2 ದಿನ ವಿಜಯನಗರ - ಮೈಸೂರು ಮಾರ್ಗದ ಮೆಟ್ರೋ ಸಂಚಾರವಿಲ್ಲ
- ನಾಯಂಡಹಳ್ಳಿ - ಕೆಂಗೇರಿ ಮೆಟ್ರೊ ಮಾರ್ಗದ ಸುರಕ್ಷತಾ ಪರಿಶೀಲನೆ
- ವಿಜಯನಗರ ಮತ್ತು ಮೈಸೂರು ಮಾರ್ಗದ ಮಧ್ಯೆ ಬುಧವಾರ ಮತ್ತು ಗುರುವಾರ ಮೆಟ್ರೊ ಸಂಚಾರ ಇರುವುದಿಲ್ಲ
ಬೆಂಗಳೂರು (ಆ.11): ನಾಯಂಡಹಳ್ಳಿ - ಕೆಂಗೇರಿ ಮಾರ್ಗದ ಸುರಕ್ಷತಾ ಪರಿಶೀಲನೆ ನಡೆಯಲಿರುವ ಹಿನ್ನೆಲೆಯಲ್ಲಿ ವಿಜಯನಗರ ಮತ್ತು ಮೈಸೂರು ಮಾರ್ಗದ ಮಧ್ಯೆ ಬುಧವಾರ ಮತ್ತು ಗುರುವಾರ ಮೆಟ್ರೊ ಸಂಚಾರ ಇರುವುದಿಲ್ಲ. ಶುಕ್ರವಾರದ ಬಳಿಕ ಯಥಾ ಪ್ರಕಾರ ಮೆಟ್ರೊ ಸಂಚಾರ ಸೇವೆ ಇರಲಿದೆ.
ನಾಯಂಡಹಳ್ಳಿ ಮಾರ್ಗದಲ್ಲಿ ಮೆಟ್ರೋದ ಪ್ರಾಯೋಗಿಕ ಮತ್ತು ಪರಿಕ್ಷಾರ್ಥ ಓಡಾಟ ನಡೆಯುತ್ತಿದ್ದು ವಾಣಿಜ್ಯ ಬಳಕೆಗೆ ಅನುಮರಿ ಸಿಗಲು ಸುರಕ್ಷತಾ ಅಯುಕ್ತರು ಪರಿಶೀಲನೆ ನಡೆಸಲಿದ್ದಾರೆ.
ನೈಟ್ ಕರ್ಫ್ಯೂ: ಬೆಂಗಳೂರು ನಮ್ಮ ಮೆಟ್ರೋ ರೈಲು ಸಂಚಾರ ಸಮಯ ಬದಲಾವಣೆ
ಮಾರ್ಗದ ಪರಿಶೀಲನೆ ನಡೆಸಿ ಪ್ರಮಾಣ ಪತ್ರ ನೀಡುವುದು ಕಡ್ಡಾಯ. ಈ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ಸುರಕ್ಷತಾ ಪರಿಶೀಲನೆ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಜಯನಗರ ಮತ್ತು ಬೈಯಪ್ಪನಹಳ್ಳಿ ನಾಗಸಮದ್ರ ರೇಷ್ಮೆ ಸಂಸ್ತೆಯ ನಡುವಿನ ಮಾರ್ಗದ ಮೆಟ್ರೋ ಇರಲಿದೆ.