ಚಾಮರಾಜನಗರ ಜಿಲ್ಲೆ ಮಲೈಮಹದೇಶ್ವರ ಬೆಟ್ಟದಲ್ಲಿ 5.18 ಕೋಟಿ ರೂ ಬಾಡಿಗೆ ಬಾಕಿ ಉಳಿಸಿಕೊಂಡಿದ್ದ 18 ಅಂಗಡಿ ಮಳಿಗೆಗಳಿಗೆ ಬೀಗಮುದ್ರೆ ಹಾಕಲಾಗಿದೆ.
ಚಾಮರಾಜನಗರ (ಮಾ.29): ಚಾಮರಾಜನಗರ ಜಿಲ್ಲೆ ಮಲೈಮಹದೇಶ್ವರ ಬೆಟ್ಟದಲ್ಲಿ 5.18 ಕೋಟಿ ರೂ ಬಾಡಿಗೆ ಬಾಕಿ ಉಳಿಸಿಕೊಂಡಿದ್ದ 18 ಅಂಗಡಿ ಮಳಿಗೆಗಳಿಗೆ ಬೀಗಮುದ್ರೆ ಹಾಕಲಾಗಿದೆ.
Add Asianetnews Kannada as a Preferred Source

ಅಂಗಡಿ ಮಳಿಗೆಗಳನ್ನು ಬಾಡಿಗೆಗೆ ಟೆಂಡರ್ ಪಡೆದಿದ್ದ ವ್ಯಾಪಾರಿಗಳು ಅವಧಿ ಮುಗಿದರು ಖಾಲಿ ಮಾಡದೆ ಮುಂದುವರಿದಿದ್ದರು. ಇದಲ್ಲದೆ ಕೊರೋನಾ ಹಿನ್ನಲೆಯಲ್ಲಿ ಮಲೈಮಹದೇಶ್ವರ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರ 20 ತಿಂಗಳ ಬಾಡಿಗೆಯನ್ನೂ ಮನ್ನಾ ಮಾಡಿತ್ತು.
ಚಾಮರಾಜನಗರ: ಮಲೆ ಮಹದೇಶ್ವರ ದೇವಸ್ಥಾನದ ಹುಂಡಿಯಲ್ಲಿ 1.5 ಕೋಟಿ ಸಂಗ್ರಹ ...
ಆದರೂ ಸಹ 5.18 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದ್ದರು. ಈ ಹಿನ್ನಲೆಯಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ 18 ಅಂಗಡಿಗಳಿಗೆ ಬೀಗಮುದ್ರೆ ಹಾಕಲಾಗಿದೆ.
