Asianet Suvarna News Asianet Suvarna News

ಮೈಸೂರು : ರಾಜೀನಾಮೆ ನೀಡಲು ಸಜ್ಜಾದ 100 ಮುಖಂಡರು

ಪಕ್ಷವನ್ನು ಬಲಪಡಿಸುವ ಉದ್ದೇಶದಿಂದ ಮಹತ್ವದ ಸಭೆ ಕರೆಯಲಾಗಿದೆ. ಸೆ.5 ರಂದು ಸಭೆ ನಡೆಯಲಿದೆ. ಇನ್ನು ಇದೇ ವೇಳೆ 100 ಮುಖಂಡರು ರಾಜೀನಾಮೆಗೆ ಮುಂದಾಗಿದ್ದಾರೆ. 

100 BSP Leaders Ready To Quit BSP in Mysuru Division
Author
Bengaluru, First Published Sep 4, 2019, 3:32 PM IST

ಮೈಸೂರು (ಸೆ.04): ಬಿಎಸ್ಪಿಯ ಮೈಸೂರು ವಲಯ, ವಿಭಾಗ, ಜಿಲ್ಲಾ ಹಾಗೂ ತಾಲೂಕು ಸಮಿತಿ ಗಳನ್ನು ಪುನರ್ ರಚಿಸಲು ಸೆ.5ರಂದು ಬೆಳಗ್ಗೆ 11 ಕ್ಕೆ ಪುರಭವನದಲ್ಲಿ ಪಕ್ಷ ದ ಸಭೆ ಕರೆಯಲಾಗಿದೆ. 

ಆದ್ದರಿಂದ ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು, ಹಾಸನ, ಚಿಕ್ಕಮಗಳೂರು, ಉಡುಪಿ, ಮಂಗಳೂರು ಜಿಲ್ಲೆಗಳ ಮತ್ತು ಈ ವ್ಯಾಪ್ತಿಯ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಪಕ್ಷದ ಎಲ್ಲಾ ಮಾಜಿ ಮತ್ತು ಹಾಲಿ ಪದಾಧಿಕಾರಿಗಳು, ಮುಖಂಡ ರು ಮತ್ತು ಕಾರ್ಯಕರ್ತರು ತಪ್ಪದೆ ಪಾಲ್ಗೊಳ್ಳಬೇಕು ಎಂದು ರಾಜ್ಯಾಧ್ಯಕ್ಷ ಎಂ. ಕೃಷ್ಣಮೂರ್ತಿ ತಿಳಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇಂದು 100 ಮಂದಿ ರಾಜೀನಾಮೆ: ಬಿಎಸ್ಪಿ ಮೈಸೂರು ವಲಯದ ಉಸ್ತುವಾರಿಗಳಾಗಿದ್ದ ಸೋಸಲೆ ಸಿದ್ದರಾಜು, ಭೀಮನಹಳ್ಳಿ ಸೋಮೇಶ್, ರಾಹುಲ್, ಜಿಲ್ಲಾಧ್ಯಕ್ಷ ಕೆ.ಎನ್. ಪ್ರಭುಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರತಾಪ್, ನಗರಾಧ್ಯಕ್ಷ ಬಸವರಾಜು, ಮತ್ತಿತರರು ರಾಜೀನಾಮೆ ನೀಡಲು ಸಿದ್ಧರಾಗಿದ್ದು, ಸಭೆಯಲ್ಲಿ ಕಾರಣ ನೀಡಲಿದ್ದಾರೆ. 

Follow Us:
Download App:
  • android
  • ios