Asianet Suvarna News Asianet Suvarna News

ಹಗರಿಬೊಮ್ಮನಹಳ್ಳಿ: ಗುಡುಗು ಸಹಿತ ಭಾರೀ ಮಳೆ, ಸಿಡಿಲು ಬಡಿದು 19 ಕುರಿಗಳ ದುರ್ಮರಣ

ಸಿಡಿಲು ಬಡಿದು 19 ಕುರಿಗಳು ಸಾವು| ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ದಶಮಾಪುರದಲ್ಲಿ ನಡೆದ ಘಟನೆ| ಕುರಿ ಮಾಲೀಕರಿಗೆ ಭಾರೀ ನಷ್ಟ| 

19 Sheeps Dead for Thunderbolt in Hagaribommanahalli in Ballari district
Author
Bengaluru, First Published May 17, 2020, 10:18 AM IST

ಹಗರಿಬೊಮ್ಮನಹಳ್ಳಿ(ಮೇ.17): ಗುಡುಗು ಸಿಡಿಲಿನಿಂದ ಕೂಡಿದ ಮಳೆ ಆರಂಭವಾಗಿ, ತಾಲೂಕಿನ ದಶಮಾಪುರದಲ್ಲಿ ಸಿಡಿಲು ಬಡಿದು 19 ಕುರಿಗಳು ದುರ್ಮರಣ ಹೊಂದಿದ ಘಟನೆ ಶನಿವಾರ ಸಂಜೆ 4.30ಕ್ಕೆ ನಡೆದಿದೆ.

ತಾಲೂಕಿನ ದಶಮಾಪುರ ಕೆರೆಯ ಮುಂಭಾಗದಲ್ಲಿ ಇದ್ದ, ಹಿರೇ ಬಾಲಪ್ಪನವರ ಬೊಪಯ್ಯನವ​ರ ಕುರಿ ಮತ್ತು ಒಂದು ಮೇಕೆ, ಬೋಸಯ್ಯನಿಗೆ ಸೇರಿದ 11 ಕುರಿ ಹಿಂಡುಗಳ ನಡುವೆ ಸಿಡಿಲು ಬಡಿದು, 18 ಕುರಿಗಳು ಒಂದು ಮೇಕೆ ಸೇರಿ 19 ಸಾವನ್ನಪ್ಪಿವೆ.

ಬಳ್ಳಾರಿ: ಕ್ವಾರಂಟೈನ್‌ನಲ್ಲಿದ್ದ ಮಹಿಳೆ ಸಾವು, ಕಾರಣ..?

ಹಾನಿ ಅಂದಾಜು ಮೊತ್ತ 1 ಲಕ್ಷ ರು. ಆಗಲಿದೆ ಎಂದು ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ತಿಳಿಸಿದರು. ಪಶುವೈದ್ಯ ಡಾ. ಪ್ರವೀಣ್‌, ಎಎಸ್‌ಐ ಸುಬ್ಬಯ್ಯ, ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
 

Follow Us:
Download App:
  • android
  • ios