಾಗಿತ್ತು. ಸದ್ಯ ತಿಳಿಯಾಗಿದೆ ಎನ್ನಲಾಗಿದೆ. 

ಕೊರೋನಾ ಕಾಟ: ರಾಜ್ಯದಲ್ಲಿ ಮಹಾರಾಷ್ಟ್ರದಿಂದಲೇ 2561 ಸೋಂಕು!

ಬೆಂಗಳೂರಿನಿಂದ ನಡೆಸಿದ ಬಯೋ ಫೇನ್ಚಿಂಗ್‌ನಲ್ಲಿ ಈ ಮಾಹಿತಿ ಲಭ್ಯವಾಗಿತ್ತು. ಈ ಸುದ್ದಿ ಹರಡುತ್ತಿದ್ದಂತೆ ಆಡಳಿತ ವರ್ಗ ಹಾಗೂ ಜನಸಾಮಾನ್ಯರು ಆತಂಕಗೊಂಡಿದ್ದರು.
 

Follow Us:
Download App:
  • android
  • ios