ಖೋಟಾ ನೋಟು ಚಲಾವಣೆಗೆ ಯತ್ನಿಸಿದ ಇಬ್ಬರ ಬಂಧನ/ ವಿಜಯಪುರ ಜಿಲ್ಲೆಯ  ಪಾನ್ ಶಾಪ್ ನಲ್ಲಿ ಬಂಧನ/ ಎಲ್ಲಿಂದ ಬಂತು ನಕಲಿ ನೋಟು?

ವಿಜಯಪುರ[ಸೆ. 15]  ಖೋಟಾ ನೋಟು ಚಲಾವಣೆಗೆ ಯತ್ನಿಸಿದ ಆರೋಪಿಗಳಿಬ್ಬರನ್ನು ಬಂಧಿಸಲಾಗಿದೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಗ್ರಾಮದ ಪಾನ್ ಶಾಪ್ ನಲ್ಲಿ ಖೋಟಾ ನೋಟು ಚಲಾವಣೆಗೆ ಯತ್ನ ನಡೆಸಿದಾಗ ಬಂಧನ ಮಾಡಲಾಗಿದೆ.

Add Asianetnews Kannada as a Preferred SourcegooglePreferred

ವಿಜಯಪುರದ ಬಸವನಬಾಗೇವಾಡಿಯ ಇಂದಿರಾ ನಗರದ ನಿವಾಸಿಗಳಾದ ಸುಮನ್ ಬಂಗಾರಿ, ಸೋಹೆಲ್ ಇನಾಂದಾರ್ ಬಂಧಿತರು. 100 ರೂಪಾಯಿ ಮುಖಬೆಲೆಯ 4500 ನಕಲಿ ನೋಟು ಜಪ್ತಿ ಮಾಡಲಾಗಿದೆ.

ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗ್ರಾಮೀಣ ಭಾಗಕ್ಕೂ ಈ ಖೋಟಾ ನೋಟು ಹಾವಳಿ ಕಾಲಿಟ್ಟಿದ್ದು ಸಹಜವಾಗಿ ಆತಂಕ ತಂದಿದೆ.