Asianet Suvarna News Asianet Suvarna News

‘ಯಾವಾಗ?‘ ಪಿಎಂಗೆ ಸಿಎಂ ಪ್ರಶ್ನೆ

ರಾಷ್ಟ್ರೀಯ ನಾಯಕರ ಪ್ರವೇಶದೊಂದಿಗೆ  ರಾಜ್ಯದ ವಿಧಾನಸಭಾ ಚುನಾವಣಾ ಅಖಾಡ ಅಗ್ನಿಕುಂಡದಂತಾಗಿದೆ. ನಾಯಕರ ಭಾಷಣದಲ್ಲಿ ಆರೋಪ-ಪ್ರತ್ಯಾರೋಪಗಳಾದರೆ, ಸೋಶಿಯಲ್ ಮೀಡಿಯಾದದಲ್ಲಿ ಸವಾಲುಗಳದ್ದೇ ಆಟ.  ಕರ್ನಾಟಕ ಪ್ರವಾಸದಲ್ಲಿರುವ ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.  

When Asks CM Siddaramaiah To PM Modi

ರಾಷ್ಟ್ರೀಯ ನಾಯಕರ ಪ್ರವೇಶದೊಂದಿಗೆ  ರಾಜ್ಯದ ವಿಧಾನಸಭಾ ಚುನಾವಣಾ ಅಖಾಡ ಅಗ್ನಿಕುಂಡದಂತಾಗಿದೆ. ನಾಯಕರ ಭಾಷಣದಲ್ಲಿ ಆರೋಪ-ಪ್ರತ್ಯಾರೋಪಗಳಾದರೆ, ಸೋಶಿಯಲ್ ಮೀಡಿಯಾದದಲ್ಲಿ ಸವಾಲುಗಳದ್ದೇ ಆಟ.  ಕರ್ನಾಟಕ ಪ್ರವಾಸದಲ್ಲಿರುವ ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.  

‘ಯಾವಾಗ’ ಎಂಬ ಒಕ್ಕಣೆಯೊಂದಿಗೆ ಆರಂಭಿಸಿರುವ ಸಿಎಂ ಸಿದ್ದರಾಮಯ್ಯ, ಕನ್ನಡ ಧ್ವಜಕ್ಕೆ ಅಂಗೀಕಾರ ಯಾವಾಗ ನೀಡುತ್ತೀರಿ? ಕನ್ನಡಿಗ-ಪರ ಬ್ಯಾಂಕಿಂಗ್ ಪರೀಕ್ಷೆಗಳಿಗೆ ನಿಯಮಗಳನ್ನು ಯಾವಾಗ ರೂಪಿಸುತ್ತೀರಿ? ಮಹಾದಾಯಿ ವಿಚಾರದಲ್ಲಿ ಮಧ್ಯಸ್ಥಿಕೆ ಯಾವಾಗ ವಹಿಸುತ್ತೀರಿ? ಎಸ್‌ಡಿಆರ್‌ಎಫ್ ಪರಿಷ್ಕರಣೆ ಯಾವಾಗ ಮಾಡುತ್ತೀರಿ, ರಾಜ್ಯದ ರತ್ನವಾಗಿರುವ ಬಿಇಎಂಎಲ್‌ನ ಬಂಡವಾಳ ಹಿಂತೆಗೆತವನ್ನು ಯಾವಗಾ ನಿಲ್ಲಿಸುತ್ತೀರಿ, ರಫೇಲ್ ಡೀಲ್‌ನಿಂದ ಎಚ್‌ಎಎಲ್‌ಗೆ ಆಗಿರುವ ಅನ್ಯಾಯವನ್ನು ಯಾವಾಗ ಸರಿಪಡಿಸುತ್ತೀರಿ? ಎಂದು ಪ್ರಶ್ನಿಸಿದ್ದಾರೆ.  

Follow Us:
Download App:
  • android
  • ios